ಚಂಡಮಾರುತದ ಪರಿಣಾಮ: ದಡದತ್ತ ಧಾವಿಸಿದ ಬೋಟುಗಳು
Team Udayavani, Dec 16, 2022, 7:15 AM IST
ಮಲ್ಪೆ: ಮ್ಯಾಂಡಸ್ ಚಂಡಮಾರುತದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ನೀಡಿರುವ ಮುನ್ನೆಚ್ಚರಿಕೆಯ ಅನುಸಾರ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಹೆಚ್ಚಿನ ದೋಣಿಗಳೂ ತಟದತ್ತ ಧಾವಿಸಿವೆ.
ಮೂರ್ನಾಲ್ಕು ದಿನದ ಹಿಂದೆ ಉತ್ತರ ದಿಕ್ಕಿಗೆ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಮೀನುಗಾರರಿಗೆ ಯಾವ ಸಮಸ್ಯೆಯೂ ಎದುರಾಗಿಲ್ಲವಾದರೂ ದಕ್ಷಿಣದತ್ತ ಸಾಗಿದ ಬೋಟುಗಳು ಗಾಳಿಯ ಒತ್ತಡದಿಂ ದಾಗಿ ಮೀನುಗಾರಿಕೆ ನಡೆಸಲಾಗದೆ ಸಮೀಪದ ಬಂದರು ಪ್ರವೇಶಿಸಿವೆ.
ಇದೀಗ ಉತ್ತರದ ಕಡೆಯಲ್ಲೂ ಆಳಸಮುದ್ರದಲ್ಲಿ ಚಂಡಮಾರುತ ಪ್ರಭಾವ ಕಾಣಿಸಿಕೊಂಡಿದ್ದು ಅತ್ತ ತೆರಳಿದ್ದ ಆಳಸಮುದ್ರ ಬೋಟುಗಳ ಪೈಕಿ ಕೆಲವು ಸಮುದ್ರ ಮಧ್ಯೆ ಲಂಗರು ಹಾಕಿ ನಿಂತರೆ, ಇನ್ನು ಕೆಲವು ಸಮೀಪದ ಬಂದರನ್ನು ಆಶ್ರಯಿಸಿವೆ.
ಆಳಸಮುದ್ರದಲ್ಲಿರುವ ಬೋಟುಗಳು ಗಾಳಿಯ ಒತ್ತಡ ಕಡಿಮೆ ಆದಾಗ ಮೀನುಗಾರಿಕೆ ಮಾಡುವ ಸಾಧ್ಯತೆ ಇದೆ. ಬಂದರು ಸೇರಿರುವ ದೋಣಿಗಳು ಹವಾಮಾನ ಇಲಾಖೆ ಸೂಚನೆಯ ಬಳಿಕ ಹೊರಡಲಿವೆ ಎಂದು ಮಲ್ಪೆ ಮೀನುಗಾರರ ಸಂಘದ ಕಾರ್ಯದರ್ಶಿ ರತ್ನಾಕರ ಸಾಲ್ಯಾನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್