ಆಧುನಿಕ ಕೃಷಿ ಪದ್ಧತಿ,ವಾಣಿಜ್ಯ ಬೆಳೆಗೆ ಬೇಕು ಉತ್ತೇಜನ


Team Udayavani, Mar 17, 2018, 6:25 AM IST

1503Kpe8a.jpg

ತಾಲೂಕು ಅಭಿವೃದ್ಧಿಗೆ ಕೃಷಿಯ ಕೊಡುಗೆಯೂ ಗಣನೀಯ. ಇದಕ್ಕೆ ಪೂರಕವಾಗಿ ಸಾಂಪ್ರದಾಯಿಕ, ವಾಣಿಜ್ಯಿಕ ಬೆಳೆಗಳಿಗೂ ಹೆಚ್ಚಿನ ಉತ್ತೇಜನ ಕಲ್ಪಿಸಬೇಕು. ಕೃಷಿಗೆ ಆಧುನಿಕ ರೀತಿಯ ಚಿಂತನೆ, ಮೌಲ್ಯವರ್ಧಿತ ಉತ್ಪನ್ನಗಳು, ಮಾರುಕಟ್ಟೆ ವ್ಯವಸ್ಥೆಗಳು ಊರಿನ ವಿಕಾಸದ ಪಥಕ್ಕೂ ಹೆಗ್ಗುರುತಾಗಬಲ್ಲದು. 

ಕಾಪು: ತಾಲೂಕು ಅಭಿವೃದ್ಧಿ ದೃಷ್ಟಿಕೋನದಲ್ಲಿ ಈ ಭಾಗದ ಪ್ರಮುಖ ಆದಾಯ ಮೂಲವಾಗಿರುವ ಕೃಷಿಯಿಂದ ಹಲವು ಅವಕಾಶಗಳು ಪ್ರಾಪ್ತವಾಗುವ ಸಾಧ್ಯತೆಗಳಿವೆ. ಜನರ ಆರ್ಥಿಕತೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಆಧುನಿಕ ಕೃಷಿ ಪದ್ಧತಿ ಮತ್ತು ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಬೇಕಿದ್ದು ವಿಕಾಸಕ್ಕೆ ಉತ್ತಮ ನೆಲೆ ಕಲ್ಪಿಸಿಕೊಡಲಿದೆ.
 
ಭೌಗೋಳಿಕ ಹಿನ್ನೆಲೆ 
ತಾಲೂಕಿನ ಭೌಗೋಳಿಕ ಹಿನ್ನೆಲೆ ಗಮನಿಸಿ ದರೆ ಇದು ಪೂರ್ಣ ಗ್ರಾಮೀಣವೂ, ಪೇಟೆಯೂ ಅಲ್ಲದ ಪ್ರದೇಶ. ಇಲ್ಲಿ ಭತ್ತ ಪ್ರಮುಖ ಬೆಳೆಯಾಗಿದ್ದು, ಪೂರಕವಾಗಿ ಹಲವು ವಾಣಿಜ್ಯ ಬೆಳೆ ಬೆಳೆಯಲಾಗುತ್ತದೆ. ಮೀನುಗಾರಿಕೆ ಇನ್ನೊಂದು ಪ್ರಮುಖ ಕೆಲಸವಾಗಿದ್ದು, ಹೈನುಗಾರಿಕೆಯನ್ನೂ ನೆಚ್ಚಿಕೊಂಡಿರುವ ಕುಟುಂಬಗಳು ಇಲ್ಲಿ ಬಹಳಷ್ಟಿವೆ. ತಾಲೂಕಿನಲ್ಲಿ 21,939 ಎಕ್ರೆ ಸಾಗುವಳಿ ಭೂಮಿಯಿದ್ದು, 34,327 ಎಕ್ರೆ ಸಾಗುವಳಿಯೇತರ ಭೂಮಿಯಿದೆ. 5,593 ಸಣ್ಣ ರೈತರು, 12,611 ಅತೀ ಸಣ್ಣ ರೈತರು ಮತ್ತು 1,541 ದೊಡ್ಡ ರೈತರಿದ್ದಾರೆ. 3,000ಕ್ಕೂ  ಅಧಿಕ ಮೀನುಗಾರಿಕೆ ಕುಟುಂಬಗಳು, 12,000ಕ್ಕೂ ಅಧಿಕ ಹೈನುಗಾರ ಕುಟುಂಬಗಳಿವೆ. 4,200 ಹೆಕ್ಟೇರ್‌ ಭತ್ತದ ಕೃಷಿ ಇದ್ದು, ಪ್ರತಿ ವರ್ಷ ಸರಾಸರಿ 2,62,500 ಕ್ವಿಂಟಾಲ್‌ ಭತ್ತ ಬೆಳೆಯಲಾಗುತ್ತದೆ. ಶಿರ್ವದಲ್ಲಿ ಅತಿ ಹೆಚ್ಚು (ಸುಮಾರು 530 ಹೆಕ್ಟೇರ್‌) ಭತ್ತ ಕೃಷಿ ಇದೆ.  

ಸಮಸ್ಯೆಗಳು
ತಾಲೂಕಿನಲ್ಲಿ ಭತ್ತದ ಕೃಷಿಗಿರುವಷ್ಟೇ ಪ್ರಾಧಾನ್ಯ ಇತರ ಬೆಳೆಗಳಿಗೂ ಇವೆ. ಶಂಕರಪುರ ಮಲ್ಲಿಗೆ ವರ್ಷ ಪೂರ್ತಿ ಬೆಳೆದರೆ, ಮಟ್ಟುಗುಳ್ಳವನ್ನು ನವೆಂಬರ್‌ನಿಂದ ಮೇ ತಿಂಗಳವರೆಗೆ ಬೆಳೆಸಲಾಗುತ್ತದೆ. ಮಲ್ಲಿಗೆಗೆ ನುಸಿ ಭಾದೆ ಇದ್ದು, ಮಟ್ಟುಗುಳ್ಳಕ್ಕೆ ಉಪ್ಪು ನೀರಿನ ಭಾದೆ, ನುಸಿ ಭಾದೆಗಳು ಸಾಮಾನ್ಯವಾಗಿವೆ. ಇದರೊಂದಿಗೆ ಕಾಡು ಪ್ರಾಣಿಗಳ ಹಾವಳಿ, ಕೃಷಿ ಕೂಲಿಗಳ ಕೊರತೆ ಬೆಳೆಗಳಿಗೆ ಬೆಲೆ ಕಡಿಮೆ ಇರುವುದನ್ನು ಇಲ್ಲಿನ ಕೃಷಿಕರೂ ಎದುರಿಸುತ್ತಿದ್ದಾರೆ.  ಇನ್ನು, ಇಲ್ಲಿ ಎಪಿಎಂಸಿ ಕೇಂದ್ರವಿಲ್ಲ. ಇಲ್ಲಿನ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಇದರ ಅಗತ್ಯವಿದೆ. ಇದಕ್ಕೆ ಸರಕಾರದ ಮಂಜೂರಾತಿ ದೊರೆಯಬೇಕಿದೆ. ಇದರೊಂದಿಗೆ ತಾಲೂಕಿನಲ್ಲೂ ಕೃಷಿ ಮಾರುಕಟ್ಟೆ ಸಮಿತಿ ಅಗತ್ಯವಿದೆ. ಸದ್ಯ ಇದು ಉಡುಪಿ ತಾಲೂಕು ಕೃಷಿ ಮಾರುಕಟ್ಟೆ ಸಮಿತಿಯೊಂದಿಗೆ ಸೇರಿಕೊಂಡಿದೆ. 

ಆಗಬೇಕಾದ್ದೇನು? 
ಕಾಪು ಹೋಬಳಿಯಲ್ಲಿ  ರೈತ ಸಂಪರ್ಕ ಕೇಂದ್ರ ಇದ್ದರೂ, ತೋಟಗಾರಿಕೆ ಇಲಾಖೆ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳು ನಿರ್ಮಾಣವಾಗಬೇಕಿವೆ. 8 ಮಂದಿ ಅಧಿಕಾರಿಗಳಿರಬೇಕಾದ ಕೃಷಿ ಇಲಾಖೆಯಲ್ಲಿ ಕೇವಲ ಇಬ್ಬರು ಸಹಾಯಕ ಕೃಷಿ ಅಧಿಕಾರಿಗಳಿದ್ದಾರೆ. ಉಳಿದಂತೆ ಹೊರಗುತ್ತಿಗೆ ಸಿಬಂದಿ ಇದ್ದಾರೆ. 5 ಹುದ್ದೆ ಗಳು ಇನ್ನೂ ಖಾಲಿ ಇವೆ. ಇದರೊಂದಿಗೆ ಆಧುನಿಕ ಕೃಷಿ ಪದ್ಧತಿ ಬಗ್ಗೆ ತಾಲೂಕಿನಾದ್ಯಂತ  ಹೆಚ್ಚಿನ ಜಾಗೃತಿ, ಈಗಿರುವ ವಾಣಿಜ್ಯ ಬೆಳೆಗಳ ಕೃಷಿಗೆ ಹೆಚ್ಚಿನ ಉತ್ತೇಜನ, ಮೌಲ್ಯ ವರ್ಧನೆ ಕುರಿತು ಕೃಷಿಕರಲ್ಲಿ ಅರಿವು ಮೂಡಿಸಬೇಕಿದೆ. 

ಸಲಹೆ ನೀಡಿ
“ಪ್ರಗತಿ ಪಥ’ ನಮ್ಮ ಊರಿನ  ಪ್ರಗತಿಯ  ಗತಿ ಗುರುತಿಸುವ ಪ್ರಯತ್ನ.  ಕಾಪು  ತಾಲೂಕು ಪ್ರಗತಿ ಕುರಿತು ಸಲಹೆಗಳಿದ್ದರೆ  ನಮ್ಮ ವಾಟ್ಸಾಪ್‌ ನಂಬರ್‌  91485 94259ಗೆ ಕಳಿಸಿ. ಸೂಕ್ತವಾದುದನ್ನು ಪ್ರಕಟಿಸುತ್ತೇವೆ. ನಿಮ್ಮ ಹೆಸರು, ಊರು  ಹಾಗೂ ಭಾವಚಿತ್ರವಿರಲಿ.

ಪ್ರಮುಖ ಕೃಷಿಗಳು
ಮುಂಗಾರು     4,200 ಹೆಕ್ಟೇರ್‌ (ಭತ್ತ)
ಹಿಂಗಾರು     210  ಹೆಕ್ಟೇರ್‌ (ಭತ್ತ)
ಉದ್ದು     170 ಹೆಕ್ಟೇರ್‌
ಮಾವು      120.81 ಹೆಕ್ಟೇರ್‌
ತೆಂಗು     1984 ಹೆಕ್ಟೇರ್‌
ಗೇರು     617 ಹೆಕ್ಟೇರ್‌
ಮಲ್ಲಿಗೆ     104 ಹೆಕ್ಟೇರ್‌
ಮಟ್ಟುಗುಳ್ಳ  (ಬದನೆ)      3 ಹೆಕ್ಟೇರ್‌
ಅನನಾಸು     10 ಹೆಕ್ಟೇರ್‌
ಹಲಸು     61 ಹೆಕ್ಟೇರ್‌
ಅಡಿಕೆ     131 ಹೆಕ್ಟೇರ್‌
ಸಿಹಿ ಗೆಣಸು     16 ಹೆಕ್ಟೇರ್‌

– ರಾಕೇಶ್‌ ಕುಂಜೂರು

ಟಾಪ್ ನ್ಯೂಸ್

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.