ಗೋಡೆ ಚಿತ್ರಗಳ ಮೂಲಕ ಸ್ವಚ್ಛತೆಯ ಸಂದೇಶ


Team Udayavani, Mar 20, 2021, 5:10 AM IST

visheshja

ಕಾರ್ಕಳ: ಪರಿಸರ ಸ್ವತ್ಛತೆಗೆ ಆದ್ಯತೆ ನೀಡುತ್ತಿರುವ ಕಾರ್ಕಳದ ಸ್ವತ್ಛ ಕಾರ್ಕಳ ಬ್ರಿಗೇಡ್‌ ತಂಡವು ಇಲ್ಲಿನ ಜೈನ ಧರ್ಮ ಜೀರ್ಣೋದ್ಧಾರಕ ಸಂಘ ಸಹಕಾರದಲ್ಲಿ ಸಾರ್ವಜನಿಕರಲ್ಲಿ ಸ್ವತ್ಛತೆ ಕುರಿತು ಅರಿವು ಮೂಡಿಸಲು ಗೋಡೆಗಳ ಮೇಲೆ ಚಿತ್ತಾರಗಳನ್ನು ಬಿಡಿಸುವ ಮೂಲಕ ವಿನೂತನ ಕಾರ್ಯ ನಡೆಸುತ್ತಿದೆ.

ಕಾರ್ಕಳದ ಜೈನ ಮಠ, ಗೋಮಟೇಶ್ವರ ಬೆಟ್ಟದ ಪ್ರದೇಶದ ಸುತ್ತಮುತ್ತಲ ಪ್ರದೇಶಗಳ ಗೋಡೆಗಳ ಮೇಲೆ ವಿವಿಧ ಚಿತ್ರಗಳ ಮೂಲಕ ಸ್ವತ್ಛ ಪರಿಸರ ಪರಿಕಲ್ಪನೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹಲವು ಸಂದೇಶ ಸಾರುವ ಚಿತ್ರಗಳು ಪಾದಚಾರಿಗಳು, ವಾಹನ ಸವಾರರು, ಪ್ರವಾಸಿಗರ ಗಮನ ಸೆಳೆಯುತ್ತಿವೆ.

ಗೋಡೆಗಳಲ್ಲಿ ಸ್ವತ್ಛ ಭಾರತದ ಸಂದೇಶ

ಭಗವಾನ್‌ ಶ್ರೀ ಬಾಹುಬಲಿಯ ಪವಿತ್ರ ಏಕಶಿಲಾ ಪ್ರತಿಮೆ, ಚತುರ್ಮುಖ ಬಸದಿ ವಿಶ್ವದಾದ್ಯಂತ‌ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪಟ್ನಶೆಟ್ಟಿ ಮೈದಾನದ ಬಳಿ ಮೆಟ್ಟಿಲುಗಳ ಮೂಲಕ ಗೊಮ್ಮಟ ಬೆಟ್ಟದ ಕಡೆಗೆ ಏರುವುದು ಪ್ರಾರಂಭವಾಗುತ್ತದೆ. ವಾರಾಂತ್ಯದಲ್ಲಿ ಸಹಸ್ರಾರು ಪ್ರವಾಸಿಗರು ಮತ್ತು ಮತ್ತು ಸ್ಥಳೀಯರು ಭೇಟಿ ನೀಡುವ ಈ ಪ್ರದೇಶದಲ್ಲಿ ಸ್ವತ್ಛತೆಗೆ ಹೆಚ್ಚು ಗಮನ ನೀಡುವ ಅಗತ್ಯ ಮನಗಂಡು ಸಮೀಪದ ಜೈನ ಮಠದ ಗೋಡೆಗಳನ್ನು ಸ್ವತ್ಛ ಭಾರತ ಸಂದೇಶವನ್ನು ಹರಡಲು ಬಳಸಿಕೊಳ್ಳಲಾಗಿದೆ.

ಗೋಡೆಗಳಲ್ಲಿ ತತ್ವಶಾಸ್ತ್ರ ಮತ್ತು ತುಳುನಾಡು ಸಂಸ್ಕೃತಿಯ ವಿಷಯಗಳ ಒಳಗೊಂಡ ಹಲವು ಕಲಾಕೃತಿಗಳನ್ನು ರಚಿಸಲಾಗಿದೆ. ಮರವನ್ನು ಕಡಿಯದೆ ಉಳಿಸುವುದು, ಕೊಂಬೆ ಕತ್ತರಿಸುವಾಗ ಮರ ಕಡಿಯದಿರುವುದು. ಮರ ನಾಶದಿಂದ ಆರಂಭಗೊಂಡು ಕೊನೆಗೊಳ್ಳುವ ತನಕದ ವ್ಯಕ್ತಿಯ ಆಲೋಚನೆಗಳು, ಬದುಕಲು ಬಿಡು, ಕಲ್ಪವೃಕ್ಷ, ಸ್ವತ್ಛತಾ ಕೈಪಿಡಿಗಳು ಹೀಗೆ ವಿವಿಧ ಸಂದೇಶಗಳುಳ್ಳ ಚಿತ್ರಗಳು ಇಲ್ಲಿವೆ. ಜಾಗೃತ ಸಮಾಜಕ್ಕೆ ಇವು ಹಲವು ವಿಚಾರಧಾರೆಗಳನ್ನು ನೀಡಲು ಅನುಕೂಲವಾಗಿವೆ.

ಮನ ಅರಳಿಸುವ ಚಿತ್ರಗಳು

ಗೋಡೆಗಳ ಮೇಲೆ ಚಿತ್ತಾರಗೊಂಡ ಮನಸೂರೆ ಗೊಳ್ಳುವ ಜಾಗೃತಿ ಚಿತ್ರಗಳು ನೋಡುಗರ ಮನಸ್ಸನ್ನು ಅರಳಿಸುತ್ತಿವೆ. ಸಾರ್ವಜನಿಕರಲ್ಲಿ ಸ್ವತ್ಛತೆ, ಪರಿಸರ ಸಂರಕ್ಷಣೆ ಜಾಗೃತಿಗೊಳಿಸುತ್ತಿವೆ. ಬ್ರಿಗೇಡ್‌ ಸದಸ್ಯರು ಸ್ವತಃ ಪೈಂಟಿಂಗ್‌ ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಶ್ರೀರಕ್ಷಾ, ಸಂತೋಷ್‌ ಆಚಾರ್ಯ ಮೊದಲಾದ ಚಿತ್ರಕಲಾಕಾರರ ಕೈಯಲ್ಲಿ ಅದ್ಭುತ ಹಾಗೂ ಸುಂದರ ಚಿತ್ರಗಳು ಮೂಡಿ ಬಂದಿವೆ.
ಕಾರ್ಕಳ ಸ್ವತ್ಛ ಬ್ರಿಗೇಡ್‌ನ‌ ಒಟ್ಟು ತಂಡದ ಪರಿಶ್ರಮವಿದೆ. ನ್ಯಾಯವಾದಿ ಸೂರಜ್‌ ಅವರ ಸಹಕಾರವೂ ಸಿಕ್ಕಿದೆ.

ತುಳುನಾಡ ವೈಭವ

ಕರಾವಳಿ ಭಾಗದ ತುಳುನಾಡ ಜಾನಪದ ಸಂಸ್ಕೃತಿಯನ್ನು ಪ್ರವಾಸಿಗರಿಗೆ ಪರಿಚಯಿಸುವ ಪ್ರಯತ್ನ ಕೂಡ ಇದರ ಜತೆಯಲ್ಲೇ ನಡೆದಿದೆ. ರಥೋತ್ಸವ, ಯಕ್ಷಗಾನ ಹುಲಿವೇಷ, ಭೂತದ ಕೋಲ ಮೊದಲಾದ ಚಿತ್ರಗಳು ವಿಶೇಷವಾಗಿ ಗಮನ ಸೆಳೆಯುತ್ತಿವೆ.

ಎಲ್ಲರ ಸಹಕಾರ ಪಡೆದು ವಿಸ್ತರಣೆ

ಶ್ರೀ ಭಗವಾನ್‌ ಬೆಟ್ಟದ ಆಸುಪಾಸುಗಳಲ್ಲಿ ಈಗ ಗೋಡೆಗಳಲ್ಲಿ ಕಲಾಕೃತಿಗಳನ್ನು ಆರಂಭಿಸಲಾಗಿದೆ. ಜೈನ ಮಠದ ಗೋಡೆಯ 100 ಮೀ.ನಷ್ಟು ವಿಸ್ತಾರದಲ್ಲಿ ಆಗಿದೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ಇದನ್ನು ವಿಸ್ತರಿಸುತ್ತೇವೆ.
-ಎಂ.ಕೆ. ವಿಪುಲ್‌ ತೇಜ್‌, ಬ್ರಿಗೇಡ್‌ ಸದಸ್ಯ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.