ಪಚ್ಚು ಎಂದರೆ ನೀನೇನಾ…? ಮಣಿಪಾಲದ ಪಬ್ ನಲ್ಲಿ ಗಲಾಟೆ, ಹಲ್ಲೆ.. ದೂರು, ಪ್ರತಿದೂರು
Team Udayavani, Jan 3, 2023, 7:56 AM IST
ಮಣಿಪಾಲ : 80 ಬಡಗಬೆಟ್ಟುವಿನ ಪಬ್ವೊಂದರಲ್ಲಿ ನಡೆದ ಘಟನೆಗೆ ಸಂಬಂಧಿಸಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
ಕಾಡಬೆಟ್ಟುವಿನ ಪ್ರಶಾಂತ್ ಅವರು ಪಬ್ನಲ್ಲಿರುವಾಗ ಅಪರಿಚಿತರು ಬಂದು “ಪಚ್ಚು ಎಂದರೆ ನೀನೇನಾ? ಹೊರಗೆ ಬಾ ಎಂದು ಹೇಳಿ ಹೊರಗೆ ಹೋಗಿ ಲೇಕ್ವ್ಯೂ ಹೊಟೇಲ್ ಕಡೆಗೆ ಹೋದಾಗ ಪ್ರಶಾಂತ್ ಅವರನ್ನು ಹಿಂಬಾಲಿಸಿಕೊಂಡು ಹೋಗಿದ್ದರು. ಈ ವೇಳೆ ಪರಿಚಯದ ರತನ್ ಮತ್ತು ಇತರ ಇಬ್ಬರು ಸೇರಿ ಪ್ರಶಾಂತ್ ಅವರ ತಲೆಗೆ, ಮುಖಕ್ಕೆ, ಬೆನ್ನಿಗೆ ಬೇಸ್ ಬ್ಯಾಟ್ ನಿಂದ ಹಲ್ಲೆ ಮಾಡಿದ್ದಾರೆ. ಮತ್ತೋರ್ವ ಚೂರಿಯಿಂದ ಚುಚ್ಚಿ ಗಾಯಗೊಳಿಸಿದ್ದಾನೆ. ಈ ವೇಳೆ ಜನ ಸೇರಿದಾಗ ಆರೋಪಿಗಳು ಪ್ರಶಾಂತ್ನಿಗೆ ಜೀವಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಪ್ರತಿದೂರು
ಕೊಡವೂರಿನ ರತನ್ ಅವರು ಮಣಿಪಾಲದ ಲೇಕ್ವ್ಯೂ ಬಳಿ ಬಂದು ಲೋಯ್ಡನಿಗೆ ಕರೆ ಮಾಡಿದಾಗ ಬೇರೆ ಯಾರೋ ಪೋನ್ ಸ್ವೀಕರಿಸಿ ನಾನು ಪಚ್ಚು ಯಾನೆ ಪ್ರಶಾಂತ್ ಮಾತನಾಡೋದು ಎಂದು ಹೇಳಿ ಹಣವನ್ನು ಪಡೆದುಕೊಳ್ಳಲು ಸಿಗ್ಮಾ ಬಾರ್ ಬಳಿ ಇರುವ ರಿಂಗ್ ಜೋನ್ಗೆ ಬರಲು ತಿಳಿಸಿದ್ದರು. ಅಲ್ಲಿಗೆ ಹೋದಾಗ ಪ್ರಶಾಂತ ಯಾನೆ ಪಚ್ಚು ಚೂರಿಯಿಂದ ತಿವಿಯಲು ಬಂದಾಗ ಎದೆಯ ಎಡ ಬದಿಗೆ ಚೂರಿ ತಾಗಿ ಗಾಯವಾಗಿದೆ. ಆರೋಪಿ ಪ್ರಶಾಂತ, ರತನ್ನನ್ನು ಅಟ್ಟಿಸಿಕೊಂಡು ಓಡುವಾಗ ಎಡವಿ ಬಿದ್ದು ಆತನ ಕಣ್ಣಿಗೂ ಗಾಯವಾಗಿದೆ ಎಂದು ಪ್ರತಿದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ