ರಾಷ್ಟ್ರೀಯ ಹೆದ್ದಾರಿ ಅಧ್ವಾನ: ವಾಹನ ಸವಾರರೇ ಎಚ್ಚರ !
ಹೆದ್ದಾರಿ ಕಾಮಗಾರಿ ವೇಳೆ ರಸ್ತೆ ಬದಿ ಹಾಕಿದ್ದ ಮಣ್ಣು ಮಳೆನೀರಿಗೆ ಕೊಚ್ಚಿ ಹೋಗಿ ಅವಾಂತರ
Team Udayavani, Jun 15, 2019, 5:08 AM IST
ಕುಂದಾಪುರ: ಮುಂಗಾರು ನಿಧಾನಕ್ಕೆ ಬಿರುಸು ಪಡೆಯುತ್ತಿದ್ದಂತೆ, ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ ಅಧ್ವಾನ ಮಾತ್ರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.
ಹಲವೆಡೆಗಳಲ್ಲಿ ಹೆದ್ದಾರಿ ಬದಿ ಹಾಕಿದ ಮಣ್ಣು ಮಳೆಗೆ ಕೊಚ್ಚಿಕೊಂಡು ಹೋಗಿದ್ದು, ವಾಹನ ಸವಾರರು ರಸ್ತೆಯಿಂದ ಕೆಳಕ್ಕೆ ಇಳಿಸುವಾಗ ಎಚ್ಚರ ವಹಿಸಬೇಕಾಗಿದೆ.
ಕುಂದಾಪುರದಿಂದ ತಲ್ಲೂರು, ತ್ರಾಸಿಯವರೆಗಿನ ಹೆದ್ದಾರಿ ಕಾಮಗಾರಿ ವೇಳೆ ರಸ್ತೆ ಬದಿ ಅನೇಕ ಕಡೆಗಳಲ್ಲಿ ಮಣ್ಣು ಹಾಕಲಾಗಿದೆ.
ಆದರೆ ಅದೆಲ್ಲ ಮಳೆ ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿದೆ. ಕೆಲವೆಡೆಗಳಲ್ಲಿ ಮಣ್ಣೆಲ್ಲ ಹೋಗಿ ದೊಡ್ಡ ಹೊಂಡಗಳೇ ಸೃಷ್ಟಿಯಾಗಿವೆ.
ಹೊಸಾಡು ಗ್ರಾಮದ ಮುಳ್ಳಿಕಟ್ಟೆಯ ಹೆದ್ದಾರಿ ಬದಿಯುದ್ದಕ್ಕೂ ಹಾಕಲಾದ ಮಣ್ಣು ಅಲ್ಲಲ್ಲಿ ಮಳೆ ನೀರಲ್ಲಿ ಹೋಗಿ, ಸಣ್ಣ – ಸಣ್ಣ ಕಾಲುವೆಗಳಂತಾಗಿವೆ. ಕನ್ನಡಕುದ್ರು ಕ್ರಾಸ್ ಬಳಿ ಡಿವೈಡರ್ಗೆಹಾಕಲಾದ ಮಣ್ಣು ರಸ್ತೆಗೆ ಕೊಚ್ಚಿಕೊಂಡು ಬಂದಿದೆ. ಹೆಮ್ಮಾಡಿ ಪೇಟೆಗಿಂತ ಸ್ವಲ್ಪ ಹಿಂದೆ ರಸ್ತೆ ಬದಿ ಹಾಕಲಾದ ಮಣ್ಣು ಕೊಚ್ಚಿಕೊಂಡು ಹೋಗಿ ದೊಡ್ಡ ಕಂದಕ ನಿರ್ಮಾಣವಾಗಿದೆ. ಅಪ್ಪಿ – ತಪ್ಪಿ ಇಲ್ಲಿ ವಾಹನ ಸವಾರರು ಗೊತ್ತಿಲ್ಲದೆ ರಸ್ತೆಯಿಂದ ಕೆಳಕ್ಕೆ ಇಳಿಸಿದರೆ ಮತ್ತೆ ಮೇಲೆ ಬರುವುದು ಕಷ್ಟ. ವಾಹನ ಅಲ್ಲೇ ಹೂತು ಹೋಗುವುದರ ಜತೆಗೆ ಬೀಳುವ ಅಪಾಯವೂ ಇದೆ.
ಜಾಗೃತೆಯಿಂದ ಚಲಾಯಿಸಿ
ತಲ್ಲೂರಿನಿಂದ ಹೆಮ್ಮಾಡಿ, ಅರಾಟೆ, ಮುಳ್ಳಿಕಟ್ಟೆ ಕ್ರಾಸ್ವರೆಗೆ ಈಗ ಒಂದೇ ಮಾರ್ಗದಲ್ಲಿ ಎರಡೂ ಕಡೆಗಳಿಂದಲೂ ಸಂಚರಿಸಬೇಕಾಗಿರುವುದರಿಂದ ವಾಹನ ಸವಾರರು ಜಾಗರೂಕತೆಯಿಂದ ವಾಹನ ಚಲಾಯಿಸಬೇಕಾಗಿದೆ. ಹೆದ್ದಾರಿಯ ಅನೇಕ ಕಡೆಗಳಲ್ಲಿ ಹಾಕಿದ ಮಣ್ಣೇ ಇರುವುದರಿಂದ ಮತ್ತು ಮಣ್ಣು ಕೊಚ್ಚಿ ಹೋಗಿ ನಿರ್ಮಾಣವಾಗಿರುವುದರಿಂದ ಹೆಚ್ಚು ಜಾಗ್ರತೆ ಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ