ಮಾವಿನಕಾರು: ಹೊಳೆ ದಾಟಲು ಬೇಕು ಕಿರುಸೇತುವೆ


Team Udayavani, Aug 3, 2018, 6:00 AM IST

0108klre2.jpg

ಕೊಲ್ಲೂರು: ಕೊಲ್ಲೂರಿನಿಂದ ಸುಮಾರು 3 ಕಿ.ಮೀ. ದೂರದ ಮಾವಿನಕಾರು ಎಂಬಲ್ಲಿ ಹೊಳೆಗೆ ಸೇತುವೆ ಇಲ್ಲದ್ದರಿಂದ ಮೇಲ್ಮನೆ ಕಂಬಳಗದ್ದೆಯ ನಿವಾಸಿಗಳು ಇಲ್ಲಿನ ವೆಂಟೆಂಡ್‌ ಡ್ಯಾಂ ಮೇಲೆಯೇ ಉಸಿರು ಬಿಗಿಹಿಡಿದು ಸಾಗಬೇಕಾದ ಪರಿಸ್ಥಿತಿ ಇದೆ.  

ಭದ್ರತೆಯಿಲ್ಲ 
ಈ ಭಾಗದ ಗದ್ದೆಗಳಿಗೆ ನೀರುಣಿಸಲು ನಿರ್ಮಿಸಲಾದ ಕಿಂಡಿ ಅಣೆಕಟ್ಟು ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಇದನ್ನೇ ಇಲ್ಲಿನ ನಿವಾಸಿಗಲು ಹೊಳೆ ದಾಟಲೂ ಬಳಸುತ್ತಾರೆ. ಶಾಲೆಗೆ ತೆರಳವ ವಿದ್ಯಾರ್ಥಿಗಳೂ ಇದರ ಮೇಲೆಯೇ ಸಾಗಬೇಕು. ಆದರೆ ಡ್ಯಾಮ್‌ನ 2 ಕಡೆಯಲ್ಲಿ ರಿವೀಟ್‌ಮೆಂಟ್‌ ಕಟ್ಟದಿರುವುದು ಅನಾಹುತ ಆಹ್ವಾನಿಸುವಂತಿದೆ. ಮಕ್ಕಳು ನಡೆವಾಗ ಸ್ವಲ್ಪ ತಪ್ಪಿದರೂ ನೀರಿಗೆ ಬೀಳುವ ಅಪಾಯವಿದೆ.
  
ಕಿರುಸೇತುವೆ ಅಗತ್ಯ 
ಮೇಲ್ಮನೆ ಭಾಗದಲ್ಲಿ ಸುಮಾರು 15 ರಿಂದ 20 ಕುಟುಂಬಗಳು ಅದರಲ್ಲೂ ಮುಖ್ಯವಾಗಿ ಮರಾಠಿ ಜನಾಂಗದ 130 ಮಂದಿ ಇಲ್ಲಿ ವಾಸವಾಗಿದ್ದಾರೆ. ಪ್ರತಿಯೊಂದು ಕೆಲಸ ಕಾರ್ಯಕ್ಕೂ ಅಗಲ ಕಿರಿದಾದ ವೆಂಟೆಡ್‌ ಡ್ಯಾಮ್‌ನಲ್ಲೇ ಇವರು ಸಾಗಬೇಕು. ಈ ವಿಚಾರದಲ್ಲಿ ಸೇತುವೆಗಾಗಿ ಇಲ್ಲಿನ ನಿವಾಸಿಗಳು ಇಲಾಖೆಗಳಿಗೆ ಮನವಿ ನೀಡಿದ್ದಾರೆ. ಜನಪ್ರತಿನಿಧಿಗಳಿಗೂ ಹೇಳಿದ್ದಾರೆ. ಆದರೆ ಸಕಾರಾತ್ಮಕ ಉತ್ತರ ಬಂದಿಲ್ಲ. ಬಹಳಷ್ಟು ವರುಷಗಳ ಹಿಂದೆ ಹೊಳೆಗೆ ಮರದ ಕಾಲುಸಂಕ ಇತ್ತು. ವೆಂಟೆಡ್‌ ಡ್ಯಾಮ್‌ ನಿರ್ಮಿಸಿದ ಅನಂತರ ಜನರು ಅದನ್ನೇ ಸಾಗುವ ದಾರಿಯಾಗಿ ಉಪಯೋಗಿಸಲು ಆರಂಭಿಸಿದ್ದರು. ವರ್ಷ ಪೂರ್ತಿ ಈ ಹೊಳೆಯಲ್ಲಿ ನೀರು ಇರುವುದರಿಂದ ಸೇತುವೆ ಅಗತ್ಯ ಹೆಚ್ಚಾಗಿದೆ. 

ತುರ್ತು ಸಂದರ್ಭ ದೇವರೇ ಗತಿ
ಅನಾರೋಗ್ಯ ಉಂಟಾದರೆ ತುರ್ತು ಚಿಕಿತ್ಸೆಗೆ ತೆರಳಬೇಕಾದವರ ಪಾಡು ಹೇಳ ತೀರದು. ಏಕೆಂದರೆ ಇಲ್ಲಿ ವಾಹನ ಸೌಲಭ್ಯವಿಲ್ಲ. ಮಣ್ಣಿನ ರಸ್ತೆ ಮಾತ್ರ ಇದೆ. ಇದರಲ್ಲಿ ವಾಹನಗಳು ಸಾಗಲು ಹರಸಾಹಸ ಪಡಬೇಕಾಗುತ್ತದೆ. ಸೌಲಭ್ಯಗಳ ಕೊರತೆಯಿಂದ ನಲುಗುತ್ತಿರುವ ಕಂಬಳಗದ್ದೆ ಮೇಲ್ಮನೆ ನಿವಾಸಿಗಳಿಗೆ ಕಿರು ಸೇತುವೆ ಹಾಗೂ ನೇರ ಸಂಪರ್ಕ ರಸ್ತೆಯ ಕೊರತೆ ಎದ್ದು ಕಾಣುತ್ತಿದೆ .

ಡಾಮರು ಹಾಕಲು ಕಾನೂನು ತೊಡಕು 
ಈ ಭಾಗಕ್ಕೆ ವಿದ್ಯುತ್‌ ಸಂಪರ್ಕ ಆಗಿದೆ. ಆದರೆ ಡಾಮರು ಹಾಕಲು ಕಾನೂನು ತೊಡಕಿದೆ. ವನ್ಯಜೀವಿ ವಲಯ ಆದ್ದರಿಂದ ಕಾನೂನು ತೊಡಕು ಇದ್ದು ಮಾವಿನಕಾರಿನಿಂದ ಮೇಲ್ಮನೆವರೆಗೆ ಡಾಮರೀಕರಣ ಆಗಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಕೂಡಲೇ ಗಮನ ಹರಿಸಬೇಕಿದೆ.  

ಸಮಸ್ಯೆ ಬಗೆಹರಿಸಿ
ಮಾವಿನಕಾರಿನ ಮೇಲ್ಮನೆ ಕಂಬಳಗದ್ದೆಯ ನಿವಾಸಿಗಳಿಗೆ ಕಿರು ಸೇತುವೆ ಅತೀ ಅಗತ್ಯ. ಐಪಿಡಿಪಿ ಇಲಾಖೆ ಹೆಚ್ಚಿನ ಆಸಕ್ತಿ ವಹಿಸಿ ಈ ಭಾಗದ ನಿವಾಸಿಗಳ ಸಮಸ್ಯೆ ಬಗೆಹರಿಸಬೇಕು .
– ಜಯಪ್ರಕಾಶ ಶೆಟ್ಟಿ, ಕೊಲ್ಲೂರು ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ

ಸರಕಾರದ ಮೇಲೆ ಒತ್ತಡ ಹಾಕುತ್ತೇನೆ
ಬೈಂದೂರು ಕ್ಷೇತ್ರ ವ್ಯಾಪ್ತಿಯ ಬಹುತೇಕ ಕಡೆ ನದಿಗಳಿರುವಲ್ಲಿ ಸಂಪರ್ಕ ಸೇತುವೆಯ ಕೊರತೆ ಇದೆ. ಅದಕ್ಕೊಂದು ಪರಿಹಾರ ಕಂಡುಕೊಳ್ಳುಲು ಕಿರು ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಲು ಸರಕಾರದ ಮೇಲೆ ಒತ್ತಡ ಹೇರಲಾಗುವುದು. 
– ಬಿ.ಎಮ್‌. ಸುಕುಮಾರ ಶೆಟ್ಟಿ,
ಶಾಸಕರು, ಬೈಂದೂರು

– ಡಾ| ಸುಧಾಕರ ನಂಬಿಯಾರ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.