ಸಮುದ್ರದಲ್ಲಿ ಮತ್ಸ್ಯ ಸಂಪತ್ತು ವೃದ್ಧಿಯ ಲಕ್ಷಣ…?
Team Udayavani, Aug 18, 2019, 5:48 AM IST
ಮಲ್ಪೆ: ಮಲ್ಪೆ ಕಡಲತೀರದ ಉದ್ದಕ್ಕೂ ಅಪಾರ ಪ್ರಮಾಣದಲ್ಲಿ ಕಡಲಮಡಿ (ಕಡಲ ತ್ಯಾಜ್ಯ) ತೇಲಿ ಬಂದಿದೆ. ಇದು ಸಮುದ್ರದಲ್ಲಿ ಮತ್ಸ್ಯ ಸಂಪತ್ತು ವೃದ್ಧಿಯ ಲಕ್ಷಣ ಎನ್ನಲಾಗುತ್ತಿದ್ದು ಮೀನುಗಾರರಲ್ಲೂ ಸಂತಸ ಮೂಡಿಸಿದೆ.
ಏನಿದು ಮಡಿ ಬೀಳುವುದು ?
ಮಳೆಗಾಲದ ಸಮಯದಲ್ಲಿ ನದಿ ತೊರೆಗಳ ಮೂಲಕ ಹರಿದು ಬಂದು ಸಮುದ್ರ ಸೇರಿದ ಮರಗಿಡ ಭಾಗಗಳು, ಬಳ್ಳಿಗಳು, ಎಲೆಗಳು ಸಮುದ್ರ ಬಿರುಸುಗೊಂಡ ಬಳಿಕ ತನ್ನೊಡಲು ಸೇರಿದ ಎಲ್ಲಾ ಕಸಕಡ್ಡಿಗಳನ್ನು ಕಡಲ ತೀರದಲ್ಲಿ ಹೊರ ಹಾಕುತ್ತದೆ. ಇದನ್ನು ಕರಾವಳಿಗರು ಮಡಿ ಬೀಳುವುದು ಎನ್ನುತ್ತಾರೆ. ಕಡಲ ತಡಿಯಲ್ಲಿ ಬಿದ್ದಿರುವ ಕಡಲತ್ಯಾಜ್ಯಕ್ಕೆ ಉಡುಪಿ ಜನರು ಮಡಿ ಎಂದು ಕರೆದರೆ, ಮಂಗಳೂರು ಕಡೆಯ ಮಂದಿ ಪಲ್ಕೆ ಬೀಳುವುದು ಎನ್ನುತ್ತಾರೆ.
ಕಾಡು, ನಗರ ಪ್ರದೇಶದ ಕಸ ಕಡ್ಡಿಗಳು, ಎಲೆಗಳು ನೆರೆ ನೀರಿನಲ್ಲಿ ಹರಿದು ಬಂದು ಕಡಲನ್ನು ಸೇರಿಕೊಳ್ಳುತ್ತವೆ. ಮಡಿ ಇರುವ ಜಾಗದಿಂದ ಸುಮಾರು 5 ಕಿ.ಮೀ. ದೂರ ಸಮುದ್ರ ಶಾಂತವಾಗಿರುತ್ತದೆ. ಈ ಜಾಗದಲ್ಲಿ ಮೀನಿನ ಸಂತತಿ ಕೂಡ ಹೆಚ್ಚಾಗಿ ಇರುತ್ತದೆ. ಈ ವೇಳೆ ತೀರ ಪ್ರದೇಶದಲ್ಲಿ ನಡೆಸುವ (ನಾಡದೋಣಿ) ಮೀನುಗಾರಿಕೆಗೆ ಹೆಚ್ಚಿನ ಪ್ರಮಾಣ ದಲ್ಲಿ ಮೀನು ಸಿಗುತ್ತದೆ ಎನ್ನುತ್ತಾರೆ ಮೀನುಗಾರರು.
ಕಾಡು ನಾಶದಿಂದ ಮಡಿ ಪ್ರಮಾಣ ಕ್ಷೀಣ
ಕಡಲು ಮಡಿ ಬೀಳುವುದು ಪ್ರತೀ ವರ್ಷ ಮಳೆಗಾಲದಲ್ಲಿ ಕಂಡು ಬರುವ ವಿದ್ಯಾಮಾನ. ಎರಡು ದಶಕದ ಹಿಂದೆ ತೀರದಲ್ಲಿ ಅಪಾರ ಪ್ರಮಾಣದಲ್ಲಿ ಸಮುದ್ರ ತೀರದಲ್ಲಿ ಸೇರುತ್ತಿತ್ತು. ಈಗೀಗ ಇದರ ಪ್ರಮಾಣವು ಕಡಿಮೆಯಾಗುತ್ತಿದೆ. ಕಾಡು, ಮರಗಿಡಗಳ ನಾಶ, ಅಲ್ಲಲ್ಲಿ ಅಣೆಕಟ್ಟುಗಳಿಂದಾಗಿ ನೀರಿನ ಹರಿವಿಗೂ ತಡೆಯಾಗುತ್ತಿರುವುದು ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಸ್ವಚ್ಛತೆ: ಪೊರಕೆ ಬಳಸುವಂತಿಲ್ಲ
ಕಡಲತಡಿಯಲ್ಲಿ ಬಿದ್ದ ಕಸವನ್ನು ಪೊರಕೆ ಹಿಡಿದು ಸ್ವಚ್ಛ ಮಾಡುವಂತಿಲ್ಲ. ಮುಟ್ಟಾದ ಮಹಿಳೆಯರು ಸ್ಪರ್ಶಿಸುವಂತಿಲ್ಲ. ಮಡಿ ಬೀಳುವುದು ದೇವರ ವರ ಎಂಬ ನಂಬಿಕೆಯೂ ಈ ಹಿಂದೆ ಮೀನುಗಾರರಲ್ಲಿತ್ತು. ಮಡಿಬಿದ್ದ ಜಾಗದಲ್ಲಿ ನಿಶಾಚರಗಳು ಸೇರಿಕೊಳ್ಳುತ್ತವೆಂಬ ನಂಬಿಕೆ ಹಿಂದಿನಿಂದಲೂ ಇದೆ. ಯಾರು ಮುಟ್ಟದಂತೆ ಈ ಹಿಂದೆ ಈ ಭಾಗದಲ್ಲಿ ಬಾವುಟವನ್ನು ಏರಿಸಲಾಗುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ