ಮಣ್ಣಪಳ್ಳಕ್ಕೆ ಹಸಿರುಡಿಸುವ ಕೆಲಸ
Team Udayavani, Jun 9, 2018, 7:10 AM IST
ಮಣಿಪಾಲ: ಮಣಿಪಾಲದ ಪ್ರಮುಖ ತಾಣ, ಮಣ್ಣಪಳ್ಳ ಕೆರೆಯ ಸುತ್ತಲಿನ ಪರಿಸರವನ್ನು ಮತ್ತಷ್ಟು ಹಸಿರೀಕರಣಗೊಳಿಸುವ ಸಣ್ಣ ಪ್ರಯತ್ನವೊಂದು ಇದೀಗ ನಡೆಯುತ್ತಿದೆ. ಈ ಮೂಲಕ ಮತ್ತಷ್ಟು ಸಸಿಗಳಿಗೆ ಆಶ್ರಯಕೊಟ್ಟು, ಪ್ರಕೃತಿಯನ್ನು ಸುಂದರಗೊಳಿಸುವ ಕೆಲಸ ಇದಾಗಿದೆ.
ಸುಮಾರು ನೂರು ಎಕ್ರೆ ವಿಸ್ತೀರ್ಣ ಹೊಂದಿರುವ ಈ ಕೆರೆಯ ದಂಡೆಯಲ್ಲಿ ಸುಮಾರು 350 ಬಗೆಯ ಗಿಡಗಳನ್ನು ನೆಡುವುದರ ಹಸಿರು ವೃದ್ಧಿಯ ಕೆಲಸವನ್ನು ಅರಣ್ಯ ಇಲಾಖೆ ಮಾಡುತ್ತಿದ್ದು, ಇದಕ್ಕೆ ಗುರುವಾರ ಚಾಲನೆ ಸಿಕ್ಕಿದೆ.
ಮಣ್ಣಪಳ್ಳ ಕೆರೆ ಸುತ್ತ ಮುಂಗಾರು ಆರಂಭದಲ್ಲಿ ಗಿಡ ನೆಡುವ ಕಾರ್ಯ ನಡೆಯುತ್ತಿದ್ದು, ಇದರ ಜವಾಬ್ದಾರಿಯನ್ನು ಉಡುಪಿ ನಗರ ಸಭೆ, ರೋಟರಿ ಕ್ಲಬ್ ಹೊತ್ತುಕೊಳ್ಳುತ್ತದೆ. ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡುವ ಹೊತ್ತಿನಲ್ಲಿ ಅರಣ್ಯಾಧಿಕಾರಿಗಳಾದ ದಯಾನಂದ ಮತ್ತು ಕೇಶವ ಪೂಜಾರಿ, ಉಡುಪಿ ನಗರಸಭೆಯ ಮುಖ್ಯಾಧಿಕಾರಿ ನರಸಿಂಹ ನಾಯಕ್,ರೋಟರಿ ಕ್ಲಬ್ನ ಅಧ್ಯಕ್ಷೆ ತಾರಾ ಶೆಟ್ಟಿ, ಸದಸ್ಯರಾದ ಜಾಹ್ನವಿ, ಸವಿತಾ ಭಟ್ ಹಾಗೂ ಸುಂದರ್ ಶೆಟ್ಟಿ ಉಪಸ್ಥಿತರಿದ್ದರು.
ಕಾಡು ಉಳಿಸೋಣ
ಕಾಡು ನಾಶವಾದರೆ ಮಳೆ ಸರಿಯಾಗಿ ಆಗುವುದಿಲ್ಲ. ಇದರಿಂದ ಬೆಳೆಯೂ ಇಲ್ಲ ಇದು ಒಂದಕ್ಕೊಂದು ಕೊಂಡಿ ಇದ್ದಂತೆ. ನಮ್ಮಿಂದ ನಾಶವಾಗುತ್ತಿರುವ ಪ್ರಕೃತಿಯನ್ನು ನಾವೇ ಕಟ್ಟಬೇಕು.
– ದಯಾನಂದ್, ಅರಣ್ಯಾಧಿಕಾರಿ
ಪರಿಸರ ಆರೋಗ್ಯಕರ
16 ವರ್ಷದ ಸತತ ಪ್ರಯತ್ನದಿಂದ ಬಂಜರು ಭೂಮಿಯಂತಿದ್ದ ಮಣಿಪಾಲದ ಮಣ್ಣಪಲ್ಲ ಕೆರೆ ಗಿಡ-ಮರಗಳಿಂದ ಹಚ್ಚ ಹಸಿರಿನ ರೂಪು ಪಡೆದಿದೆ.ಯಾವುದೇ ಪ್ರದೇಶವಾದರೂ ಹಸುರಿನ ಸೊಬಗು ಹೊಂದಿದ್ದರೆ ಅದರ ಸೌಂದರ್ಯ ದುಪ್ಪಟ್ಟಾಗುತ್ತದೆ ಹಾಗೂ ಸುತ್ತಮುತ್ತಲಿನ ಪರಿಸರವೂ ಆರೋಗ್ಯಕರವಾಗಿ ಕಾಣುತ್ತದೆ.
– ನರಸಿಂಹ ನಾಯಕ್
ಉಡುಪಿ ನಗರ ಸಭೆಯ ಮುಖ್ಯಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು