ಮಣಿಪಾಲದಲ್ಲಿ ಮೊದಲ ಸಾಹಿತ್ಯ ಸಮ್ಮೇಳನ
Team Udayavani, Aug 3, 2017, 6:15 AM IST
ಉಡುಪಿ: ಮಣಿಪಾಲ ವಿಶ್ವವಿದ್ಯಾನಿಲಯ ಹಾಗೂ ಮಣಿಪಾಲದ ಅಂತಾರಾಷ್ಟ್ರೀಯ ಸಾಹಿತ್ಯ ಮತ್ತು ಕಲಾ ವೇದಿಕೆ ವತಿಯಿಂದ ಇದೇ ಮೊದಲ ಬಾರಿಗೆ ಸೆ. 15ರಿಂದ 17ರ ವರೆಗೆ ಮಣಿಪಾಲದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಮಣಿಪಾಲ ವಿ. ವಿ. ಪ್ರಸ್ನ ಪ್ರಧಾನ ಸಂಪಾದಕಿ ನೀತಾ ಇನಾಮಾªರ್ ತಿಳಿಸಿದರು.
ಮಣಿಪಾಲದ ಗಂಗೂಬಾಯಿ ಹಾನಗಲ್ ಸಭಾಂಗಣದಲ್ಲಿ ಸೆ. 15ರ ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಸಾಹಿತ್ಯ ಸಮ್ಮೇಳನವನ್ನು ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಉದ್ಘಾಟಿಸಲಿದ್ದು, ಸಾಹಿತಿ ವೈದೇಹಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಮಣಿಪಾಲ ವಿ.ವಿ.ಯ ಉಪ ಕುಲಪತಿ ಡಾ| ವಿನೋದ್ ಎಚ್. ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮೂರು ದಿನಗಳ ಕಾಲ ನಡೆಯುವ ಈ ಸಾಹಿತ್ಯ ಸಮ್ಮೇಳನದಲ್ಲಿ ಭಾಷಾಂತರಕಾರರ ಕಮ್ಮಟ, ಸಾಹಿತ್ಯ ಕಮ್ಮಟ, ಚಲನಚಿತ್ರ ಪ್ರದರ್ಶನ, ಕಲಾ ಪ್ರದರ್ಶನ, ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಯುವ ಜನೋತ್ಸವ ನಡೆಯಲಿದೆ.ನಾಡಿನ ಖ್ಯಾತ ಲೇಖಕರಾದ ಕೆ. ಸತಿcàದಾನಂದನ್, ಕಿರಣ್ ನಾಗರ್ಕರ್, ಎಂ.ಜಿ. ವೆಂಕಟೇಶನ್, ಒ.ಎಲ್. ನಾಗಭೂಷಣ್, ಇರಾ ಪಾಂಡೆ, ವಿವೇಕ್ ಶಾನ್ಭಾಗ್, ಶಾಂತ ಗೋಖಲೆ, ಅಂಜುಂ ಕತ್ಯಾಲ್, ವಿವೇಕ್ ರೈ, ಜಯಂತ್ ಕಾಯ್ಕಿಣಿ ಸಹಿತ ಹಲವರು ಪಾಲ್ಗೊಳ್ಳಲಿದ್ದಾರೆ. ಚಿತ್ರೋತ್ಸವದಲ್ಲಿ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಎನ್. ಮನು ಚಕ್ರವರ್ತಿ,ಅರುಣರಾಜೆ ಪಾಟೀಲ್ ಪಾಲ್ಗೊಳ್ಳಲಿ
ದ್ದಾರೆ. ಎಂ.ಎಲ್. ಸಾಮಗ ಅವರಿಂದ ತಾಳಮದ್ದಳೆ, ಕಂಬಾರರ ಮಹಮ್ಮಾಯಿ ನಾಟಕ, ಆನಂದ ಜಯಂತ್ ಶಂಕರ್
ಅವರಿಂದ ಭರತನಾಟ್ಯ ಪ್ರದರ್ಶನಗೊಳ್ಳಲಿದೆ.
ಚೋಮನದುಡಿ, ಮಹಮ್ಮಾಯಿ, ಮುಖಮುದ್ರೆ ಸಹಿತ 5ಕೃತಿಗಳನ್ನು ಭಾಷಾಂತರಿಸಲಾಗಿದ್ದು, ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆಗೊಳ್ಳಲಿದೆ.ಪತ್ರಿಕಾಗೋಷ್ಠಿಯಲ್ಲಿ ರಂಗಕರ್ಮಿ ರೇವತಿ ನಾಡಿಗೇರ್, ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ