ಉದ್ಘಾಟನೆ ಮುನ್ನವೇ ಕುಸಿದ ಮದ್ಮಾಲ್ ಕೆರೆ ತಡೆಗೋಡೆ
Team Udayavani, Jun 20, 2018, 2:45 AM IST
ಉಡುಪಿ: ಹಾವಂಜೆ ಗ್ರಾಮದ ಕೀಳಂಜೆಯಲ್ಲಿರುವ ಮದ್ಮಾಲ್ ಕೆರೆಗೆ ಕಟ್ಟಲಾದ ತಡೆಗೋಡೆ ಅವರಣ ಉದ್ಘಾಟನೆ ಮುನ್ನವೇ ಕುಸಿದಿದ್ದು, ಸ್ಥಳಿಯ ಕೃಷಿಕರಲ್ಲಿ ಅತಂಕ ಮೂಡಿಸಿದೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರ ಪ್ರಯತ್ನದಿಂದ ಸಣ್ಣ ನೀರಾವರಿ ಇಲಾಖೆಯಿಂದ ಅಂದಾಜು ವೆಚ್ಚ 40 ಲ.ರೂ.ಗಳಲ್ಲಿ ಈ ಕೆರೆಯನ್ನು ಪುನಶ್ಚೇತನಗೊಳಿಸಿ ತಡೆಗೋಡೆ ನಿರ್ಮಿಸಲಾಗಿತ್ತು. ಈ ಕೆರೆಯಲ್ಲಿ ಮೂರ್ನಾಲ್ಕು ಊರಿಗೂ ನೀರುಣಿಸುವಷ್ಟು ನೀರಿದ್ದು, ಕೆರೆ ಕಾಮಗಾರಿಯಿಂದ ಕೆರೆಯ ಸುತ್ತಮುತ್ತ ಗದ್ದೆಯಂತಾಗಿ, ಕಿರು ಸೇತುವೆಗೆ ಹಾನಿಯುಂಟಾಗಿದೆ. ಕೃಷಿಕರಿಗೆ ಜಾನುವಾರುಗಳನ್ನು ಪಕ್ಕದ ಗದ್ದೆಗೆ ತೆಗೆದುಕೊಂಡು ಹೋಗಲು ತೊಂದರೆಯಾಗಿದೆ. ಕೆರೆ ಪಕ್ಕದಲ್ಲಿ ದೊಡ್ಡದಾದ ನೀರು ಹರಿಯುವ ತೋಡಿದ್ದು ಅದಕ್ಕೆ ಯಾವುದೇ ಕಾಯಕಲ್ಪ ಮಾಡಿಲ್ಲ.
ಇದೀಗ ಈ ಕೆರೆ ಆಪಾಯದ ಅಂಚಿನಲ್ಲಿರುವ ಕೆರೆಯ 2ನೇ ಹಂತ ಕಾಮಗಾರಿಯ ಮೇ ಅಂತ್ಯದಲ್ಲಿ ಮುಗಿಸಲಾಗಿತ್ತು. ಕಾಮಗಾರಿಯ ಗುಣಮಟ್ಟದ ಕಾಮಗಾರಿ ನಡೆಯಲಿಲ್ಲ ಎಂದು ದೂರಲಾಗಿದೆ. ಕೆರೆಗೆ ಬಳಸಿದ ಸಾಮಗ್ರಿಗಳು ಗುಣಮಟ್ಟ ರಹಿತವಾಗಿದಲ್ಲಿ ಪುನಃ ರಚಿಸಬೇಕು, ಕೆರೆಯ ಸುತ್ತಲೂ ಕುಡಿಯುವ ನೀರಿನ ಟ್ಯಾಂಕರ್ ಸಂಚರಿಸುವಂತೆ ಮಾಡಬೇಕು, ಸ್ಥಳೀಯ ಕೃಷಿಕರಿಗೆ ಹೂಳೆತ್ತಿದ ಮಣ್ಣಿನಿಂದ ಕೃಷಿ ಚಟುವಟಿಕೆಗೆ ತೊಂದರೆಯಾಗದಂತೆ, ಕೆರೆಯ ಸುತ್ತಲೂ ತಂತಿ ಬೇಲಿ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು