ನಂದಳಿಕೆ ಹೆಗ್ಡೆಯವರ ಮರದ ಬೊಂಬೆಗಳಿಗೆ ಬಣ್ಣ
Team Udayavani, Mar 21, 2019, 1:00 AM IST
ಬೆಳ್ಮಣ್: ಐತಿಹಾಸಿಕ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಮಾ. 21 ಸಿರಿಜಾತ್ರಾ ವೈಭವ. ಅದರಂತೆ ಶಾ.ಶ. 1450ರಲ್ಲಿ ನಂದಳಿಕೆ ಚಾವಡಿಯಲ್ಲಿ ಅರಸರಾಗಿ ಆಳ್ವಿಕೆ ನಡೆಸಿದ್ದ ಹೂವಯ್ಯ ಹೆಗ್ಡೆ, ಮಂಜಯ್ಯ ಹೆಗ್ಡೆ, 2ನೇ ಮಂಜಯ್ಯ ಹೆಗ್ಡೆ ಹಾಗೂ ಹೆಗ್ಡೆಯವರ ಮಂತ್ರಿಗಳು, ಅಂಗರಕ್ಷಕರು, ದಾಸಿಯರು ಹಾಗೂ ನರ್ತಕಿಯರ ಸಹಿತ ಒಟ್ಟಾರೆ 21 ಮರದ ಮೂರ್ತಿಗಳಿಗೆ ಬಣ್ಣ ಬಳಿದು ದೇಗುಲದ ಮುಂಭಾಗದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಪೈಕಿ ಒಂದು ಮೂರ್ತಿಯ ಕೈ ಕಡಿದ ಸ್ಥಿತಿಯಲ್ಲಿದೆ.
ದೇಗುಲದಿಂದಲೇ ನಿರ್ವಹಣೆ
ಈ ಎಲ್ಲಾ 21 ಮೂರ್ತಿಗಳ ನಿರ್ವಹಣೆ ದೇಗುಲದಿಂದಲೇ ನಡೆಯುತ್ತಿದ್ದು ನಂದಳಿಕೆ ಚಾವಡಿಯ ಪರಂಪರೆಯ ಹೆಗ್ಡೆಯವರನ್ನು ನೆನಪಿಸುವ ಕಾರ್ಯವಾಗುತ್ತಿದೆ. ಎಲ್ಲಾ ಮೂರ್ತಿಗಳೂ ಆಕರ್ಷಣೀಯವಾಗಿವೆ.
ಮೂರ್ತಿಗಳಿಗೆ ಪಿಂಡ ಪ್ರದಾನವೂ ಇದೆ
ಈ ಮರದ ಮೂರ್ತಿಗಳಿಗೆ ಮಹಾಲಯ ಅಮವಾಸ್ಯೆಯ ದಿನ ದೇಗುಲದ ನೈವೇದ್ಯದಿಂದ ಪಿಂಡ ಪ್ರದಾನ ಮಾಡಲಾಗುತ್ತದೆ 21 ಮೂರ್ತಿಗಳಿಗೂ ಒಂದೇ ಹರಿವಾಣದಲ್ಲಿ ಪಿಂಡ ಪ್ರದಾನ ಮಾಡಲಾಗುವುದೆಂದು ದೇಗುಲದ ಪ್ರಬಂಧಕ ರವಿರಾಜ್ ಭಟ್ ತಿಳಿಸಿದ್ದಾರೆ.
ಸಿರಿ ಜಾತ್ರೆಯ ಮೂಲಕ ನಂದಳಿಕೆ ಹೆಸರುವಾಸಿಯಾದರೆ ಜಾತ್ರೆಯ ರೂವಾರಿಗಳಾದ ಹೆಗ್ಗಡೆ ಮನೆತನದವರ ಸೂಚ್ಯವನ್ನು ಬೊಂಬೆಗಳ ಮೂಲಕ ತಿಳಿಯಪಡಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ