ಮಲ್ಪೆ: 6 ಗಂಟೆ ಆತಂಕ ಸೃಷ್ಟಿಸಿದ ಪ್ರವಾಸಿಗನ ನಾಪತ್ತೆ ಪ್ರಕರಣ
Team Udayavani, Nov 28, 2022, 7:33 AM IST
ಮಲ್ಪೆ: ಬೆಂಗಳೂರಿನಿಂದ ಪ್ರವಾಸಕ್ಕೆ ಮಲ್ಪೆ ಬೀಚ್ಗೆ ಬಂದಿದ್ದ ಸಂದರ್ಭ ಜತೆಯಲ್ಲಿದ್ದ ಯುವಕ ನಾಪತ್ತೆಯಾಗಿ ಸುಮಾರು 6 ಗಂಟೆ ಹುಡುಕಾಟದ ಬಳಿಕ ಆತ ಸೀ ವಾಕ್ ವೇ ಬಳಿ ಕಲ್ಲಿನ ಮೇಲೆ ಪತ್ತೆಯಾಗಿದ್ದಾನೆ.
ಬೆಂಗಳೂರಿನ ಹೊಸಕೆರೆ ಹಳ್ಳಿಯ ಮಂಜುನಾಥ (23) ಒಮೇಗ ಹೆಲ್ತ್ ಕೇರ್ನ ಉದ್ಯೋಗಿ. ಇತರ 6 ಮಂದಿ ಸ್ನೇಹಿತರ ಜತೆ ಪ್ರವಾಸಕ್ಕೆ ಬಂದಿದ್ದರು. ರವಿವಾರ ಬೆಳಗ್ಗೆ ಮಲ್ಪೆ ಬೀಚ್ಗೆ ಬಂದು ರೆಸಾರ್ಟ್ ನಲ್ಲಿ ತಂಗಿದ್ದರು. ಅಪರಾಹ್ನ 3 ಗಂಟೆಗೆ ಎಲ್ಲರೂ ಸಮುದ್ರದಲ್ಲಿ ಈಜಾಡುತ್ತಿದ್ದರು. ಈ ಪೈಕಿ ಮಂಜುನಾಥ್ ಪಾನಮತ್ತನಾಗಿದ್ದು, ಜತೆಯಲ್ಲಿದ್ದವರು ಆತನನ್ನು ನೀರಿನಿಂದ ಮೇಲೆ ಕಳುಹಿಸಿದ್ದರು.
ಸ್ವಲ್ಪ ಸಮಯ ಬಿಟ್ಟು ಎಲ್ಲರೂ ಮೇಲೆ ಬಂದಾಗ ಮಂಜುನಾಥ್ ನಾಪತ್ತೆಯಾಗಿದ್ದರು. ರೂಮಿನಲ್ಲೂ ಇರಲಿಲ್ಲ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಸಮುದ್ರದಲ್ಲಿ ಮುಳುಗಿರಬಹುದೇ ಎನ್ನುವ ಅನುಮಾನದಿಂದ ಪೊಲೀಸರು ಮುಳುಗು ತಜ್ಞ ಈಶ್ವರ್ ಮಲ್ಪೆಯನ್ನು ಕರೆಯಿಸಿ ಸಮುದ್ರ ತೀರದ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ.
ಪಾನಮತ್ತನಾದ ಆತ ಬೀಚ್ನಿಂದ ನಡೆಯುತ್ತಾ ಹೋಗಿ ಸೀ ವಾಕ್ ಬಳಿ ಕಲ್ಲಿನ ಬೆಂಚ್ ಮೇಲೆ ಮಲಗಿದ್ದ. ಈಶ್ವರ್ ಮಲ್ಪೆ ಅವರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಜತೆಯಲ್ಲಿದವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ