ಕುಂದಾಪುರದಲ್‌ ಏನ್‌ ನಡೀತ್ತೋ ದೇವ್ರೇ ಬಲ್ಲ!


Team Udayavani, Oct 11, 2018, 6:00 AM IST

1010kdlm2ph.jpg

ಕುಂದಾಪುರ: “ಎಂತಾ ಮಾಡ್ತ್ರ ಅಂತ ಅರ್ಥ ಆತಿಲ್ಲೆ ಮಾರಾಯ್ರೆ ಕುಂದಾಪುರದಲ್‌ ಏನ್‌ ನಡಿತ್ತೋ ದೇವ್ರೇ ಬಲ್ಲ’ ಹೀಗೆಂದು ಶಾಸ್ತ್ರೀವೃತ್ತದ ಬಳಿಯ ಅಂಗಡಿಯವರೊಬ್ಬರು ಗ್ರಾಹಕರಿಗೆ ಹೇಳುತ್ತಿದ್ದರು. 

ಇದು ಅವರೊಬ್ಬರ ಮಾತಲ್ಲ, ಕಥೆಯಲ್ಲ, ವ್ಯಥೆಯಲ್ಲ. ಇದೇ ಮಾತನ್ನು ಬಹುತೇಕರು ಹೇಳುತ್ತಾರೆ. ಕುಂದಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡಗಳು, ಸರ್ವೀಸ್‌ ರಸ್ತೆ ಸಮಸ್ಯೆಯಿಂದಾಗಿ ಪರಿಸ್ಥಿತಿ ಬಿಗಡಾಯಿಸಿದ್ದು, ಏನೂಂದೂ ಮಾಡದ ಗುತ್ತಿಗೆದಾರರ ನಡವಳಿಕೆ ಬಗ್ಗೆ ಜನ ಆಕ್ರೋಶಿತರಾಗಿದ್ದಾರೆ. ಇದಕ್ಕೆ ಹೊಸ ಸೇರ್ಪಡೆಯಾಗಿ ಬಸ್ರೂರು ಮೂರು ಕೈ ಅಂಡರ್‌ಪಾಸ್‌ ಕಾಮಗಾರಿಗಾಗಿ ಮುಖ್ಯ ರಸ್ತೆ ಬ್ಲಾಕ್‌ ಮಾಡಿರುವುದು ಮತ್ತಷ್ಟು ಸಮಸ್ಯೆ ಯಾಗಿದೆ.  

ತೇಪೆಯೂ ಇಲ್ಲ
ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಹೊಂಡಗಳು ವಿಸ್ತಾರವಾಗುತ್ತಾ ಹೋಗುತ್ತಿದ್ದರೂ ಅದಕ್ಕೆ ತೇಪೆ ಹಾಕುವ ವ್ಯವಸ್ಥೆಯೂ ಆಗುತ್ತಿಲ್ಲ. ಶಾಸ್ತ್ರಿ ವೃತ್ತದಿಂದ ಸಂಗಮ್‌ ವರೆಗೆ ಒಂದಷ್ಟಾದರೂ ತೇಪೆ ನಡೆದಿದ್ದು ಬಸ್ರೂರು ಮೂರುಕೈವರೆಗೆ ಕಾಟಾಚಾರಕ್ಕೂ ನಡೆದಿಲ್ಲ. ಬಸೂÅರು ವೃತ್ತದಲ್ಲಿ ಅಂಡರ್‌ಪಾಸ್‌ ಕಾಮಗಾರಿ ಆರಂಭವಾಗಲಿದೆ ಎಂದು ಹೆದ್ದಾರಿಯಲ್ಲಿ ವಾಹನ ಸಂಚಾರ ನಿಲ್ಲಿಸಿದ್ದರೂ ಸರ್ವಿಸ್‌ ರಸ್ತೆಯಲ್ಲೇ ವಾಹನ ಸಂಚಾರದ ಒತ್ತಡ ಹೆಚ್ಚಾಗಿದೆ. ಈಗಾಗಲೇ ಸರ್ವೀಸ್‌ ರಸ್ತೆಯಲ್ಲಿ ಸಮಸ್ಯೆ ಬಿಗಡಾಯಿಸಿದೆ. ಎರಡು ಸರ್ವೀಸ್‌ ರಸ್ತೆಗಳಲ್ಲಿ ಗಾಂಧಿ ಮೈದಾನದ ಸರ್ವಿಸ್‌ ರಸ್ತೆಯಲ್ಲಿ ವಾಹನಗಳು ಹೆಚ್ಚಾಗಿವೆ. ಶರೋನ್‌ ಬದಿಯ ಸರ್ವೀಸ್‌ ರಸ್ತೆಗೆ ರಾಷ್ಟ್ರೀಯ ಹೆದ್ದಾರಿಯಿಂದ ಪ್ರವೇಶ ಹಾಗೂ ಹೊರಬರುವುದು ಸುಲಭವಲ್ಲ.

ಸಮಸ್ಯೆಗಳ ಆಗರ
ಸರ್ವಿಸ್‌ ರಸ್ತೆಗಳಲ್ಲಿ ದಾರಿದೀಪಗಳೂ ಇರದಿರುವು ದರಿಂದ  ಕತ್ತಲಲ್ಲಿ ಪಾದಚಾರಿಗಳು ಕಾಣುವುದಿಲ್ಲ. ಮಳೆ ಕತ್ತಲು ಆವರಿಸಿದರಂತೂ ಭಾರಿ ಸಮಸ್ಯೆ. ಈಗಾಗಲೇ ಒದ್ದಾಟ ಆರಂಭಗೊಂಡಿದ್ದರೂ ಸದ‌Âಕ್ಕೆ ರಾಷ್ಟ್ರೀಯ ಹೆದ್ದಾರಿ ಸಂಚಾರ ಯೋಗ್ಯ ಮಾಡಲಾಗುತ್ತಿಲ್ಲ. ಉತ್ತರಿಸುವವರೂ ಇಲ್ಲ. ಹೀಗಾಗಿ ಎಲ್ಲರೂ “ಕುಂದಾಪ್ರದಲ್‌ ಏನ್‌ ನಡಿತ್ತೋ ದೇವ್ರೇ ಬಲ್ಲ’ ಎನ್ನುತ್ತಿದ್ದಾರೆ. 

ಇತ್ತ ಕಾಲೇಜು ರಸ್ತೆಯೂ ವಾಹನಗಳಿಂದ ತುಂಬಿ ರುತ್ತದೆ. ನಾನಾ ಸಾಹೇಬ್‌ ರಸ್ತೆಯಲ್ಲೂ ಜಾಗವಿಲ್ಲ. ಯಕ್ಷಗಾನ ಮೈದಾನ ಹೊಂಡಗಳಿಂದ ಕೊಚ್ಚೆಯಾಗಿದೆ. ಸ್ಥಳೀಯ ವಾಹನಗಳಲ್ಲದೇ ಹೆದ್ದಾರಿಯಲ್ಲಿ ಸಾಗುವ ಭಾರಿ ವಾಹನಗಳು, ಬಸ್ಸುಗಳು ಸರ್ವೀಸ್‌ ರಸ್ತೆ ಪ್ರವೇಶಿಸಲು ಅನುವು ಮಾಡಿಕೊಟ್ಟಿರುವುದರಿಂದ ಈ ರಸ್ತೆಗಳು ನಿಬಿಡವಾಗಿ, ರಸ್ತೆ ಬ್ಲಾಕ್‌ ಆಗುತ್ತಿದೆ. ಈ ಹಿನ್ನೆಲೆ ರಾ.ಹೆ. ಪ್ರಾಧಿಕಾರ, ಗುತ್ತಿಗೆದಾರ ನವಯುಗ ಸಂಸ್ಥೆ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಸ್ಪಷ್ಟ ಚಿತ್ರಣ ನೀಡಬೇಕಾಗಿದೆ.  

ಪಾರ್ಕಿಂಗ್‌ ಸಮಸ್ಯೆ
ಒಂದು ಕಿ.ಮೀ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾರ್ಕಿಂಗ್‌ ವ್ಯವಸ್ಥೆಯೂ ಇಲ್ಲದಂತಾಗಿದೆ. ಭಾರಿ ವಾಹನಗಳನ್ನು ನಿಲ್ಲಿಸುತ್ತಾರೆ. ಕೆಲವರು ಸರ್ವೀಸ್‌ ರಸ್ತೆಗೆ ತಾಗಿಕೊಂಡಿರುವ ಅಂಗಡಿ, ಹೋಟೆಲ್‌ಗ‌ಳಿಗೆ, ಕಚೇರಿಗಳಿಗೆ ಹೋಗಲು ರಸ್ತೆ ಬದಿ ಕಾರು, ಬೈಕ್‌ ಇಟ್ಟು ಹೋಗುತ್ತಿದ್ದರು. ಈಗ ಸಂಚಾರಿ ಪೋಲೀಸರು ಅವಕಾಶ ನೀಡುತ್ತಿಲ್ಲ. ಗಾಂಧಿಮೈದಾನ ಬದಿಯ ರಸ್ತೆಯಲ್ಲಿ ಮೆಸ್ಕಾಂ, ಲೋಕೋಪಯೋಗಿ, ತೆರಿಗೆ ಇಲಾಖೆ ಕಚೇರಿಗಳು, ಶಾಲೆಗಳು, ಮಹಾತ್ಮಗಾಂಧಿ ಪಾರ್ಕ್‌ ಇದೆ. ಕ್ರೀಡಾಂಗಣಕ್ಕೆ ಜನ ಬರುತ್ತಾರೆ. ನೂರಾರು ವಾಹನಗಳ ಪಾರ್ಕಿಂಗ್‌ ಮಾಡುವುದೆಲ್ಲಿ ಎಂಬ ಪ್ರಶ್ನೆಗೆ ಉತ್ತರವಿಲ್ಲ. 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.