

Team Udayavani, Jul 23, 2024, 10:00 AM IST
ಮಲ್ಪೆ: ಮಳೆಗಾಲ ಆರಂಭವಾಯಿತೆಂದರೆ ಮಲ್ಪೆ ಬಂದರಿನ ಸೀ ವಾಕ್ವೇ ಬಳಿ, ಹೊಳೆಬದಿ, ಸೇತುವೆ ಮೇಲೆ ಗಾಳ ಹಾಕಿ ಮೀನು ಹಿಡಿಯುವ ಯುವಕರು ಬಹಳಷ್ಟು ಮಂದಿ ಕಾಣಸಿಗುತ್ತಾರೆ. ಗುಂಪು ಗುಂಪಾಗಿ ಸಮುದ್ರ ತಡಿಯಲ್ಲಿ ಗಾಳ ಹಾಕಿ ಮೀನು ಹಿಡಿಯಲೆಂದು ಇಲ್ಲಿಗೆ ಬಂದು ಸೇರುತ್ತಾರೆ. ಅಂದರೆ ಇವರಲ್ಲಿ ಎಲ್ಲರೂ ಮೀನು ಹಿಡಿಯುವ ಕಾಯಕದವರಲ್ಲ. ಗಾಳ ಹಾಕಿ ಮೀನು ಹಿಡಿಯುವ ಹುಚ್ಚು. ಕೆಲವರಿಗೆ ಇದೊಂದು ಮೋಜಿನ ಆಟವೂ ಹೌದು.
ಮಲ್ಪೆ ಸೀ ವಾಕ್ ಬಳಿ ಮಳೆಗಾಲ ಮತ್ತು ಬೇಸಗೆ ಎರಡು ಅವಧಿಯಲ್ಲಿ ಕಾಣ ಸಿಗುತ್ತಾರೆ. ಗಾಳದಿಂದ ಮೀನು ಭೇಟೆ ವೃತ್ತಿ ನಿರತ ಬಡ ಮೀನುಗಾರರಿಗೆ ಜೀವನಾಧಾರವಾಗಿದ್ದರೆ, ಪ್ರವೃತ್ತಿಯನ್ನಾಗಿಸಿ ಕೊಂಡ ಸಿರಿವಂತರಿಗೆ ಮನ ಸಂತೋಷದ ದಾರಿಯೂ ಹೌದು. ಒಂದು ಸಣ್ಣ ಮೀನು ಅವರ ಗಾಳಕ್ಕೆ ಸಿಕ್ಕಿಬಿದ್ದರೆ ಏನೋ ಒಂಥರ ಖುಷಿಯೋ ಖುಷಿ.
ಕೆಲವು ಶ್ರೀಮಂತ ವರ್ಗದ ಹವ್ಯಾಸಕ್ಕೆಂದು ಸಾವಿರಾರು ಮೌಲ್ಯದ ಗಾಳ ಮೀನುಗಾರಿಕೆ ಪರಿಕರಗಳೊಂದಿಗೆ ಹೊಳೆ- ನದಿ,
ಸಮುದ್ರ ತೀರದತ್ತ ಬಂದು ನುರಿತ ಮೀನುಗಾರರಂತೆ ನೀರಿಗೆ ಗಾಳ ಎಸೆದು ಸಾಮಾನ್ಯ ಮೀನುಗಾರರಂತೆ ಈ ಸಂದರ್ಭ
ಪರಿವರ್ತಿತರಾಗುತ್ತಾರೆ. ಇಲ್ಲಿ ಹಣವಂತರಿಗೆ ಮೀನು ಸಂಪಾದನೆ ನಗಣ್ಯವಾಗಿದ್ದರೂ, ಕೇವಲ ಖುಷಿಗಾಗಿ ಮಾತ್ರ.
ಆಧುನಿಕ ವ್ಯವಸ್ಥೆ
ನಮ್ಮ ಕರಾವಳಿ ಸಮುದ್ರದ ತೀರ ಪ್ರದೇಶದ ಉಪ್ಪು ನೀರಿನಲ್ಲಿ ಅಥವಾ ಅಳಿವೆ ಬಾಗಿಲ ಪರಿಸರದಲ್ಲಿ ಹೆಚ್ಚಾಗಿ ಮೀನಿಗೆ ಗಾಳ ಹಾಕುವುದು ಕಂಡು ಬರುತ್ತದೆ. ಗಾಳದಲ್ಲಿ ಆಧುನೀಕರಣ ಪರಿಕರಗಳು ಬಂದ ಮೇಲೆ ಹೆಚ್ಚು ಜನರು ಪಾಲ್ಗೊಳ್ಳುತ್ತಾರೆ. ಮಳೆಗಾಲದಲ್ಲಿ ಕೆಂಬೆರಿ, ಕಲ್ಲರ್ ಕಂಡಿಗೆ, ಏರಿ, ತೊರಕೆ ಪುಲ್ಲಡಿ ಚಿಕ್ಕ ತೇಡೆ, ಬೇಸಗೆಯಲ್ಲಿ ದೊಡ್ಡ ಗಾತ್ರದ ಕೆಂಬರಿ, ಕುಲೇಜ್, ಕೊಕ್ಕರ್, ಮುರುಮೀನು ಹೆಚ್ಚಾಗಿ ಸಿಗುತ್ತದೆ.
– ದಯಾನಂದ ಕೋಟ್ಯಾನ್, ಮಲ್ಪೆ
Ad
Kundapura: ಬೈಕ್ ಸವಾರ ಮೃತಪಟ್ಟ ಪ್ರಕರಣ; ಲಾರಿ ಚಾಲಕನಿಗೆ 1.6 ವರ್ಷ ಜೈಲು ಶಿಕ್ಷೆ
ರಾಜ್ಯ ಪೊಲೀಸ್ ಇಲಾಖೆಯಲ್ಲಿ 18 ಸಾವಿರ ಹುದ್ದೆಗಳು ಖಾಲಿ ಇದೆ: ಡಾ.ಜಿ.ಪರಮೇಶ್ವರ್
Kaup: 8 ಬಾವಿ ನೀರು ಕಲುಷಿತ; ತಜ್ಞರಿಂದ ಪರಿಶೀಲನೆ
Udupi: ಶಾಸಕರೊಬ್ಬರ ಹೇಳಿಕೆ ರಾಜ್ಯ ಕಾಂಗ್ರೆಸ್ ಸರಕಾರದ ಇಂದಿನ ನೈಜ ಸ್ಥಿತಿ ಅನಾವರಣ: ಗುರ್ಮೆ
Kota: ಯಡ್ತಾಡಿ ಕಂಬಳ ಗದ್ದೆಯ ಸಾಂಪ್ರದಾಯಿಕ ನಾಟಿ: ನೂರಕ್ಕೂ ಅಧಿಕ ಮಹಿಳೆಯರು ಭಾಗಿ!
You seem to have an Ad Blocker on.
To continue reading, please turn it off or whitelist Udayavani.