ಮೂಡುಬೆಳ್ಳೆ: ರಾಜ್ಯ ಹೆದ್ದಾರಿಗೆ ಕಸದ ಶೃಂಗಾರ !
Team Udayavani, Mar 25, 2018, 7:15 AM IST
ಶಿರ್ವ: ಉಡುಪಿ – ಕಾರ್ಕಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮೂಡುಬೆಳ್ಳೆ ನೆಲ್ಲಿಕಟ್ಟೆಯ ರಸ್ತೆ ಬದಿ ಕಸದಿಂದ ಸಿಂಗರಿಸಿಕೊಂಡು ಬೆಳ್ಳೆ ನಾಗರಿಕರ ಮತ್ತು ಸ್ಥಳೀಯಾಡಳಿತದ ಪ್ರಜ್ಞಾವಂತಿಕೆಯನ್ನು ಅಣಕಿಸುವಂತಿದೆ.
ಪ್ಲಾಸ್ಟಿಕ್ ಲಕೋಟೆಯಲ್ಲಿ ಕಸವನ್ನು ಕಟ್ಟಿ ರಸ್ತೆಗೆಸೆಯುವ ಪ್ರವೃತ್ತಿ ಹೆಚ್ಚಾಗುತ್ತಿದ್ದು ಪರಿಣಾಮವಾಗಿ ಹೆದ್ದಾರಿ ಸಹಿತ ರಸ್ತೆಗಳ ಇಕ್ಕೆಲಗಳು ಕಸದಿಂದ ತುಂಬಿರುತ್ತವೆ. ಬೆಳ್ಳೆ ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಯಾವುದೇ ವ್ಯವಸ್ಥೆ ಇಲ್ಲದಿರುವುದು ಈ ರೀತಿ ತ್ಯಾಜ್ಯ ರಸ್ತೆ ಬದಿಯಲ್ಲಿ ಎಸೆಯಲು ಪ್ರಮುಖ ಕಾರಣವಾಗಿದೆ.
ಎಸ್ಎಲ್ಆರ್ಎಂ ಘಟಕಕ್ಕೆ ಎರಡು ವರ್ಷಗಳ ಹಿಂದೆಯೇ 22 ಲ.ರೂ. ಮಂಜೂರಾಗಿದ್ದು ಗಾ.ಪಂ. ನಿರಾಸಕ್ತಿಯಿಂದ ಅನುದಾನ ಬಳಕೆಯಾಗಿರುವುದಿಲ್ಲ. ಪಡು ಬೆಳ್ಳೆ ಡಂಪಿಂಗ್ ಯಾರ್ಡ್ ಕಾನೂನುಬದ್ಧವಾಗಿದ್ದರೂ ಬಳಕೆ ಯಾಗುತ್ತಿಲ್ಲ. ಮಂಗಳವಾರದ ಸಂತೆಯ ಕಸವನ್ನು ಬೆಳ್ಳೆ ಗ್ರಾ. ಪಂ. ವ್ಯಾಪ್ತಿಯಲ್ಲಿ ವಿಲೇವಾರಿ ಮಾಡದೆ ಟ್ರ್ಯಾಕ್ಟರ್ ಮೂಲಕ ಉಡುಪಿ ನಗರಸಭೆಯ ಡಂಪಿಂಗ್ ಯಾರ್ಡ್ಗೆ ಸಾಗಿಸಲಾಗುತ್ತಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ತ್ಯಾಜ್ಯದ ಸಮಸ್ಯೆ ಉಲ್ಪಣಿಸಿದ್ದು ಶೀಘ್ರ ಪರಿಹಾರ ದೊರೆಯಬೇಕಾಗಿದೆ.
– ವಿನೋದ್ ಕ್ಯಾಸ್ತಲಿನೋ, ನೆಲ್ಲಿಕಟ್ಟೆ, ಮೂಡುಬೆಳ್ಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ