ಮಾಧವ-ಮಾನವ ಸೇವೆಯಿಂದ ಬದುಕು ಸಾರ್ಥಕ
ಭುವನೇಂದ್ರ ಕಿದಿಯೂರು ಅಭಿನಂದಿಸಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು
Team Udayavani, Jul 22, 2019, 5:00 AM IST
ಉಡುಪಿ: ಜೀವನದಲ್ಲಿ ಸಾರ್ಥಕ್ಯ ಪಡೆಯಬೇಕಾದರೆ ದೇಹದ ಜತೆಗೆ ದೇವರು ಮತ್ತು ದೇಶವನ್ನು ಕೂಡ ಪ್ರೀತಿಸಬೇಕು. ಶ್ರೀಕೃಷ್ಣನ ಸೇವೆಯಲ್ಲಿ ತನ್ನನ್ನು ಅರ್ಪಿಸಿಕೊಂಡ ಭುವನೇಂದ್ರ ಕಿದಿಯೂರು ಅವರು ಮಾಧವ ಮತ್ತು ಮಾನವನ ಸೇವೆಯಲ್ಲಿ ಸಾರ್ಥಕ್ಯ ಕಾಣುತ್ತಿದ್ದಾರೆ ಎಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಹಿರಿಯ ಉದ್ಯಮಿ, ದಾನಿ, ಧಾರ್ಮಿಕ, ಸಾಮಾಜಿಕ ಮುಂದಾಳು ಭುವನೇಂದ್ರ ಕಿದಿಯೂರು ಅವರ75ನೇ ಸಂವತ್ಸರ ಪ್ರಯುಕ್ತ ಅಭಿನಂದನಸಮಿತಿ ವತಿಯಿಂದ ಜರಗಿದ ‘ರತ್ನೋತ್ಸವ- ಅಭಿನಂದನ ಸಮಾರಂಭ’ದಲ್ಲಿ ಕಿದಿಯೂರು ಅವರನ್ನು ಅಭಿನಂದಿಸಿ ಪೇಜಾವರ ಶ್ರೀಗಳು ಅನುಗ್ರಹ ಸಂದೇಶ ನೀಡಿದರು.
ಭಗವಂತನಿಗೆ ಅಂಟಿಕೊಂಡರೆ ನಿರ್ಭಯ
ಸಂಸಾರವೆಂಬುದು ಬೀಸುವ ಕಲ್ಲಿನಂತೆ. ಕಲ್ಲುಗಳ ನಡುವೆ ಸಿಲುಕಿದ ಧಾನ್ಯಗಳು ಪುಡಿಯಾಗುತ್ತವೆ. ಆದರೆಅದರ ಗೂಟಕ್ಕೆ ಅಂಟಿಕೊಂಡ ಧಾನ್ಯಗಳು ಪುಡಿಯಾಗದೆ ಉಳಿಯುತ್ತವೆ. ಅಂತೆಯೇ ಸಂಸಾರದ ಘರ್ಷಣೆಯಲ್ಲಿಯೂ ಮನುಷ್ಯರು ನುಚ್ಚುನೂರು ಆಗಬಹುದು. ಇಹದಲ್ಲಿ ಭಗವಂತನೇನಮಗೆ ಗೂಟ. ಅವನನ್ನು ಅಪ್ಪಿಕೊಂಡರೆ ನಮಗೆ ಭಯವಿಲ್ಲ. ದೇವರಿಂದ ದೂರ ಹೋದಂತೆ ಪುಡಿಯಾಗುವ ಪಾಡು ನಮ್ಮದಾಗುತ್ತದೆ ಎಂದು ಶ್ರೀಗಳು ಹೇಳಿದರು.
ಹಣ ಸಮಾಜಕ್ಕೆ ವಿನಿಯೋಗ
ದೋಣಿ ಸಾಗಲು ನೀರು ಬೇಕು. ಆದರೆ ಅದು ದೋಣಿಯೊಳಗೆ ಬಂದರೆಅಪಾಯ. ಒಳಸೇರಿದ ನೀರು ಹೆಚ್ಚಾದರೆ ದೋಣಿ ಮುಳುಗಬಹುದು. ಅದನ್ನು ಹೊರಗೆ ಚೆಲ್ಲಬೇಕು. ಅಂತೆಯೇ ಮನೆ ನಡೆಯಲು ಹಣಬೇಕಾದರೂ ಹೆಚ್ಚು ಕೂಡಿ ಹಾಕಿದರೆ ತೊಂದರೆ. ಅದನ್ನು ಸಮಾಜಕ್ಕೆ ವಿನಿಯೋಗಿಸಿದರೆ ಯಾವ ತೊಂದರೆಯೂ ಇಲ್ಲ ಎಂದು ಶ್ರೀಗಳು ಹೇಳಿದರು.
ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಉಡುಪಿ ಮದರ್ ಆಫ್ ಸಾರೋಸ್ ಚರ್ಚ್ ಧರ್ಮಗುರು ರೆ|ಫಾ| ವಲೇರಿಯನ್ ಮೆಂಡೋನ್ಸಾ ಶುಭ ಕೋರಿದರು. ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಣಿಪಾಲ ಮೀಡಿಯಾ ನೆಟ್ವರ್ಕ್ ಲಿ.ನ ಆಡಳಿತ ನಿರ್ದೇಶಕ ಟಿ. ಸತೀಶ್ ಯು. ಪೈ, ‘ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಕೋಟ ಗೀತಾನಂದ ಫೌಂಡೇಶನ್ ಅಧ್ಯಕ್ಷ ಆನಂದ ಸಿ.ಕುಂದರ್, ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಶುಭ ಹಾರೈಸಿದರು. ಭುವನೇಂದ್ರ ಕಿದಿಯೂರು ಅವರ ಪತ್ನಿ ಹೀರಾ ಭುವನೇಂದ್ರ ಕಿದಿಯೂರು ಅವರು ಉಪಸ್ಥಿತರಿದ್ದರು. ಜ್ಯೋತಿಷಿ ಕಬಿಯಾಡಿ ಜಯರಾಮ ಆಚಾರ್ಯ ಅಭಿನಂದನ ಭಾಷಣ ಮಾಡಿದರು.
ಅಭಿನಂದನ ಸಮಿತಿ ಅಧ್ಯಕ್ಷ ಡಾ| ಜಿ.ಶಂಕರ್ ಸ್ವಾಗತಿಸಿ, ಹರಿಯಪ್ಪ ಕೋಟ್ಯಾನ್ಪ್ರಸ್ತಾವನೆಗೈದರು. ಮುರಲಿ ಕಡೆಕಾರ್ಕಾರ್ಯಕ್ರಮ ನಿರ್ವಹಿಸಿ ಗಣೇಶ್ ರಾವ್ವಂದಿಸಿದರು. ವಾಸುದೇವ ಭಟ್ ಪೆರಂಪಳ್ಳಿ ಅಭಿನಂದನ ಪತ್ರ ವಾಚಿಸಿದರು. ಹಾರಾರ್ಪಣೆ ಪಟ್ಟಿಯನ್ನು ರಮೇಶ್ ಕಿದಿಯೂರು ವಾಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ