ಮಿತ್ರ ವಿ. ಸೌಹಾರ್ದ ಸಹಕಾರಿ: ಶೇ.20 ಡಿವಿಡೆಂಡ್ ಘೋಷಣೆ
Team Udayavani, Aug 4, 2017, 6:25 AM IST
ಕುಂದಾಪುರ: ಮಿತ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ (ನಿ.) ಇದರ 2016-17ನೇ ಸಾಲಿನ ವಾರ್ಷಿಕ ಮಹಾಸಭೆಯು ಜು.29ರಂದು ಸಹಕಾರಿಯ ಆಡಳಿತ ಕಚೇರಿಯಲ್ಲಿ ಜರಗಿತು.
ಸಹಕಾರಿಯ ಅಧ್ಯಕ್ಷ ರಾಧಾಕೃಷ್ಣ ಯು. ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಶೇ.20 ಡಿವಿಡೆಂಡ್ ಘೋಷಣೆ ಮಾಡಿದರು. ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ರಮೇಶ ಮಡಿವಾಳ 2016-17ನೇ ಸಾಲಿನ ಆಡಳಿತ ವರದಿಯನ್ನು ವಾಚಿಸಿ ಸಂಸ್ಥೆಯ ಲಾಭಾಂಶವನ್ನು ಸದಸ್ಯರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಸಹಕಾರಿಯ ಸರ್ವ ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.