ಬೆಳ್ಮಣ್-ನಂದಳಿಕೆ: ಪುನಶ್ಚೇತನಕ್ಕೆ ಕಾಯುತ್ತಿವೆ ಕೆರೆಗಳು
Team Udayavani, May 4, 2018, 6:40 AM IST
ಬೆಳ್ಮಣ್: ಬಿರು ಬೇಸಗೆ ಸಂದರ್ಭ ಕುಡಿಯುವ ನೀರಿಗೆ ಅಭಾವ ಎದುರಾಗಿರುವಂತೆ, ಹಿಂದಿನ ಕಾಲದಲ್ಲಿ ನೀರಿನ ಒರತೆ ಹಾಗೂ ಜಲ ಸಂರಕ್ಷಣೆಗೆಂದೇ ತೋಡಲಾದ ಕೆರೆಗಳು ಬೆಳ್ಮಣ್, ಬೋಳ, ಮುಂಡ್ಕೂರು ಪರಿಸರದಲ್ಲಿ ಸಾಯುವ ಅಂಚಿಗೆ ಬಂದು ನಿಂತಿವೆ.
ಎರಡು ದಿನಕ್ಕೊಮ್ಮೆ ನೀರು
ನಂದಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಇದೆ. ಆದರೆ ಇಲ್ಲಿ ನಂದಳಿಕೆ ಮಜಲ ಕೆರೆ ಎಂಬ ಪ್ರಾಚೀನ ಕೆರೆಯೊಂದಿದ್ದು, ಅದರ ಪುನಶ್ಚೇತನವಾದರೆ ಇಡೀ ಗ್ರಾಮದ ನೀರಿನ ಸಮಸ್ಯೆಗೆ ಮುಕ್ತಿ ದೊರಕಬಹುದೆಂಬ ಆಶಯ ಈ ಊರಿನ ಜನರದ್ದು.
ಕಾಯಕಲ್ಪ ಬೇಕು
ಅತ್ಯಂತ ವಿಸ್ತಾರವುಳ್ಳ ಈ ನಂದಳಿಕೆ ಮಜಲ ಕೆರೆ ಹೂಳೆತ್ತುವ ಮೂಲಕ ದುರಸ್ಥಿ ನಡೆಸದಿದ್ದಲ್ಲಿ ಕೆರೆ ಮುಂದಿನ ದಿನಗಳಲ್ಲಿ ಬತ್ತಿಹೋಗುವ ಲಕ್ಷಣವಿದೆ. ಈಗಾಗಲೇ ಕೆರೆ ಕೆಸರಿನಿಂದ ತುಂಬಿರುವ ಈ ಕೆರೆ, ಹೆಚ್ಚು ಉಪಯೋಗಕ್ಕೆ ಬಾರದಾಗಿದೆ.
22 ಕೆರೆಗಳಿವೆ!
ನಂದಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿ ಹಾಗೂ ಬೆಳ್ಮಣ್, ಬೋಳ, ಮುಂಡ್ಕೂರು ಪರಿಸರದ ಗುಡ್ಡಗಾಡು ಪ್ರದೇಶಗಳಲ್ಲಿ ಸರಕಾರಿ ಹಾಗೂ ಖಾಸಗಿ ಜಮೀನುಗಳಲ್ಲಿ ಒಟ್ಟು ಸೇರಿ ಸುಮಾರು 22 ಕೆರೆಗಳಿವೆ. ಇವುಗಳ ಸೂಕ್ತ ನಿರ್ವಹಣೆ ಆಗಿದ್ದೇ ಆದಲ್ಲಿ ಅಂತರ್ಜಲ ವೃದ್ಧಿ, ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಇದರೊಂದಿಗೆ ನಂದಳಿಕೆ ಗೋಳಿಕಟ್ಟೆಯ ಬಳಿಯಲ್ಲಿರುವ ಗುರುಬೆಟ್ಟು ಕೆರೆ, ಕೆದಿಂಜೆ ಮುಜಲೊಟ್ಟು ಕೆರೆ ಕೂಡ ಬತ್ತಿ ಹೋಗಿದ್ದು, ಈ ಭಾಗದಲ್ಲಿ ನೀರಿನ ಸಮಸ್ಯೆ ಕಾಡುವ ಆತಂಕ ಎದುರಾಗಿದೆ.
ಹಿಂದೆ ಹೂಳೆತ್ತಲಾಗಿತ್ತು
ಬಹುದೊಡ್ಡ ಕೆರೆಗಳ ಪೈಕಿ ಮಜಲಕೆರೆ ವಿಸ್ತಾರವಾಗಿದೆ. ಸುಮಾರು 10 ವರ್ಷಗಳ ಹಿಂದೆ ಈ ಕೆರೆಯನ್ನು ಹೂಳೆತ್ತಲಾಗಿದ್ದು, ಆ ಬಳಿಕ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಇದೀಗ ಕೆರೆ ಮತ್ತೆ ಹೂಳು ತುಂಬಿದ್ದು ಜಲ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಮಜಲ ಕೆರೆಯಿಂದಾಗಿಯೇ ಹಲವಾರು ಕೃಷಿಕರಿಗೆ ನೀರಿನ ಪ್ರಯೋಜನ ಹಾಗೂ, ಮನೆಯ ಬಾವಿಗಳಲ್ಲಿ ನೀರಿನ ಹೆಚ್ಚಳಕ್ಕೆ ಕಾರಣವಾಗಿತ್ತು. ಈ ಕೆರೆಯನ್ನು ಅಭಿವೃದ್ಧಿ ಪಡಿಸಿದ್ದೇ ಆದಲ್ಲಿ ಗ್ರಾಮಕ್ಕೆ ನೀರು ಪೂರೈಕೆ ಯೋಜನೆ ಮಾಡಬಹುದಾಗಿದೆ.
ಸಮಸ್ಯೆಯನ್ನು ತುರ್ತು ಬಗೆಹರಿಸಿ
ಜಲ ಸಮಸ್ಯೆ ಮುಂದಿನ ದಿನಗಳಲ್ಲಿ ಬೃಹದಾಕಾರ ತಾಳುವ ಮೊದಲು ಅಧಿಕಾರಿಗಳು ಎಚ್ಚೆತ್ತು ನಿರ್ಜೀವ ಕೆರೆಗಳ ಅಭಿವೃದ್ಧಿ ಪಡಿಸಬೇಕಿದೆ.
– ಗುರುರಾಜ್,ಗ್ರಾಮಸ್ಥರು
ಕೆರೆ ಅಭಿವೃದ್ಧಿಯಾದಲ್ಲಿ ಸಮಸ್ಯೆ ಪರಿಹಾರ
ನಂದಳಿಕೆ ಮಜಲ ಕೆರೆಯು ಅಭಿವೃದ್ಧಿಯಾದಲ್ಲಿ ಇಡೀ ಗ್ರಾಮಕ್ಕೆ ನೀರಿನ ಸಮಸ್ಯೆ ದೂರವಾಗಲಿದೆ. ಕೆರೆಯ ಸಮೀಪದಲ್ಲೇ ಬಾವಿಯನ್ನು ನಿರ್ಮಿಸಿ ಗ್ರಾಮದ ಜನರಿಗೆ ನೀರು ಪೂರೈಕೆ ಮಾಡಬಹುದಾಗಿದೆ.
– ರಾಕೇಶ್,ಸ್ಥಳಿಯರು
ಹೂಳು ತೆಗೆಯುವ ಕಾರ್ಯ ನಡೆಯಲಿ
ಮಜಲ ಕೆರೆಯಲ್ಲಿ ಸಂಪೂರ್ಣ ಕೆಸರು ಮಣ್ಣು ತುಂಬಿದ್ದು ಹೂಳು ತೆಗೆಯುವ ಕಾರ್ಯ ನಡೆಯಬೇಕಾಗಿದೆ. ನೀರಿನ ಒರತೆ ಹೆಚ್ಚಿರುವ ಕೆರೆಗಳ ಅಭಿವೃದ್ಧಿ ಪ್ರತಿ ಗ್ರಾಮದಲ್ಲೂ ನಡೆಯಬೇಕಾಗಿದೆ
– ಸುರೇಶ್,ಕೃಷಿಕರು
– ಶರತ್ ಶೆಟ್ಟಿ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ