ಮಧ್ವರ ಪ್ರಜಾಪ್ರಭುತ್ವ ಪ್ರಯೋಗ: ಮೊಯ್ಲಿ ವಿಶ್ಲೇಷಣೆ


Team Udayavani, May 19, 2017, 12:53 PM IST

Krishna-matha1.jpg

ಉಡುಪಿ: ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಪ್ರಜಾಪ್ರಭುತ್ವದ ಪ್ರಯೋಗ ಸಾಧ್ಯ ಎನ್ನುವುದನ್ನು ಉಡುಪಿ ಶ್ರೀಕೃಷ್ಣ ಮಠದ ಮೂಲಕ ಶ್ರೀ ಮಧ್ವಾಚಾರ್ಯರು ತೋರಿಸಿಕೊಟ್ಟಿರುವುದು ವಿಶೇಷ ಎಂದು ಮಾಜಿ ಮುಖ್ಯಮಂತ್ರಿ, ಸಾಹಿತಿ ಡಾ| ಎಂ. ವೀರಪ್ಪ ಮೊಯ್ಲಿ  ಹೇಳಿದರು.

ಶ್ರೀಕೃಷ್ಣ ಮಠದ ಸುತ್ತುಪೌಳಿ ನವೀಕರಣದ ಅಂಗವಾಗಿ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನೇಕ ಸಿದ್ಧಾಂತಗಳಲ್ಲಿ ಗೊಂದಲಗಳಿದ್ದಾಗ ಗೊಂದಲಗಳಿಲ್ಲದ, ನಿಖರವಾದ ನಿರ್ಣಯಗಳನ್ನು ಮಧ್ವರು ನೀಡಿದರು. ಉದಾಹರಣೆಗೆ ದುಶಾÏಸನ ಪ್ರಸಂಗ, ವಾಲಿ ವಧೆ, ಶಂಭೂಕ ವಧೆಯಲ್ಲಿ ಕೊಟ್ಟ ನಿರ್ಣಯಗಳು. ಇಲ್ಲಿ ಪಾರದರ್ಶಕತೆ ಎದ್ದು ಕಾಣು ತ್ತದೆ. ಇವರ ಕೃತಿಗಳನ್ನು ವಿಮಶಾìತ್ಮಕವಾಗಿ ನಾನು ಅವಲೋಕನ ಮಾಡಿದಾಗ ಇವರ ಜ್ಞಾನದ ಖನಿಯ ಉತVನನ ಇನ್ನಷ್ಟು ನಡೆಯಬೇಕಾಗಿದೆ ಎಂದೆನಿಸುತ್ತದೆ ಎಂದರು.

ಭಾರತ-ಈಜಿಪ್ಟ್: ಅಂದು ಇಂದು
ಈಜಿಪ್ಟ್ಗೆ ಹೋದಾಗ ಸುಮಾರು 3,000 ವರ್ಷಗಳ ಹಿಂದಿನ ಮಾನವ ಶರೀರ ಕೆಡದಂತೆ ಉಳಿದ ಪಿರಮಿಡ್‌ ತಂತ್ರಜ್ಞಾನವನ್ನು ನೋಡಿದೆ. ಆಗಿನ ಉಡುಗೆತೊಡುಗೆ, ಭಾಷೆ, ಆಹಾರ, ಜೀವನ ಶೈಲಿ ಈಗ ಇದೆಯೆ ಎಂದು ಕೇಳಿದರೆ ಬೇರೆ ನಾಗರಿಕರ ದಾಳಿಯಿಂದ ಎಲ್ಲವೂ ಹೋಗಿದೆ ಎಂದರು. ಮಹಾಭಾರತದಲ್ಲಿ ದ್ರೌಪದಿ ಪ್ರಕರಣದಲ್ಲಿ ಸೀರೆ ಎಂಬ ಶಬ್ದ ಸಿಗುತ್ತದೆ. ಈಗ ಮಹಿಳೆಯರು ಏನು ಉಡುತ್ತಿದ್ದಾರೆ? ರಾಮ ಲಂಕೆಗೆ ಹೋಗುವಾಗ ಶಿವಲಿಂಗಕ್ಕೆ ಪೂಜೆ ಮಾಡಿ ಹೋದ. ಈಗಲೂ ಶಿವಲಿಂಗ ಪೂಜೆ ನಡೆಯುತ್ತಿದೆ. ಸಂಸ್ಕೃತ ಭಾಷೆ ಇಂದಿಗೂ ಉಳಿದುಕೊಂಡಿದೆ. ಬೇರೆಲ್ಲಾ ದೇಶಗಳ ನಾಗರಿಕತೆಗಳು ನಾಶಗೊಂಡರೂ ಭಾರತದಲ್ಲಿ ಮಾತ್ರ ಪರಕೀಯರ ಆಕ್ರಮಣದ ನಡುವೆಯೂ ಸ್ಥಳೀಯ ಸಂಸ್ಕೃತಿ ಉಳಿದುಕೊಂಡು ಬಂದಿದೆ ಎಂದು ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅಭಿಪ್ರಾಯಪಟ್ಟರು. 

ಶ್ರೀ ಪೇಜಾವರ ಮಠದ ಉಭಯ ಶ್ರೀಪಾದರು, ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪ್ರಯಾಗ ಮಠದ ಶ್ರೀಗಳು ಆಶೀರ್ವ ಚನ ನೀಡಿದರು. ಉಚ್ಚ ನ್ಯಾಯಾಲಯದ ನ್ಯಾಯಾ ಧೀಶ ನ್ಯಾ| ದಿನೇಶ ಕುಮಾರ್‌ ಶುಭ ಕೋರಿದರು. ವಿಧಾನ ಪರಿಷತ್‌ ಸದಸ್ಯರಾದ ಕ್ಯಾ| ಗಣೇಶ ಕಾರ್ಣಿಕ್‌, ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು. ವಿದ್ವಾಂಸ ಡಾ| ಪ್ರಭಂಜನ ವ್ಯಾಸನಕೆರೆ ಉಪನ್ಯಾಸ ನೀಡಿದರು. ಬದರೀನಾಥಾಚಾರ್ಯ, ವಾಸುದೇವ ಭಟ್‌ ಪೆರಂಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು. 

ದ್ರೌಪದಿ ಕಾವ್ಯಕ್ಕೆ ಮಧ್ವರ ಪ್ರೇರಣೆ
ಮಧ್ವಾಚಾರ್ಯರು ಸ್ತ್ರೀಯರ ಕುರಿತು ವಿಶೇಷ ಗೌರವ ತಾಳಿದ್ದರು. ಅವರು ದ್ರೌಪದಿ ಕುರಿತು ನೀಡಿದ ನಿರ್ಣಯಗಳು ತನ್ನ “ಸಿರಿಮುಡಿ ಪರಿ ಕ್ರಮಣ’ (ದ್ರೌಪದಿ) ಕಾವ್ಯಕ್ಕೆ  ಪ್ರೇರಣೆಯಾಗಿವೆ. ಮುಂದೆ ನನ್ನ ಜೈನ ಧರ್ಮದ ಬಾಹುಬಲಿ ಕಾವ್ಯ ಡಿಸೆಂಬರ್‌, ಜನವರಿಯಲ್ಲಿ ಬಿಡುಗಡೆಗೊಳ್ಳಲಿದೆ. 

ಭಾವಪುಷ್ಪಗಳು-ಬ್ಯಾಲೆನ್ಸ್‌ ಶೀಟ್‌
ಕರ್ಮ ತೊರೆಯುವವನಿಗೆ ಜ್ಞಾನ ದೊರೆಯದು ಎಂದು ಸ್ಪಷ್ಟಪಡಿಸಿದ ಮಧ್ವರು ಜನಸೇವೆಗೆ ಆದ್ಯತೆ ನೀಡಿದರು. ಸತ್ಯ, ಅಹಿಂಸೆ, ಇಂದ್ರಿಯನಿಗ್ರಹ, ಸರ್ವಭೂತದಯೆ, ತಪಸ್ಸು, ಜ್ಞಾನ, ತ್ಯಾಗ ಇತ್ಯಾದಿ ಎಂಟು ಭಾವಪುಷ್ಪಗಳ ಮೂಲಕ ಪ್ರತಿ ಪರ್ಯಾಯದ ಅವಧಿಯಲ್ಲಿ ಮಾಡಿದ ಜನಸೇವೆ ಕುರಿತು ಮಠಾಧೀಶರು ಕೃಷ್ಣ-ಮಧ್ವರಿಗೆ ಬ್ಯಾಲೆನ್ಸ್‌ ಶೀಟ್‌ ಕೊಡಬೇಕು. ಇದರಲ್ಲಿ ಪೇಜಾವರ ಶ್ರೀಗಳು ಅಗ್ರಮಾನ್ಯರಾಗುತ್ತಾರೆ.
– ಡಾ| ಎಂ. ವೀರಪ್ಪ ಮೊಯ್ಲಿ 

ಟಾಪ್ ನ್ಯೂಸ್

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.