ನಾಗಾರಾಧನೆಯಿಂದ ನಾಡಿಗೆ ಶಾಂತಿ: ವಿಜಯ ಮಂಜ
Team Udayavani, Feb 28, 2019, 1:05 AM IST
ಕೋಟ: ಭೂಮಿಯಲ್ಲಿ ನಾಗಮಂಡಲ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠವಾದ ಧಾರ್ಮಿಕ ಕಾರ್ಯವಾಗಿದೆ. ಈ ಆಚರಣೆಯಿಂದ ಸೇವಾಕರ್ತರಿಗೆ ಒಳಿತಾಗುವ ಜತೆಗೆ ಇಳೆಗೆ ಸಮೃದ್ಧಿ, ನಾಡಿಗೆ ಸುಖ, ಶಾಂತಿ-ನೆಮ್ಮದಿ ಪ್ರಾಪ್ತವಾಗುತ್ತದೆ ಎಂದು ಡಾ| ವಿದ್ವಾನ್ ವಿಜಯ ಮಂಜ ಪಾಂಡೇಶ್ವರ ಹೇಳಿದರು.
ಅವರು ಫೆ.27ರಂದು ಚಿತ್ರಪಾಡಿ ಗ್ರಾಮದ ಬೆಟ್ಲಕ್ಕಿ ದಿ| ಗಿರಿಜಮ್ಮ ಮತ್ತು ದಿ| ಕೃಷ್ಣದೇವ ಕಾರಂತ ಕುಟುಂಬಸ್ಥರಿಂದ ಇಲ್ಲಿನ ನಾಗಬನದಲ್ಲಿ, ಚಿತ್ರಪಾಡಿ ಗಾಯತ್ರಿ ಚಂದ್ರಶೇಖರ ಕಾರಂತ ಮತ್ತು ಮಗ ಲಕ್ಷ್ಮೀ ಅಕ್ಷಯ ಕಾರಂತರ ನೇತೃತ್ವದಲ್ಲಿ ನಡೆದ ಚತುಃ ಪವಿತ್ರ ನಾಗಮಂಡಲೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಲಿಗ್ರಾಮ ಗುರುನರಸಿಂಹ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಅನಂತಪದ್ಮನಾಭ ಐತಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಪಂಚವು ನಂಬಿಕೆ ಮೇಲೆ ನಿಂತಿದೆ ಹಾಗೂ ಧಾರ್ಮಿಕ ನಂಬಿಕೆ ನಮ್ಮನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡುತ್ತದೆ ಎಂದರು.
ಕೋಟ ಅಮೃತೇಶ್ವರೀ ದೇವ ಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್ ಶುಭ ಹಾರೈಸಿದರು.
ಸೇವಾಕರ್ತರಾದ ಚಿತ್ರಪಾಡಿ ಚಂದ್ರಶೇಖರ ಕಾರಂತ ಮತ್ತು ಗಾಯತ್ರಿ ಸಿ. ಕಾರಂತ್, ಲಕ್ಷ್ಮೀ ಅಕ್ಷಯ ಕಾರಂತ, ವೇ| ಮೂ| ಸುಬ್ರಹ್ಮಣ್ಯ ಐತಾಳ, ಉದ್ಯಮಿ ಗಣೇಶ್ ಗಾಣಿಗ ಬೆಂಗಳೂರು ಉಪಸ್ಥಿತರಿದ್ದರು.ನಿವೃತ್ತ ಮುಖ್ಯ ಶಿಕ್ಷಕ ರಾಜಾರಾಮ್ ಐತಾಳ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ