ಸರ ಸುಲಿಗೆ: ಆರೋಪಿಯ ಬಂಧನ
Team Udayavani, Sep 13, 2019, 5:13 PM IST
ಉಡುಪಿ: ಮಂಚಿಕೋಡಿ ಗದ್ದೆಯ ಬಳಿ ಸೆ.12ರಂದು ಬೆಳಗ್ಗೆ ಲಲಿತಾ ನಾಯ್ಕ ಎಂಬವರ ಕುತ್ತಿಗೆಯಿಂದ ಸರ ಸುಲಿಗೆ ಮಾಡಿದ್ದ ಆರೋಪಿ, ಮಂಚಿಕುಮೇರಿ ನಿವಾಸಿ ಪ್ರವೀಣ ನಾಯ್ಕ(32) ಎಂಬಾತನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯಿಂದ ಚಿನ್ನದ ಸರವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಎಸ್ಪಿ ನಿಶಾ ಜೇಮ್ಸ್, ಎಎಸ್ಪಿ ಕುಮರಾಚಂದ್ರ ಹಾಗೂ ಡಿವೈಎಸ್ಪಿ ಟಿ.ಜೈಶಂಕರ್ ಅವರ ಮಾರ್ಗದರ್ಶನದಲ್ಲಿ ಮಣಿಪಾಲ ಪ್ರಭಾರ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಎ. ಮತ್ತು ಉಪನಿರೀಕ್ಷಕ ಶ್ರೀಧರ ನಂಬಿಯಾರ್ ಎಂ.ಪಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಪ್ರಕರಣ ಹಿನ್ನೆಲೆ:
ಮಂಚಿಕೋಡಿಯ ಲಲಿತಾ (52) ಅವರು ಮಣಿಪಾಲದ ಸಂಸ್ಥೆಗೆ ಕೆಲಸಕ್ಕೆಂದು ನಡೆದುಕೊಂಡು ಹೋಗುತ್ತಿದ್ದಾಗ ಮಂಚಿಕೋಡಿ ಗದ್ದೆಯ ಬಳಿ ಹೆಲ್ಮೆಟ್, ರೈನ್ಕೋಟ್ ಧರಿಸಿದ್ದ ಯುವಕ ಕುತ್ತಿಗೆಗೆ ಕೈ ಹಾಕಿದ. ಲಲಿತಾ ಅವರು ಯುವಕನನ್ನು ತಳ್ಳಿದಾಗ ಆಯತಪ್ಪಿ ಗದ್ದೆಗೆ ಬಿದ್ದರು. ಬಿದ್ದಲ್ಲಿಗೆ ಮತ್ತೆ ಬಂದ ಯುವಕ ಲಲಿತಾರ ಕುತ್ತಿಗೆಯಲ್ಲಿದ್ದ ಸರ ಸೆಳೆದೊಯ್ದಿದ್ದಾನೆ.
ಎಳೆಯುವಾಗ ಸರ ತುಂಡಾ ಗಿದ್ದು ಒಂದು ತುಂಡು ಲಲಿತಾರ ಕುತ್ತಿಗೆಯಲ್ಲಿ ಉಳಿದುಕೊಂಡಿತು. ಸರ ಎಳೆದುಕೊಂಡಾತ ಅದೇ ಊರಿನ ಪ್ರವೀಣ್ ಎಂಬಾತ ಎಂದು ಗುರುತಿಸಲಾಗಿದೆ. ಎಳೆದೊಯ್ದ ಸರದ ಮೌಲ್ಯ 9,000 ರೂ.ಗಳು ಎಂದು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
Rural Life: ಗ್ರಾಮೀಣ ಬದುಕಿನ ಮೆಲುಕು