ಮಲ್ಪೆ ಬಂದರು: ಪ್ರಕ್ಷುಬ್ಧ ವಾತಾವರಣಕ್ಕೆ ದಡ ಸೇರಿದ ಬೋಟ್ಗಳು
Team Udayavani, Sep 10, 2021, 8:50 AM IST
ಮಲ್ಪೆ: ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆ, ಗಾಳಿಯಿಂದಾಗಿ ಆಳಸಮುದ್ರದಲ್ಲಿ ಪ್ರಕ್ಷುಬ್ಧತೆ ಉಂಟಾಗಿದ್ದ ಪರಿಣಾಮ ಬೋಟ್ಗಳು ಮೀನುಗಾರಿಕೆ ನಡೆಸಲಾಗದೆ ಬುಧವಾರದಿಂದ ಬಹುತೇಕ ದೋಣಿಗಳು ದಡ ಸೇರಿವೆ.
ಆ. 1ರಿಂದ ಮೀನುಗಾರಿಕೆ ಋತು ಆರಂಭವಾಗಿ ಉತ್ತಮ ಮೀನುಗಾರಿಕೆಯ ನಿರೀಕ್ಷೆಯಲ್ಲಿರುವಾಗಲೇ ಮತ್ತೆ ಪ್ರಾಕೃತಿಕ ವೈಪರೀತ್ಯ ಉಂಟಾಗಿದೆ. ಆಳಸಮದ್ರ ಪಸೀìನ್ ಮೀನುಗಾರರಿಗೆ ಬಂಗುಡೆ, ಬೊಂಡಾಸ್ ಮೀನುಗಳು ಲಭಿಸುತ್ತಿದ್ದು, ಕೊಂಚ ಆದಾಯ ಗಳಿಸುವಷ್ಟರಲ್ಲೇ ಮತ್ತೆ ಪ್ರಕ್ಷುಬ್ಧ ವಾತಾವರಣದಿಂದ ಮೀನುಗಾರಿಕೆ ನಡೆಸದಂತಾಗಿದೆ.
ಕಳೆದ ಎರಡು ಮೂರು ದಿನಗಳಿಂದ ಸಮುದ್ರದಲ್ಲಿ ಗಾಳಿಯಿಂದಾಗಿ ನೀರಿನ ಒತ್ತಡವೂ ಹೆಚ್ಚಾಗಿದೆ ಎಂದು ಮೀನು ಗಾರರು ತಿಳಿಸಿದ್ದಾರೆ. ಈಗಾಗಲೇ ಮಲ್ಪೆ ಬಂದರಿನಲ್ಲಿ ಶೇ. 60ರಷ್ಟು ಬೋಟ್ಗಳು ಲಂಗರು ಹಾಕಿವೆ.
ಇನ್ನುಳಿದವು ಕಾರವಾರ, ಗೋವಾದ ವಾಸ್ಕೋ, ಮಹಾರಾಷ್ಟ್ರದ ಬಂದರುಗಳನ್ನು ಆಶ್ರಯಿಸಿವೆ.
ಮಲ್ಪೆ ಬಂದರಿನಲ್ಲಿ ಈಗಾಗಲೇ ವಾಪಸ್ ಬಂದಿರುವ ಬೋಟ್ಗಳು ಮತ್ತೆ ಮೀನುಗಾರಿಕೆಗೆ ತೆರಳಿಲ್ಲ. ಬಹುತೇಕ ಬೋಟ್ಗಳು ಚೌತಿಹಬ್ಬದ ಅನಂತರ ಕಡಲಿಗಿಳಿಯಲು ನಿರ್ಧರಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್