ಮಣಿಪಾಲ ವಿದ್ಯಾರ್ಥಿಗಳಿಗೆ ನೆರೆ ತಡೆ
Team Udayavani, Aug 10, 2019, 5:51 AM IST
ಉಡುಪಿ: ಮಣಿಪಾಲ ಮಾಹೆಯ ಸ್ಕೂಲ್ ಆಫ್ ಆರ್ಕಿಟೆಕ್ಚರ್ನ 40 ಮಂದಿ ವಿದ್ಯಾರ್ಥಿಗಳು ಬಾದಾಮಿ ಸಮೀಪದ ಹೊಸೂರಿನಲ್ಲಿ ನೆರೆಯಲ್ಲಿ ಸಿಲುಕಿ ಪಾರಾಗಿರುವ ಘಟನೆ ಸಂಭವಿಸಿದೆ.
ಅಧ್ಯಯನ ಪ್ರವಾಸಕ್ಕಾಗಿ ಸೋಮವಾರ ಬೆಂಗಳೂರಿಗೆ ತೆರಳಿ ಅಲ್ಲಿಂದ ಶುಕ್ರವಾರ ಮುಂಜಾವ 5 ಗಂಟೆಯ ಸುಮಾರಿಗೆ ಹುಬ್ಬಳ್ಳಿ ಕಡೆಗೆ ಹೊರಟಿದ್ದ 40 ವಿದ್ಯಾರ್ಥಿಗಳು ಹಾಗೂ ಇಬ್ಬರು ಪ್ರಾಧ್ಯಾಪಕರ ತಂಡವಿದ್ದ ಖಾಸಗಿ ಬಸ್ ಬಾದಾಮಿಯಿಂದ 20 ಕಿ.ಮೀ ದೂರದ ಹೊಸೂರು ತಲುಪುತ್ತಿದ್ದಾಗ ದಿಢೀರ್ ಸುರಿದ ಭಾರೀ ಮಳೆಯಿಂದ ನೆರೆಯುಂಟಾಗಿ ಬಸ್ ಮುಂದಕ್ಕೆ ಚಲಿಸಲು ಅಸಾಧ್ಯವಾಯಿತು. ಅನಂತರ ವಿದ್ಯಾರ್ಥಿಗಳು ಬೇರೆ ಬಸ್ನಲ್ಲಿ ಹುಬ್ಬಳ್ಳಿ ತಲುಪಿದ್ದಾರೆ.
ಸುರಕ್ಷಿತ: ವಿದ್ಯಾರ್ಥಿಗಳೆಲ್ಲರೂ ಸುರಕ್ಷಿತರಾಗಿದ್ದಾರೆ. ಈ ಬಗ್ಗೆ ಈಗಾಗಲೇ ಮಕ್ಕಳ ಪಾಲಕರಿಗೆ ಮಾಹಿತಿ ನೀಡಲಾಗಿದೆ ಎಂದು ಸ್ಕೂಲ್ ಆಫ್ ಅರ್ಕಿಟೆಕ್ಚರ್ನ ನಿರ್ದೇಶಕ ರಾಮಸ್ವಾಮಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್