ಉಪಯೋಗಕ್ಕೆ ಬಾರದ ನಂದಿಕೋಣ ಚಮ್ಮಕುದ್ರು ಕಿಂಡಿ ಅಣೆಕಟ್ಟು


Team Udayavani, Apr 1, 2017, 3:33 PM IST

3103kde1-1.jpg

ಕುಂದಾಪುರ: ಸುಮಾರು 1.14 ಕೋಟಿ ರೂ. ವೆಚ್ಚದಲ್ಲಿ  ಬೆಳ್ವೆ ಹಾಗೂ ನಾಲ್ಕೂರು ಗ್ರಾ.ಪಂ. ಗಡಿಭಾಗದಲ್ಲಿ ಸೀತಾನದಿಗೆ ಅಡ್ಡಲಾಗಿ ನಂದಿಕೋಣ ಚಮ್ಮಕುದ್ರು ಬಳಿ ನಿರ್ಮಿಸಲಾಗಿದ್ದ ಕಿಂಡಿ ಅಣೆಕಟ್ಟು ನಿರ್ವಹಣೆಯ ಕೊರತೆಯಿಂದಾಗಿ ನೀರು ಸೋರಿಕೆಯಾಗಿ ಜನೋಪಯೋಗಕ್ಕೆ ಬಾರದೇ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.

ಕುಡಿಯುವ ನೀರು, ಕೃಷಿ ಕಾರ್ಯಗಳಿಗೆ ನೀರು ಪೂರೈಕೆಯಾಗಬೇಕು ಹಾಗೂ  ಸ್ಥಳೀಯವಾಗಿ ದೊರಕುವ ನೀರಿನ ಮೂಲಗಳನ್ನು ಪೋಲು ಆಗದಂತೆ ಆದಷ್ಟು ಎಚ್ಚರ ವಹಿಸಿ ಜನೋಪಯೋಗಕ್ಕೆ ಒದಗಿಸುವಂತಾಗಬೇಕು ಎನ್ನುವ ಸರಕಾರದ ಚಿಂತನೆಗೆ ಇಲ್ಲಿನ ಬಹಳಷ್ಟು ಕಿಂಡಿ ಅಣೆಕಟ್ಟುಗಳು ಹಾಗೂ ಚೆಕ್‌ ಡ್ಯಾಂಗಳ ನಿರ್ವಹಣೆ ಕೊರತೆಯನ್ನು ಕಂಡುಕೊಳ್ಳುತ್ತಿವೆ. ಸೀತಾನದಿಯಲ್ಲಿ ಸಾಕಷ್ಟು ನೀರು ಹರಿಯುತ್ತಿದ್ದರೂ  ವೆಂಟೆಡ್‌ ಡ್ಯಾಂಗಳ ವೈಫಲ್ಯದಿಂದ ಕೋಟ್ಯಂತರ ರೂ. ನೀರುಪಾಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ನಂದಿಕೋಣ ಚಮ್ಮಕುದ್ರು ಕಿಂಡಿ ಅಣೆಕಟ್ಟು ಒಂದು ಉದಾಹರಣೆಯಾಗಿದೆ.

ಸೋರಿಕೆಯಾದ ನೀರು: ಬೆಳ್ವೆ ಹಾಗೂ ನಾಲ್ಕೂರು ಗ್ರಾ.ಪಂ. ಗಡಿಭಾಗದಲ್ಲಿ  ಬೆಳ್ವೆ ಗ್ರಾಮದ ಸೂರೊYàಳಿ, ಗುಮ್ಮೊಲ, ಅಲಾºಡಿ ಮೊದಲಾದ ಗ್ರಾಮಗಳಿಗೆ ಹಾಗೂ ನಾಲ್ಕೂರು ಗ್ರಾ.ಪಂ. ವ್ಯಾಪ್ತಿಯ ಅರ್ಬಿ, ಕಜೆR, ಮದ್ದೂರು ಪರಿಸರದ  

ಸುಮಾರು 25 ಕಿ.ಮೀ. ವ್ಯಾಪ್ತಿಯ ಸಾವಿರಾರು ಜನರಿಗೆ ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ  ನಂದಿಕೋಣ- ಚಮ್ಮಕುದ್ರು ಬಳಿ ನಿರ್ಮಿಸಲಾದ ಕಿಂಡಿ ಅಣೆಕಟ್ಟು ಸೂಕ್ತ ಹಲಗೆ ಹಾಕುವಲ್ಲಿ  ವಿಫಲತೆಯನ್ನು ಕಂಡುಕೊಂಡು ಸೋರಿಕೆಯನ್ನು ಕಂಡುಕೊಂಡಿದೆ. ಕಿಂಡಿ ಅಣೆಕಟ್ಟು ನಿರ್ಮಾಣವಾಗಿ  ಎರಡು ವರ್ಷ ಕಳೆಯುವುದರೊಳಗೆ ಅಣೆಕಟ್ಟಿಗೆ ಅಳವಡಿಸಲಾದ ಹಲಗೆಗಳು  ಉಪಯೋಗಕ್ಕೆ ಬಾರದ ಸ್ಥಿತಿಗೆ ಹೋಗಿವೆ.  ಕಿಂಡಿ ಅಣೆಕಟ್ಟಿಗೆ  ದೀರ್ಘ‌ ಕಾಲ ಬಾಳಿಕೆ ಬಾರದ ಹಲಗೆ ಯನ್ನು ಅಳವಡಿಸಿದ್ದರಿಂದ ಈ ನೀರು ಸೋರಿಕೆಯಾ ಗಿದೆ ಎನ್ನುವುದು ಸ್ಥಳೀಯರ ಆರೋಪ. ಇಲ್ಲಿ ಸಾಕಷ್ಟು ನೀರು ಸಂಗ್ರಹವಾದಲ್ಲಿ  ಪರಿಸರದ ಬಾವಿ, ಕೆರೆ, ಮದಗಗಳಲ್ಲಿ  ಅಂತರ್ಜಲ ಮಟ್ಟ ಏರಿಕೆ ಯನ್ನು ಕಂಡುಕೊಂಡು  ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ಉಪಯೋಗ ವಾಗುವ ಸಾಧ್ಯತೆ ಇತ್ತು. ಈ ಬಾರಿ ಮಳೆ ಕಡಿಮೆಯಾಗಿರುವುದರಿಂದ   ಜಲಮಟ್ಟ ಕುಸಿದು ಹೋಗಿರುವುದರಿಂದ ಈ ಅಣೆ ಕಟ್ಟಿನಲ್ಲಿ ನೀರಿನ ಮಟ್ಟವನ್ನು ಕುಸಿಯುವಂತೆ ಮಾಡಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಅಣೆಕಟ್ಟು  ಸುಮಾರು ನಾಲ್ಕು ಮೀ. ಎತ್ತರವಿದ್ದರೂ  ಕೇವಲ 2 ಮೀ. ತನಕ ಹಲಗೆ  ಹಾಕಲಾಗಿದೆ. ಗುಣಮಟ್ಟವಿಲ್ಲದ ಹಲಗೆಯನ್ನು ಅಳವಡಿಸಿ ಮಣ್ಣು ಹಾಕಿದ್ದರಿಂದ  ಇಲ್ಲಿ ನೀರು ಸೋರಿಕೆಯು ಕಂಡು ಬಂದಿದೆ. ಹಲಗೆಯ ನಡುವಿನ ಕಿಂಡಿಗಳಲ್ಲಿ ಮಣ್ಣು ಕೊಚ್ಚಿಹೋಗಿ ನೀರು ಸೋರಿಕೆಯಾಗಿದೆ. ಸಣ್ಣ ನೀರಾವರಿ ಇಲಾಖೆೆಯಿಂದ ಕಾಮಗಾರಿ ನಡೆದಿದ್ದರೂ ಇದರ ನಿರ್ವಹಣೆಯನ್ನು ಮಾತ್ರ ಯಾರಿಗೂ ಹಸ್ತಾಂತರಿಸದೇ ಇರುವುದು ಈ ವಿಫಲತೆಗೆ ಕಾರಣ ಎನ್ನಬಹುದಾಗಿದೆ. 

ಈ  ಕಿಂಡಿ ಅಣೆಕಟ್ಟು ಬೆಳ್ವೆ ಹಾಗೂ ನಾಲ್ಕೂರು ಗ್ರಾ.ಪಂ. ನ  ಸುಮಾರು 25 ಕಿ.ಮೀ.ವ್ಯಾಪ್ತಿಯ ಜನರ ಕುಡಿಯುವ ನೀರು, ಕೃಷಿ ಚಟುವಟಿಕೆಗೆ ಅನುಕೂಲವಾಗುವಂತೆ ಸುಮಾರು 1.14 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು.  ಬೆಳ್ವೆ ಗ್ರಾ.ಪಂ. ವ್ಯಾಪ್ತಿಯ ಬೆಳ್ವೆ ಗ್ರಾಮದ ಸೂರೊYàಳಿ, ಗುಮ್ಮೊಲ, ಅಲಾºಡಿ ಮೊದಲಾದ ಗ್ರಾಮಗಳಿಗೆ ಹಾಗೂ ನಾಲ್ಕೂರು ಗ್ರಾ.ಪಂ. ವ್ಯಾಪ್ತಿಯ ಅರ್ಬಿ, ಕಜೆR, ಮದ್ದೂರು ಗ್ರಾಮಗಳಿಗೆ ಕೃಷಿ ಚಟುವಟಿಕೆಗಳಿಗೆ ಪೂರಕವಾಗುವಂತೆ ಈ ಅಣೆಕಟ್ಟು ನಿರ್ಮಾಣವಾಗಿದ್ದರೂ ಇದರ ಉಪಯೋಗವನ್ನು ಪಡೆಯುವಲ್ಲಿ ಈ ಪರಿಸರದ ಜನರಿಗೆ ಇನ್ನೂ ಸಂಪೂರ್ಣವಾಗಿ ಪ್ರಯೋಜನ ಆಗಿಲ್ಲ.

ಕಳಪೆ ಗುಣಮಟ್ಟದ ಹಲಗೆಗಳನ್ನು ಈ ಕಿಂಡಿ ಅಣೆಕಟ್ಟಿಗೆ ಉಪಯೋಗಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಹಲಗೆಯನ್ನು ಹಾಕದೇ ಇರುವುದರಿಂದ ಮತ್ತು ಪೂರ್ತಿ ಕಿಂಡಿಗೆ ಹಲಗೆ ಹಾಕದೇ ಇರುವುದರಿಂದ ನೀರು ಸೋರಿಕೆಯಾಗಿದೆ. ಇಲ್ಲಿನ ನಾಲ್ಕು ಮೀಟರ್‌ ಎತ್ತರದಲ್ಲಿ ನೀರು ಸಂಗ್ರಹವಾದಲ್ಲಿ ಸುತ್ತುಮುತ್ತಲಿನ ಭಾಗಗಳಲ್ಲಿ ನೀರಿನ ಅಂತರ್‌ಜಲ ಮಟ್ಟ ಏರಿಕೆಯಾಗಿ ಜನರಿಗೆ ಬಹೂಪಯೋಗಿಯಾಗುತ್ತಿತ್ತು.  ಆದರೆ ಕೇವಲ ಎರಡು ಮೀಟರ್‌ ತನಕ ಹಲಗೆ ಹಾಕಿರುವುದರಿಂದ ನೀರು ಸಾಕಷ್ಟು ಸಂಗ್ರಹವಾಗದೇ ಪೋಲಾಗುತ್ತಿದೆ.
 – ಬಿ. ಉದಯ ಪೂಜಾರಿ ಬೆಳ್ವೆ, ಮಾಜಿ ಅಧ್ಯಕ್ಷರು ಬೆಳ್ವೆ ಗ್ರಾ.ಪಂ. 

– ಉದಯ ಆಚಾರ್‌ ಸಾಸ್ತಾನ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.