“ಮೋದಿ ಬಿಜೆಪಿಯ ಹೆಮ್ಮೆ’
Team Udayavani, May 8, 2018, 7:05 AM IST
ಉಡುಪಿ: ಬಿಜೆಪಿ ನಾಯಕರು ಮತ ಗಳಿಕೆಗೆ “ಮೋದಿ’ ಹೆಸರನ್ನು ಬಳಸುವುದು ಸಮಯೋಚಿತವಲ್ಲದೆ, ಹೆಮ್ಮೆಯೂ ಹೌದು ಎಂದು ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ ಹೇಳಿದ್ದಾರೆ.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಸುಮಾರು 60 ವರ್ಷಕ್ಕಿಂತಲೂ ಹೆಚ್ಚು ಕಾಲ ದೇಶವನ್ನಾಳಿದ ಕಾಂಗ್ರೆಸ್ ಸ್ವಜನ ಹಿತಾಸಕ್ತಿ, ಭ್ರಷ್ಟಾಚಾರ ಇತ್ಯಾದಿಗಳಿಂದ ದೇಶವನ್ನು ಕೊಳ್ಳೆ ಹೊಡೆದ ಸಾಧನೆ ಬಿಟ್ಟರೆ, ತಮ್ಮನ್ನು ಸಮರ್ಥಿಸಿಕೊಳ್ಳುವಂತಹ ಯಾವುದೇ ಜನಪರ ಸಾಧನೆ ಮಾಡಿಲ್ಲ. ಸಮರ್ಥ ನಾಯಕರಿಲ್ಲದ ಕಾಂಗ್ರೆಸ್ ಗಂಜಿ ಗಿರಾಕಿಗಳು, ಬುದ್ಧಿಜೀವಿಗಳು ಎನಿಸಿಕೊಂಡ ಎಡಬಿಡಂಗಿಗಳನ್ನು ಅವಲಂಬಿಸಿರುವುದು ಶೋಚನೀಯ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಟಾರ್ಚ್ ಹಾಕಿ ಹುಡುಕಿದರೂ ಸ್ವತ್ಛ, ಹೆಮ್ಮೆ ಪಡುವಂತಹ ನಾಯಕರನ್ನು ಕಾಣಲಸಾಧ್ಯ. ಪ್ರತಿಯೊಬ್ಬ ನಾಯಕರು ಭ್ರಷ್ಟಾಚಾರದ ಲೇಬಲನ್ನು ಅಂಟಿಸಿಕೊಂಡೇ ತಿರುಗಾಡುತ್ತಿದ್ದಾರೆ. ಆದರೆ ಮೋದಿಯವರು ಪ್ರಾಮಾಣಿಕ, ಸ್ವತ್ಛ, ಶಿಸ್ತಿನ ಆಡಳಿತ ನೀಡಿದ್ದಾರೆ. ಅವರ ನಾಲ್ಕು ವರ್ಷಗಳ ಆಡಳಿತದಲ್ಲಿ ದೇಶವು ಎಂದೂ ಕಾಣದಂತಹ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತರ ಸಾಧನೆಗೈದಿದೆ. ನಮ್ಮ ಸರಕಾರ, ನಮ್ಮ ನಾಯಕರ ಸಾಧನೆಗಳನ್ನು ಜನತೆಗೆ ತಿಳಿಸಿ ಮತ ಕೇಳುವಲ್ಲಿ ನಮಗೆ ನೈತಿಕತೆಯಿದೆ ಎಂದರು. ನಾಯಕರಾದ ಉಪೇಂದ್ರ ನಾಯಕ್, ಬಾಲಕೃಷ್ಣ ಶೆಟ್ಟಿ, ಜಗದೀಶ ಆಚಾರ್ಯ, ಶ್ರೀಶ ಕೊಡವೂರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’
Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು