ಪ್ರಧಾನಿ ಕಚೇರಿಗೆ ಬರೆದ ಪತ್ರ ಕೆಲಸ ಮಾಡಿಸಿಕೊಟ್ಟಿತು


Team Udayavani, Apr 17, 2018, 8:55 AM IST

Mohan-15-4.jpg

ಪಡುಬಿದ್ರಿ: ಹಿರಿಯ ನಾಗರಿಕರ ಸಹಾಯಕ್ಕೆ ಬಾರದ ಸರಕಾರಿ ವ್ಯವಸ್ಥೆಗೆ ಸಡ್ಡು ಹೊಡೆದ ಹೆಜಮಾಡಿ ಗುಡ್ಡೆ ಅಂಗಡಿಯ ಹಿರಿಯರೊಬ್ಬರು ನೇರ ಪ್ರಧಾನಿ ಕಚೇರಿಗೇ ಪತ್ರ ಬರೆದು ತಿದ್ದುಪಡಿ ಸಹಿತ ಆಧಾರ್‌ ಕಾರ್ಡ್‌ ಪಡೆದುಕೊಂಡು ಗೆದ್ದಿದ್ದಾರೆ. ಆಧಾರ್‌ ಕಾರ್ಡ್‌ ಪಡೆಯಲು ಆಗುತ್ತಿರುವ ತೊಂದರೆಗಳನ್ನು ನಿವೇದಿಸಿಕೊಂಡಿದ್ದ ಹೆಜಮಾಡಿ ಗುಡ್ಡೆಅಂಗಡಿ ನಟ್ಟಿ ಹೌಸ್‌ನ ಮೋಹನ್‌ ಕೆ. ಸುವರ್ಣ (77) ಅವರಿಗೆ ಆಧಾರ್‌ ಕಾರ್ಡ್‌ ಮನೆ ಬಾಗಿಲಿಗೆ ಬಂದು ತಲುಪಿದೆ. ಪ್ರಧಾನಿ ಕಚೇರಿಯ ಅವಿರತ ಫಾಲೋ ಅಪ್‌ ನಿಂದಾಗಿ ಇದು ಸಾಧ್ಯವಾಗಿದೆ.

ಬಸವಳಿದಿದ್ದ ಮೋಹನ್‌ ಸುವರ್ಣ

ಮೋಹನ್‌ ಸುವರ್ಣ ಅವರು ಮಹಾರಾಷ್ಟ್ರ ಎಲೆಕ್ಟ್ರಿಸಿಟಿ ಬೋರ್ಡ್‌ನ (MSEB) ನಿವೃತ್ತ ಸರಕಾರಿ ನೌಕರ. ನಿವೃತ್ತಿಯ ಬಳಿಕವೂ ಮುಂಬಯಿಯಲ್ಲಿ ನೆಲೆಸಿದ್ದ ಅವರು ಅಲ್ಲೇ ಆಧಾರ್‌ ಕಾರ್ಡ್‌ ಮಾಡಿಸಿಕೊಂಡಿದ್ದರು. ಐದು ವರ್ಷಗಳ ಹಿಂದೆ ಹೆಜಮಾಡಿಗೆ ಬಂದು ನೆಲೆಸಿದ ಬಳಿಕ ಆಧಾರ್‌ ಕಾರ್ಡ್‌ನಲ್ಲಿ ಹೊಸ ವಿಳಾಸ, ಹೊಸ ಮೊಬೈಲ್‌ ಸಂಖ್ಯೆ ದಾಖಲು ಮತ್ತು ಜೋಡಣೆಗಾಗಿ ಕಾಪುವಿನ ನೆಮ್ಮದಿ ಕೇಂದ್ರ, ಕಾರ್ನಾಡ್‌ ಅಂಚೆ ಕಚೇರಿ ಸಹಿತ ಹಲವೆಡೆ ಪ್ರಯತ್ನಿಸಿದ್ದರು. ಬಸ್‌ ಹಿಡಿದು ಈ ಸರಕಾರಿ ಕಚೇರಿಗಳ ಸುತ್ತಾಟದಲ್ಲಿ ಬಸವಳಿದಿದ್ದರು. ಹಿಂದಿಗಿಂತ ಹಲವು ಪಟ್ಟು ಬೆಳೆದಿರುವ ಉಡುಪಿಯ ಬನ್ನಂಜೆಯಲ್ಲಿರುವ ಆಧಾರ್‌ ಕೇಂದ್ರವನ್ನು ತಲುಪಿ ಅಲ್ಲಿಯೂ ಸರತಿಯಲ್ಲಿ ಕಾದಿದ್ದರು.

ಪ್ರಧಾನಿ ಕಚೇರಿ ಉತ್ತರ
ಆಧಾರ್‌ ಪರಿಷ್ಕರಣೆಗೆ ಆಗುತ್ತಿರುವ ಸಮಸ್ಯೆಯನ್ನು ನಿವೇದಿಸಿ ಪ್ರಧಾನಿ ಕಚೇರಿಗೆ 2017ರ ಸೆ. 12ರಂದು ಪತ್ರ ಬರೆದಿದ್ದರು. ಪ್ರಧಾನಿ ಕಚೇರಿಯು ಕೇವಲ ಹತ್ತು ದಿನಗಳಲ್ಲಿ ಪ್ರತ್ಯುತ್ತರವನ್ನು ಅವರಿಗೆ ರವಾನಿಸಿತ್ತು, ಸೂಕ್ತ ಕ್ರಮಕ್ಕಾಗಿ ಸಂಬಂಧಿತರಿಗೆ ಪತ್ರ ರವಾನಿಸಲಾಗಿದೆ ಎಂದು ಮಾಹಿತಿ ನೀಡಿತ್ತು.

ಬೆಂಗಳೂರು ಕಚೇರಿಯಿಂದ ಪತ್ರ
ಈ ನಡುವೆ 2018ರ ಮಾ. 22ರಂದು ಬೆಂಗಳೂರಿನ ರೇಸ್‌ ಕೋರ್ಸ್‌ ರಸ್ತೆಯಲ್ಲಿರುವ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದಿಂದ ಸುವರ್ಣರಿಗೆ ಪತ್ರವೊಂದು ರವಾನೆಯಾಗಿ, ಅವರ ಮೊಬೈಲ್‌ ಸಂಖ್ಯೆಯನ್ನು ಮಾ. 21ರಂದು ಆಧಾರ್‌ನೊಂದಿಗೆ ಜೋಡಿಸಲಾಗಿದೆ ಎಂಬ ಮಾಹಿತಿ ತಲುಪಿತ್ತು. ಕೈ ಬೆರಳಚ್ಚು ಹೊಂದಾಣಿಕೆ, ಇನ್ನಿತರ ಕ್ರಮಗಳಿಗಾಗಿ ಉಡುಪಿ ಬನ್ನಂಜೆಯ ಆಧಾರ್‌ ಕೇಂದ್ರದ ಅಧಿಕಾರಿಗಳು ಸಂಪರ್ಕಿಸಲಿರುವುದಾಗಿ ಬೆಂಗಳೂರಿನಿಂದ ದೂರವಾಣಿಯ ಮೂಲಕ ತಿಳಿಸಿದ್ದರು.

ತಿಂಗಳಿಂದೀಚೆಗೆ ನಡೆದದ್ದು ಅಚ್ಚರಿ
ಈಚೆಗೆ ಒಂದು ತಿಂಗಳ ಹಿಂದೆ ಬನ್ನಂಜೆ ಆಧಾರ್‌ ಕೇಂದ್ರದ ಅಧಿಕಾರಿಗಳು ಅಗತ್ಯ ಉಪಕರಣಗಳೊಂದಿಗೆ ಸುವರ್ಣ ಅವರ ಮನೆಗೆ ಆಗಮಿಸಿದ್ದರು. ಸುವರ್ಣ ಮತ್ತು ಅವರ ಪತ್ನಿಯ ಬೆರಳಚ್ಚು ಹೊಂದಾಣಿಕೆ ಮೊದಲಾದ ಉಪಕ್ರಮಗಳನ್ನು ಪೂರೈಸಿ ತೆರಳಿದ್ದರು. ಪತ್ನಿ ವಸಂತಿ ಸುವರ್ಣ (65) ವಿಳಾಸ ಬದಲಾವಣೆ ಮತ್ತು ಮೊಬೈಲ್‌ ಸಂಖ್ಯೆ ಜೋಡಣೆಯೊಂದಿಗೆ 15 ದಿನಗಳ ಹಿಂದೆ ಹೊಸ ಆಧಾರ್‌ ಕಾರ್ಡ್‌ ಪಡೆದಿದ್ದರು. ಇಂದು (ಸೋಮವಾರ) ಮೋಹನ ಕೆ. ಸುವರ್ಣ ಅವರಿಗೂ ನೂತನ ಆಧಾರ್‌ ಕಾರ್ಡ್‌ ತಲುಪಿದೆ.

— ಆರಾಮ

ಟಾಪ್ ನ್ಯೂಸ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.