ಹೆಸ್ಕುತ್ತೂರು : ನಾಪತ್ತೆಯಾಗಿದ್ದ ಮಹಿಳೆಯ ಶವ ಪತ್ತೆ
Team Udayavani, Sep 9, 2019, 8:20 AM IST
ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಹೆಸ್ಕತ್ತೂರು ಗ್ರಾಮದಲ್ಲಿ ಸೆಪ್ಟೆಂಬರ್ 8ರಂದು ನಾಪತ್ತೆಯಾಗಿದ್ದ ಕಟ್ಟಿನ ಬುಡದ ಕನಕ ಕುಲಾಲ್ತಿ ಅವರ ಶವ ಸೋಮವಾರ ಹೆಸ್ಕತ್ತೂರು ಹೊಳೆ ಸೇತುವೆ ಸಮೀಪ ಪತ್ತೆಯಾಗಿದೆ.
ಶನಿವಾರ ತಡರಾತ್ರಿ ಮನೆಯಲ್ಲಿ ಕರೆಂಟ್ ಇಲ್ಲದ ಸಮಯದಲ್ಲಿ ಮೂತ್ರಶಂಕೆಗಾಗಿ ಹೊರಹೋಗಿದ್ದ ಅವರು ಆಕಸ್ಮಿಕವಾಗಿ ಸಮೀಪದ ತೋಡಿಗೆ ಬಿದ್ದಿರುವ ಅನುಮಾನ ವ್ಯಕ್ತವಾಗಿದೆ. ಅಂದು ರಾತ್ರಿಯೇ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ನಂತರ ಎರಡು ದಿನ ಮುಳುಗು ತಜ್ಞರು, ಅಗ್ನಿ ಶಾಮಕ ದಳ ನಿರಂತರ ಶೋಧಕಾರ್ಯ ನಡೆಸಿದ್ರೂ ನೀರಿನ ಒಳಹರಿವು ಹೆಚ್ಚಿದ್ದ ಕಾರಣ ಪ್ರಯೋಜನವಾಗಿರಲಿಲ್ಲ.
ಕನಕ ಅವರ ಮನೆಯ ಬಳಿಯಿರುವ ತೋಡು ಅಲ್ಲೇ ಹರಿಯುವ ಹೊಳೆಗೆ ಸೇರುತ್ತದೆ. ರವಿವಾರ ಈ ಜಾಗದಲ್ಲಿ ಹುಡುಕಾಟ ನಡೆಸಿದ್ದರೂ ನೀರಿನ ಹರಿವು, ಸೆಳೆತ ಹೆಚ್ಚಿದ್ದ ಕಾರಣ ಪತ್ತಯಾಗಿರಲಿಲ್ಲ. ಆದರೆ ಸೋಮವಾರ ಬೆಳಗ್ಗೆ ಏಳು ಗಂಟೆ ಸುಮಾರಿಗೆ ಕನಕ ಅವರ ಶವ ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!