ಇಂದಿನಿಂದ ನವರಾತ್ರಿ ಉತ್ಸವ
Team Udayavani, Sep 21, 2017, 10:10 AM IST
ಉಡುಪಿ: ಕರಾವಳಿಯಾದ್ಯಂತ ನವರಾತ್ರಿ ಉತ್ಸವದ ಸಂಭ್ರಮ ಕಳೆಗಟ್ಟಿದೆ. ಸೆ. 21ರಿಂದ 30ರ ವರೆಗೆ ನವರಾತ್ರಿ ಉತ್ಸವ ಜರಗಲಿದೆ. ದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಯಾಗ, ಪುನಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ನವರಾತ್ರಿ ಹಿನ್ನೆಲೆಯಲ್ಲಿ ಹೂವು, ಹಣ್ಣು, ತರಕಾರಿ ಬೆಲೆ ತೀವ್ರ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಶಂಕರಪುರ ಮಲ್ಲಿಗೆಯ ಬೆಲೆಯೂ ಏರಿಕೆ ಕಂಡಿದೆ.
ದೇವರ ಅಲಂಕಾರಕ್ಕೆ ಹೆಚ್ಚಿನ ಹೂವುಗಳ ಬೇಡಿಕೆ ಇರುತ್ತದೆ. ಅದರಲ್ಲೂ ಮಲ್ಲಿಗೆಗಂತೂ ಬೇಡಿಕೆ ಹೆಚ್ಚಾಗಿರುತ್ತದೆ. ಮಲ್ಲಿಗೆ ಇಳುವರಿ ಕುಂಠಿತ ಶಂಕರಪುರ ಮಲ್ಲಿಗೆ ಬೆಳೆಗೆ ಈ ಬಾರಿ ಹೆಚ್ಚೇನೂ ಹಾನಿಯಾಗದಿದ್ದರೂ ಮಳೆ ಬಿಟ್ಟು ಬಿಟ್ಟು ಸುರಿಯುತ್ತಲೇ ಇರುವ ಕಾರಣದಿಂದ ಬೆಳೆಯ ಇಳುವರಿ ಅಲ್ಪ ಕುಂಠಿತವಾಗಿದೆ. ಸದ್ಯ ಚಳಿ ಇಲ್ಲದ ಕಾರಣ ಇಳುವರಿಗೆ ಅಂತಹ ಸಮಸ್ಯೆ ಇಲ್ಲ. ಸಾಮಾನ್ಯ ರೋಗಗಳು ಈಗಲೂ ಇವೆ. ಅದಕ್ಕೆ ತಕ್ಕಂತಹ ಕೀಟನಾಶಕ ಮಾರುಕಟ್ಟೆಯಲ್ಲಿರುವ ಕಾರಣ ಈ ಸಮಸ್ಯೆಯೂ ಹೆಚ್ಚಿಲ್ಲ. ನವರಾತ್ರಿ ಸಂದರ್ಭ ಬೇಡಿಕೆ ಹೆಚ್ಚಿರುವ ಕಾರಣ ಮಲ್ಲಿಗೆ ದರ ಏರಿಕೆಯಾಗುವುದು ಸಹಜ ಎಂದು ಮಲ್ಲಿಗೆ ಬೆಳೆಗಾರ ಪಡುಬಿದ್ರಿಯ ಮನೋಹರ ಪೂಜಾರಿ ಹೇಳಿದ್ದಾರೆ.
ಪ್ರಸ್ತುತ ಶಂಕರಪುರ ಮಲ್ಲಿಗೆಗೆ ಚೆಂಡಿಗೆ 180ರಿಂದ 220 ರೂ., ಅಟ್ಟೆಗೆ 700ರಿಂದ 850 ರೂ. ವರೆಗೆ ಇದೆ. ಭಟ್ಕಳ ಮಲ್ಲಿಗೆ ಚೆಂಡಿಗೆ 120 ರೂ. ನಿಂದ 150 ರೂ.ವರೆಗೆ ಇದೆ. ಬೇಡಿಕೆ ಹೆಚ್ಚಾದಂತೆ ದರವೂ ಏರು ಪೇರಾಗುತ್ತದೆ ಎಂದು ಮಾರಾಟಗಾರರು ತಿಳಿಸಿದ್ದಾರೆ.
ಮಲ್ಲಿಗೆಯನ್ನು ಹೆಚ್ಚು ದಿನ ಇಡಲು ಬರುವುದಿಲ್ಲ. ಆದರೂ ಮಾರಾಟಗಾರರು ಫ್ರಿಡ್ಜ್ನಲ್ಲಿ ಇಟ್ಟು ಒಂದೆರಡು ದಿನ ಶೇಖರಿಸಿಡುತ್ತಾರೆ. ಶಂಕರಪುರ ಮಲ್ಲಿಗೆ ಬದಲಿಗೆ ಭಟ್ಕಳ ಮಲ್ಲಿಗೆ, ಜಾಜಿಯನ್ನು ಹೆಚ್ಚಿಗೆ ಮಾರಾಟಗಾರರು ಮಾರಾಟ ಮಾಡು ತ್ತಿದ್ದಾರೆ. ಅನಿವಾರ್ಯವಾಗಿ ಕೆಲವರು ಬೇರೆ ಹೂವುಗಳನ್ನು ಖರೀದಿಸುತ್ತಿದ್ದಾರೆ. ಸೇವಂತಿಗೆ, ಕಾಕಡ, ಗುಲಾಬಿ, ಹಿಂಗಾರ, ಗೊಂಡೆ ಹೂಗಳ ದರವೂ ಹೆಚ್ಚಾಗಿದೆ. ಎಲ್ಲೆಡೆ ಹೂವಿನ ವ್ಯಾಪಾರ ಭರ್ಜರಿಯಾಗಿದೆ.
ತೆಂಗಿನಕಾಯಿ ಬೆಲೆಯೂ ಹೆಚ್ಚಳ
ನವರಾತ್ರಿ ಪೂಜೆ, ಉಪವಾಸ ಆಚರಿಸುವ ಸಮಯ ದಲ್ಲಿ ಹೆಚ್ಚಿನವರು ಸಸ್ಯಾಹಾರ ಸೇವಿಸುವ ಕಾರಣ ಮುಂದಿನ 2 ವಾರ ತರಕಾರಿಗೂ ಬೇಡಿಕೆ ಹೆಚ್ಚಿರುತ್ತದೆ. ಇದರಿಂದಾಗಿ ಕೆಲವು ನಿರ್ದಿಷ್ಟ ತರಕಾರಿಗಳನ್ನು ಹೊರತು ಪಡಿಸಿ ಉಳಿ ದೆಲ್ಲ ರೀತಿಯ ತರಕಾರಿಗಳ ಬೆಲೆ ಯಲ್ಲಿ ಹೆಚ್ಚಳವಾಗತೊಡಗಿದೆ. ಅದರೊಟ್ಟಿಗೆ ತೆಂಗಿನಕಾಯಿ ಬೆಲೆಯೂ ಏರಿದ್ದು, 1 ತೆಂಗಿನ ಕಾಯಿಗೆ 22 ರೂ. ಆಗಿದೆ. ಬೇಡಿಕೆ ಏರಿ, ಸರಬರಾಜು ಕಮ್ಮಿ ಯಾದರೆ 25 ರೂ.ಗೆ ಏರಿದರೂ ಆಶ್ಚರ್ಯ ವಿಲ್ಲ ಎಂದು ಮಾರಾಟಗಾರರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
MUST WATCH
ಹೊಸ ಸೇರ್ಪಡೆ
Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ
Box office: ಈ ವಾರ ಬಾಲಿವುಡ್ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ