ಮಳೆಗಾಲದ ನಿಷೇಧ ತೆರವು; ಪ್ರವಾಸಿಗರಿಗೆ ಮುಕ್ತ
Team Udayavani, Sep 25, 2021, 4:10 AM IST
ಮಲ್ಪೆ: ದೇಶ ವಿದೇಶಗಳ ಪ್ರವಾಸಿಗರ ಆಕರ್ಷಣೀಯ ತಾಣವಾದ ಮಲ್ಪೆ ಸೈಂಟ್ ಮೇರೀಸ್ ದ್ವೀಪಕ್ಕೆ ಮಳೆ ಗಾಲದಲ್ಲಿ 4 ತಿಂಗಳ ಕಾಲ ಹೇರಲಾಗಿದ್ದ ಪ್ರವೇಶ ನಿರ್ಬಂಧ ತೆರವಾಗಿದ್ದು, ಇದೀಗ ಮತ್ತೆ ದ್ವೀಪಯಾನ ಆರಂಭ ಗೊಳ್ಳುತ್ತಿದೆ.
ಮಳೆಗಾಲದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿರುವುದರಿಂದ ದ್ವೀಪಕ್ಕೆ ತೆರಳುವುದು ಅಪಾಯಕಾರಿ ಎಂದು ಪ್ರತೀ ವರ್ಷ ಮೇ 15ರಿಂದ ಸೆ. 15ರ ವರೆಗೆ ಇಲ್ಲಿನ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರುತ್ತದೆ. ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಲಾಕ್ಡೌನ್ನಿಂದಾಗಿ ನಿಗದಿತ ನಿಷೇಧದ ಅವಧಿಯ ಮೊದಲೇ ಪ್ರವಾಸಿ ಬೋಟ್ಗಳು ಪ್ರಯಾಣವನ್ನು ಅರ್ಧದಲ್ಲೇ ಸ್ಥಗಿತಗೊಳಿಸಿತ್ತು. ಸೆ. 19ರಿಂದ ಮತ್ತೆ ಬೋಟ್ ಯಾನ ಆರಂಭಗೊಂಡಿದ್ದು ಪ್ರವಾಸಿಗರನ್ನು ಕರೆದೊಯ್ಯಲು ಸಿದ್ಧªವಾಗಿದೆ.
ಐಲ್ಯಾಂಡ್ನಲ್ಲಿ ಸ್ವಚ್ಛತ ಕಾರ್ಯ:
ಕಳೆದ ನಾಲ್ಕೈದು ತಿಂಗಳು ಸ್ತಬ್ಧವಾಗಿದ್ದ ದ್ವೀಪದಲ್ಲಿ ಗಿಡಗಂಟಿಗಳು ಎತ್ತರಕ್ಕೆ ಬೆಳೆದು ನಿಂತಿದ್ದು ಅದನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ದ್ವೀಪದ ಸುತ್ತಲೂ ತ್ಯಾಜ್ಯಗಳು ಸಂಗ್ರಹವಾಗಿದ್ದು ಕ್ಲೀನಿಂಗ್ ಮೆಶಿನ್ ಮೂಲಕ 4 ಮಂದಿ ಸ್ವತ್ಛತೆಯಲ್ಲಿ ತೊಡಗಿದ್ದಾರೆ. ದ್ವೀಪದ ಪಶ್ಚಿಮ ಭಾಗದ ಅಪಾಯಕಾರಿ ಪ್ರದೇಶದಲ್ಲಿ ಸಮುದ್ರಕ್ಕೆ ಇಳಿಯದಂತೆ 20 ಫ್ಲ್ಯಾಗ್ಗಳನ್ನು ಅಳವಡಿಸಿ, ಎಚ್ಚರಿಕೆ ಬೋರ್ಡ್ ಹಾಕಲಾಗಿದೆ. ಈಗ ಬರುತ್ತಿರುವ ಪ್ರವಾಸಿಗರ ಕಣ್ಗಾವಲಿಗೆ ಪ್ರಸ್ತುತ 2 ಮಂದಿ ಜೀವರಕ್ಷಕ ಸಿಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.
ಐಲ್ಯಾಂಡ್ ಅನ್ನು ಪೂರ್ಣ ಹಸುರು ಮ ಯವಾಗಿಸುವ ಮತ್ತು ಪ್ರವಾಸಿಗರಿಗೆ ನೆರಳು ನೀಡುವ ಉದ್ದೇಶದಿಂದ ಖಾಲಿ ಜಾಗವಿದ್ದಲ್ಲಿ ಎಲ್ಲ ಕಡೆ ಗಿಡ ಮರಗಳನ್ನು ಬೆಳೆಸಲಾಗುತ್ತದೆ. ಪ್ರವೇಶ ದ್ವಾರದಲ್ಲಿ ತಪಾಸಣೆಯ ಕಾರ್ಯವನ್ನು ಅ. 1ರಿಂದಲೇ ನಡೆಸಲಾಗುತ್ತದೆ ಎಂದು ನಿರ್ವಾಹಕ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.
ಇನ್ನು ಮಲ್ಪೆ ಬೀಚ್ನಿಂದ ದ್ವೀಪಕ್ಕೆ ಹೋಗಲು 4 ಪ್ರವಾಸಿ ಸ್ಪೀಡ್ ಬೋಟ್ಗಳಿದ್ದು, ಒಂದು ಬೊಟ್ನಲ್ಲಿ 10 ಮಂದಿಗೆ ಮಾತ್ರ ತೆರಳಲು ಅವಕಾಶವಿದೆ. ಇದರಿಂದ ಕೇವಲ 15 ನಿಮಿಷಗಳಲ್ಲಿ ತಲುಪಬಹುದಾಗಿದೆ.
ಅ. 1ರಿಂದ ವಾಟರ್ ಸ್ಪೋರ್ಟ್ಸ್ ಆರಂಭ:
ಜಲಸಾಹಸ ಕ್ರೀಡೆಗಳು, ಫುಡ್ಕೋರ್ಟ್, ಲಗೇಜ್ ರೂಮ್, ಶೌಚಾಲಯ ಸೇರಿದಂತೆ ಪೂರ್ಣ ಪ್ರಮಾಣದ ಸೌಲಭ್ಯಗಳೊಂದಿಗೆ ಅ. 1ರಿಂದ ಐಲ್ಯಾಂಡ್ ಪ್ರವಾಸಿಗರಿಗೆ ತೆರೆದುಕೊಳ್ಳಲಿದೆ. ಪ್ರವಾಸಿಗರಿಗೆ ಕುಳಿತುಕೊಳ್ಳಲು ಮರದ ಬೆಂಚು, ನೆರಳಿಗಾಗಿ ಶೆಲ್ಟರ್, ಪ್ರವೇಶ ದ್ವಾರವನ್ನು ನಿರ್ಮಿಸುವ ಇನ್ನಿತರ ಕೆಲಸ ಕಾರ್ಯಗಳು ನಡೆಯುತ್ತಿವೆ.
2 ಕಡೆ ಬೋಟಿನ ವ್ಯವಸ್ಥೆ :
ಮಲ್ಪೆ ಸೀವಾಕ್ ಬಳಿ, ಮಲ್ಪೆ ಬೀಚ್ ಎರಡೂ ಕಡೆಯಲ್ಲೂ ಐಲ್ಯಾಂಡ್ಗೆ ತೆರಳಲು ಪ್ರವಾಸಿ ಬೋಟಿನ ವ್ಯವಸ್ಥೆ ಇದೆ. ಆಧುನಿಕ ಸೌಕರ್ಯದೊಂದಿಗೆ, ಲೈಫ್ ಜಾಕೆಟ್, ಲೈಫ್ಬಾಯ್, ಪ್ರಥಮ ಚಿಕಿತ್ಸೆ ವ್ಯವಸ್ಥೆ, ನುರಿತ ಈಜುಗಾರರನ್ನೊಳ ಗೊಂಡ ರಕ್ಷಣ ತಂಡವನ್ನು ಹೊಂದಿದೆ. ಸೀವಾಕ್ ಬಳಿ ದ್ವೀಪಕ್ಕೆ ತೆರಳಲು 4 ದೊಡ್ಡ ಬೋಟುಗಳಿದ್ದು, ಇದರಲ್ಲಿ ಸುಮಾರು 120 ಮಂದಿ ಕರೆದೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ದ್ವೀಪಕ್ಕೆ ತೆರಳಲು ಕನಿಷ್ಠ 30 ಮಂದಿಯಾದರೂ ಭರ್ತಿಯಾಗಬೇಕು. ಬೆಳಗ್ಗೆ 10.30 ಮತ್ತು ಅಪರಾಹ್ನ 3.30ಕ್ಕೆ ರೆಗ್ಯುಲರ್ ಟ್ರಿಪ್ ಆಲ್ಲದೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಬಂದರೆ ಬೆಳಗ್ಗೆ 9ರಿಂದ ಸಂಜೆ 5ರ ವರೆಗೂ ನಿರಂತರವಾಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್