ಮಲ್ಪೆ ಬಂದರು: ನಿಷೇಧ ತೆರವಾಗಿ 20 ದಿನಗಳ ಬಳಿಕ ಮೀನು ಬೇಟೆಗೆ ತೆರಳಿದ ಮೀನುಗಾರರು
Team Udayavani, Aug 20, 2019, 5:00 AM IST
ಮಲ್ಪೆ: ಯಾಂತ್ರಿಕ ಮೀನುಗಾರಿಕೆ ನಿಷೇಧ ತೆರವುಗೊಂಡಿದ್ದರೂ ಪ್ರಾಕೃತಿಕ ವೈಪರೀತ್ಯದಿಂದ ಮಲ್ಪೆ ಬಂದರಿನಲ್ಲೇ ಉಳಿದಿದ್ದ ದೋಣಿಗಳು ಸೋಮವಾರದಿಂದ ಕಡಲಿಗಿಳಿಯಲಾರಂಭಿಸಿದೆ.
ಯಾಂತ್ರಿಕ ಮೀನುಗಾರಿಕಾ ಋತು ನಿಷೇಧ ತೆರವುಗೊಂಡು 20 ದಿನ ಕಳೆದರೂ ಹವಾಮಾನದ ವೈಪರೀತ್ಯದಿಂದಾಗಿ ಮಲ್ಪೆ ಬಂದರಿನಲ್ಲಿ ಯಾವುದೇ ಯಾಂತ್ರಿಕ ದೋಣಿಗಳು ಕಡಲಿಗಿಳಿದಿಲ್ಲ. ಕೆಲವೊಂದು ಆಳಸಮುದ್ರ ಬೋಟ್ಗಳು ಮಂಜು ಗಡ್ಡೆ, ಡಿಸೇಲ್ ತುಂಬಿಸಿಕೊಂಡು ಸಿದ್ಧ ಪಡಿಸಿಕೊಂಡಿದ್ದರೂ ಸಮುದ್ರದಲ್ಲಿ ಅಬ್ಬರಿಸುತ್ತಿರುವ ತೂಫಾನ್ನಿಂದಾಗಿ ಮೀನುಗಾರಿಕೆಗೆ ತೆರಳಲು ಹಿಂದೇಟು ಹಾಕಿತ್ತು. ಆಳಸಮುದ್ರ, ಪಸೀìನ್, ತ್ರಿಸೆವಂಟಿ, ಸಣ್ಣಟ್ರಾಲ್ ಬೋಟ್ ಸೇರಿದಂತೆ ಸುಮಾರು 2000ಕ್ಕೂ ಅಧಿಕ ದೋಣಿಗಳು ಇನ್ನೂ ಬಂದರಿನಲ್ಲೆ ಉಳಿದುಕೊಂಡಿತ್ತು.
ಈ ಹಿನ್ನೆಲೆ ಕಡಲ ಅಬ್ಬರ ಅಧಿಕ ವಾಗಿದ್ದು ಮಳೆಗಾಳಿ ಜೋರಾಗಿ ರುವುದರಿಂದ ಮೀನುಗಾರಿಕೆಗೆ ತೆರಳುವ ಸಾಹಸ ಮಾಡಿಲ್ಲ. ಮೀನು ಗಾರಿಕೆ ಈ ಋತು ಆರಂಭದಲ್ಲಿ ಕೈ ಕೊಟ್ಟಿದ್ದು ಮೀನುಗಾರರಲ್ಲಿ ನಿರಾಸೆ ಯನ್ನು ಮೂಡಿಸಿದ್ದರೂ ಇದೀಗ ಸಮುದ್ರ ಸಹಜ ಸ್ಥಿತಿಗೆ ತಲುಪಿದ್ದು ಆಶಾ ವಾದದಲ್ಲಿದ್ದಾರೆ. ಒಂದು ಸಾವಿರ ಆಳಸಮುದ್ರ ಬೋಟುಗಳ ಪೈಕಿ ಶೇ. 15-20ರಷ್ಟು ಮಾತ್ರ ಕಡಲಿಗಿಳಿದಿವೆ.
ಪಸೀìನ್ ಮೀನುಗಾರರು ಸೋಮವಾರದಿಂದ ಕಡಲಿಗಿಳಿಯಲು ಸನ್ನಹ ನಡೆಸಿದ್ದು ಬಂದರಿನಲ್ಲಿರುವ 140 ಪಸೀìನ್ ಬೋಟುಗಳಲ್ಲಿ ಸುಮಾರು ಶೇ.30ರಷ್ಟು ದೋಣಿಗಳು ತೆರಳಿವೆ. ಇನ್ನು ಸಣ್ಣಟ್ರಾಲ್, ಟ್ರಾಲ್ದೋಣಿ (370) ಇನ್ನಷೇr ತೆರಳಬೇಕಾಗಿವೆ. ಇಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಎಲ್ಲ ವರ್ಗದ ಬೋಟು ಪೂರ್ಣ ಪ್ರಮಾಣದಲ್ಲಿ ಮೀನುಗಾರಿಕೆಗೆ ತೆರಳಲಿವೆ ಎನ್ನ ಲಾಗಿದೆ.
ತೆರಳಿದ್ದ ಬೋಟು ವಾಪಾಸಾಗಿತ್ತು
ಈ ಮಧ್ಯೆ ವಾರದ ಹಿಂದೆ ಸಮುದ್ರಕ್ಕೆ ತೆರಳಿದ ಕೆಲವೊಂದು ಆಳಸಮುದ್ರ ದೋಣಿಗಳು ಸಮುದ್ರದಲ್ಲಿ ಅಬ್ಬರದ ಅಲೆಗಳಿಂದ ನೀರಿನ ಒತ್ತಡದಿಂದಾಗಿ ಬಲೆಯನ್ನು ನೀರಿಗಿಳಿಸಲು ಆಸಾಧ್ಯವಾದ್ದರಿಂದ ದೋಣಿಗಳು ಸಮೀಪದ ಬಂದರು ಆಶ್ರಯಿಸಿದ್ದರೆ ಇನ್ನು ಕೆಲವು ಮಲ್ಪೆ ಬಂದರಿಗೆ ವಾಪಾಸಾಗಿವೆ.
ಬೋಟ್ ತೆರವಿಗೂ ಸಮಸ್ಯೆ
ಸಮುದ್ರ ಸಹಜ ಸ್ಥಿತಿಗೆ ತಲುಪಿದ್ದರಿಂದ ಸೋಮವಾರದಿಂದ ಬೋಟುಗಳು ಕಡಲಿಗಿಳಿಯುತ್ತಿವೆ. ಬಂದರಿನಲ್ಲಿ ಬೋಟ್ಗಳ ಒತ್ತಡದಿಂದಾಗಿ ದಕ್ಕೆಯಲ್ಲಿ ಬೋಟನ್ನು ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ. ಹಿಂಭಾಗ ಬೋಟ್ಗಳು ತೆರವಾಗದ ಮಧ್ಯೆ ಸಿಕ್ಕಿ ಹಾಕಿಕೊಂಡಿರುವ ದೋಣಿಗಳಿಗೆ ಮಂಜುಗಡ್ಡೆ, ಡೀಸೆಲ್ ತುಂಬಿಸಲು ಸಮಸ್ಯೆಯಾಗುತ್ತಿದೆ. ಇನ್ನು ಮೂರಾಲ್ಕು ದಿನಗಳಲ್ಲಿ ಈ ಸಮಸ್ಯೆ ಪರಿಹಾರವಾಗಬಹುದು.
-ಕೃಷ್ಣ ಎಸ್. ಸುವರ್ಣ, ಅಧ್ಯಕ್ಷರು ಮಲ್ಪೆ ಮೀನುಗಾರರ ಸಂಘ