ಮನೆಗಳಲ್ಲಿಯೇ ಶುಕ್ರವಾರದ ನಮಾಜ್
Team Udayavani, Mar 28, 2020, 8:35 AM IST
ಮಂಗಳೂರು/ಉಡುಪಿ: ಪ್ರತೀ ಶುಕ್ರವಾರ ಮಸೀದಿಗಳಲ್ಲಿ ಜುಮಾ ನಮಾಜ್ ಹಾಗೂ ಸಾಮೂಹಿಕ ಪ್ರಾರ್ಥನೆ ನಿರ್ವಹಿಸುವ ಮುಸ್ಲಿಮರು ಮಾ. 27ರ ಶುಕ್ರವಾರ ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಜುಮಾ ನಮಾಜ್ ನಡೆಸಲಿಲ್ಲ. ಬದಲಾಗಿ ತಮ್ಮ ಮನೆಗಳಲ್ಲಿ ಕುಟುಂಬ ಸಮೇತರಾಗಿ ಲುಹರ್ ನಮಾಝ್ ಮಾಡಿದರು.
ಕೊರೊನಾ ಹಿನ್ನೆಲೆಯಲ್ಲಿ ಶುಕ್ರವಾರದ ಜುಮಾ ನಮಾಜ್ ಮಸೀದಿಗಳಲ್ಲಿ ಸಾಮೂಹಿಕವಾಗಿ ನಿರ್ವಹಿಸದಂತೆ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಮನವಿ ಮಾಡಿತ್ತು. ರಾಜ್ಯ ವಕ್ಫ್ ಮಂಡಳಿಯೂ ನಿರ್ದೇಶಿಸಿತ್ತು. ಹೀಗಾಗಿ ದ.ಕ. ಹಾಗೂ ಉಡುಪಿ ಜಿಲ್ಲೆಯ ಬಹುತೇಕ ಮಸೀದಿಗಳಲ್ಲಿ ಶುಕ್ರವಾರ ಜುಮಾ ನಮಾಜ್ ಇರಲಿಲ್ಲ. ಮಸೀದಿಗಳ ಇಮಾಮ್ ಮತ್ತು ಮುಅದಿÕನ್ ಹಾಗೂ ಇತರ ಸಿಬಂದಿ ವರ್ಗವು ಲುಹರ್ ನಮಾಝ್ ಮಾಡಿದರೆ, ಪ್ರತಿಯೊಬ್ಬರೂ ಸ್ವತಃ ಮನೆಗಳಲ್ಲಿ ಕುಟುಂಬ ಸಮೇತವಾಗಿ ಲುಹರ್ ನಮಾಜ್ ಮಾಡಿದರು.
ಮಂಗಳೂರು ನಗರದ ಬಂದರ್ ಝೀನತ್ ಬಕ್Ò ಜುಮಾ ಮಸ್ಜಿದ್, ಬಾವುಟಗುಟ್ಟದ ಈದ್ಗಾ ಮಸ್ಜಿದ್, ಹಂಪನಕಟ್ಟೆಯ ಮಸ್ಜಿದು ನ್ನೂರ್, ಸ್ಟೇಟ್ಬ್ಯಾಂಕ್ನ ಮಸ್ಜಿದ್ ಇಬ್ರಾ ಹೀಂಖಲೀಲ್, ಪಂಪ್ವೆಲ್ನ ತಖ್ವಾ ಮಸ್ಜಿದ್, ಕಂದುಕ, ಬೋಳಾರ, ಕಂಕನಾಡಿ, ಜಪ್ಪು, ಕುದ್ರೋಳಿ ಹೀಗೆ ಯಾವ ಮಸೀದಿಯಲ್ಲೂ ಜುಮಾ ನಮಾಝ್ ಇರಲಿಲ್ಲ. ಉಡುಪಿ ನಗರದ ಯಾವುದೇ ಮಸೀದಿಗಳಲ್ಲೂ ಜುಮಾ ನಮಾಜ್ ನಡೆದಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು