ಮುಂಗಾರು ಆರಂಭದೊಂದಿಗೆ ಕೃಷಿ ಚಟುವಟಿಕೆಗೆ ಚಾಲನೆ  ​​​​​​​


Team Udayavani, Jun 9, 2018, 6:15 AM IST

0806kpe1.jpg

ಕಾಪು: ಕರಾವಳಿಯಲ್ಲಿ ಮುಂಗಾರು ಮಳೆಯ ಲಕ್ಷಣಗಳು ಕಾಣಿಸಿಕೊಂಡಿವೆ. ಮಳೆಗಾಲಕ್ಕೆ ಮೊದಲೇ ಕೃಷಿ ಕಾರ್ಯಗಳಿಗಾಗಿ ಸಿದ್ಧತೆ ನಡೆಸಿ, ಉಳುಮೆ – ಭಿತ್ತನೆ ನಡೆಸಿದ್ದ ರೈತರಿಗೆ ಮಹಾಮಳೆ ಅವಾಂತರ ಉಂಟು ಮಾಡಿತ್ತು. ಇದೀಗ ಮುಂಗಾರು ಪ್ರಾರಂಭ ಗೊಳ್ಳುತ್ತಿದ್ದಂತೆಯೇ ಕೃಷಿ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿದೆ.  

ಲಾಭ ನಷ್ಟಗಳ ಲೆಕ್ಕಾಚಾರ 
ಈ ಬಾರಿ ಮೇ ತಿಂಗಳಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆಯಿಂದಾಗಿ ಹಲವೆಡೆ ನೀರಿನ ಕೊರತೆ ಅಷ್ಟಾಗಿ ಭಾದಿಸಿರಲಿಲ್ಲ. ಆದರೆ ಮೇ ಕೊನೆಯ ವಾರದಲ್ಲಿ ಸುರಿದ ಭಾರೀ ಗಾಳಿ, ಮಳೆ, ಸಿಡಿಲಿನಿಂದ ತೆಂಗು, ಕಂಗು ಮಾತ್ರವಲ್ಲದೆ ತೋಟಗಾರಿಕಾ ಬೆಳೆಗಳಿಗೆ ಹಾನಿಯುಂಟಾಗಿತ್ತು.

ಕಾಡುತ್ತಿವೆ ಹಲವು ಸಮಸ್ಯೆಗಳು 
ಮೊನ್ನೆಯ ಮಹಾಮಳೆ ರಾದ್ಧಾಂತ ದಿಂದಾಗಿ ನೇಜಿಗಾಗಿ ಭಿತ್ತಲಾಗಿದ್ದ ಭತ್ತದ ಬೀಜಗಳು ಕೊಳೆತು ಹೋಗುವಂತಾಗಿದೆ. ಕೃಷಿ ಗದ್ದೆಗೆ ಹಾಕಿರುವ ಹಟ್ಟಿಗೊಬ್ಬರ ಮತ್ತು ಸುಡುಗೊಬ್ಬರಗಳು ನೀರು ಪಾಲಾಗಿವೆ. ಈ ಕಾರಣದಿಂದಾಗಿ ಕೃಷಿಗೆ ಮತ್ತು ಸನ್ನಾಹ ನಡೆಸಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.  ಒಮ್ಮೆ ಗೊಬ್ಬರ ಹಾಕಿ ಹದಗೊಳಿಸಿರುವ ಭೂಮಿಯಲ್ಲಿ ಮಳೆ ನೀರು ಶೇಖರಣೆಗೊಂಡ ಪರಿಣಾಮ ವಿಪರೀತ ಕಳೆ ಗಿಡಗಳು ಬೆಳೆಯಲಾರಂಭಿಸಿವೆ. ಇವುಗಳು ಫ‌ಲವತ್ತತೆಯನ್ನು ಹೀರಿ ಕೊಳ್ಳುವುದರಿಂದ ಸಮಸ್ಯೆಯಾಗಿದೆ. ಕಳೆಗಳನ್ನು ಕಿತ್ತು ಮತ್ತೂಮ್ಮೆ ಉಳುಮೆ ಮಾಡಬೇಕಿದೆ. ಉಳುಮೆಗಾಗಿ ಕೆಲವರು ಯಂತ್ರಗಳ ಮೊರೆ ಹೋಗಿದ್ದರೆ, ಮತ್ತೆ ಕೆಲವರು ಸಾಂಪ್ರದಾಯಿಕ ಪದ್ಧತಿ ತ್ಯಜಿಸುವ ಮನಸ್ಸಿಲ್ಲದೇ ಕೋಣಗಳೊಂದಿಗೆ ಉಳುಮೆಗೆ ಮುಂದಾಗಿದ್ದಾರೆ.

ಶಿಲೀಂಧ್ರ  ಉತ್ಪತ್ತಿ
ಮಳೆಯ ಪರಿಣಾಮದಿಂದಾಗಿ ಉಳುಮೆ ಮಾಡಿ ಹದಗೊಳಿಸಲಾದ ಗದ್ದೆಗಳಲ್ಲಿ ನೀರು ನಿಂತು ಶಿಲೀಂಧ್ರಗಳ ಉತ್ಪತ್ತಿಯಾಗಿದೆ. 
-ರಾಘವೇಂದ್ರ ನಾಯಕ್‌, ಕೃಷಿಕ

ಕೃಷಿ ಕಾರ್ಯ ವಿಳಂಬ
ಭತ್ತದ ಬೀಜ ಮಳೆಯ ಕಾರಣದಿಂದಾಗಿ ಮೊಳಕೆ ಯೊಡೆಯುವ ಮೊದಲೇ ಕೊಳೆತು ಹೋಗಿವೆ. ಮೊಳಕೆಯೊಡೆಯುವ ಮೊದಲೇ ನೀರು ಪಾಲಾಗಿರುವುದ ರಿಂದ ಮುಂದೆ ಬಿತ್ತನೆ ಬೀಜದ ಕೊರತೆ ಎದುರಾಗಿದೆ. ಇದರಿಂದ ಕೃಷಿ ಕಾರ್ಯ ವಿಳಂಬವಾಗಿದೆ.
– ಪರಮೇಶ್ವರ ಅಧಿಕಾರಿ ,ಕೃಷಿಕ

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.