
ಮಲ್ಪೆ: 6 ಗಂಟೆ ಆತಂಕ ಸೃಷ್ಟಿಸಿದ ಪ್ರವಾಸಿಗನ ನಾಪತ್ತೆ ಪ್ರಕರಣ
Team Udayavani, Nov 28, 2022, 7:33 AM IST

ಮಲ್ಪೆ: ಬೆಂಗಳೂರಿನಿಂದ ಪ್ರವಾಸಕ್ಕೆ ಮಲ್ಪೆ ಬೀಚ್ಗೆ ಬಂದಿದ್ದ ಸಂದರ್ಭ ಜತೆಯಲ್ಲಿದ್ದ ಯುವಕ ನಾಪತ್ತೆಯಾಗಿ ಸುಮಾರು 6 ಗಂಟೆ ಹುಡುಕಾಟದ ಬಳಿಕ ಆತ ಸೀ ವಾಕ್ ವೇ ಬಳಿ ಕಲ್ಲಿನ ಮೇಲೆ ಪತ್ತೆಯಾಗಿದ್ದಾನೆ.
ಬೆಂಗಳೂರಿನ ಹೊಸಕೆರೆ ಹಳ್ಳಿಯ ಮಂಜುನಾಥ (23) ಒಮೇಗ ಹೆಲ್ತ್ ಕೇರ್ನ ಉದ್ಯೋಗಿ. ಇತರ 6 ಮಂದಿ ಸ್ನೇಹಿತರ ಜತೆ ಪ್ರವಾಸಕ್ಕೆ ಬಂದಿದ್ದರು. ರವಿವಾರ ಬೆಳಗ್ಗೆ ಮಲ್ಪೆ ಬೀಚ್ಗೆ ಬಂದು ರೆಸಾರ್ಟ್ ನಲ್ಲಿ ತಂಗಿದ್ದರು. ಅಪರಾಹ್ನ 3 ಗಂಟೆಗೆ ಎಲ್ಲರೂ ಸಮುದ್ರದಲ್ಲಿ ಈಜಾಡುತ್ತಿದ್ದರು. ಈ ಪೈಕಿ ಮಂಜುನಾಥ್ ಪಾನಮತ್ತನಾಗಿದ್ದು, ಜತೆಯಲ್ಲಿದ್ದವರು ಆತನನ್ನು ನೀರಿನಿಂದ ಮೇಲೆ ಕಳುಹಿಸಿದ್ದರು.
ಸ್ವಲ್ಪ ಸಮಯ ಬಿಟ್ಟು ಎಲ್ಲರೂ ಮೇಲೆ ಬಂದಾಗ ಮಂಜುನಾಥ್ ನಾಪತ್ತೆಯಾಗಿದ್ದರು. ರೂಮಿನಲ್ಲೂ ಇರಲಿಲ್ಲ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಸಮುದ್ರದಲ್ಲಿ ಮುಳುಗಿರಬಹುದೇ ಎನ್ನುವ ಅನುಮಾನದಿಂದ ಪೊಲೀಸರು ಮುಳುಗು ತಜ್ಞ ಈಶ್ವರ್ ಮಲ್ಪೆಯನ್ನು ಕರೆಯಿಸಿ ಸಮುದ್ರ ತೀರದ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ.
ಪಾನಮತ್ತನಾದ ಆತ ಬೀಚ್ನಿಂದ ನಡೆಯುತ್ತಾ ಹೋಗಿ ಸೀ ವಾಕ್ ಬಳಿ ಕಲ್ಲಿನ ಬೆಂಚ್ ಮೇಲೆ ಮಲಗಿದ್ದ. ಈಶ್ವರ್ ಮಲ್ಪೆ ಅವರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಜತೆಯಲ್ಲಿದವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

“ಮಗುವನ್ನು ಉಳಿಸಲು ಆಗುವುದಿಲ್ಲ.. ಮಕ್ಕಳನ್ನು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಂಡ ದಂಪತಿ

ಬಂಡಾಯಕ್ಕೇ ಸದ್ಯ ಬಿಸಿ: ಭಿನ್ನ ಧ್ವನಿಗಳ ಮೆತ್ತಗಾಗಿಸಲು ಅಖಾಡಕ್ಕೆ ಇಳಿದ ಬಿಜೆಪಿ ವರಿಷ್ಠರು

ಎಲ್ಲ ಕಾಲೇಜುಗಳಲ್ಲೂ ರಾಯಣ್ಣ, ನೇತಾಜಿ ಪ್ರತಿಮೆ ಸ್ಥಾಪನೆಗೆ ಆದೇಶ: ಸಿಎಂ ಬೊಮ್ಮಾಯಿ

ನಾರೀಶಕ್ತಿಗೆ ಜೈಕಾರ: ಮಿಲಿಟರಿಯಲ್ಲಿ ನಾರೀಶಕ್ತಿ, ಸ್ತಬ್ಧಚಿತ್ರಗಳಲ್ಲೂ “ನಾರಿ’

ಅ-19 ಮಹಿಳಾ ಟಿ20 ವಿಶ್ವಕಪ್: ಇಂದು ಭಾರತ-ನ್ಯೂಜಿಲೆಂಡ್ ಉಪಾಂತ್ಯ