ಹಬ್ಬದ ಸಡಗರಕ್ಕೆ ಹೊಸ ಮೆರುಗು; ನವರಾತ್ರಿ ಸಂಭ್ರಮಕ್ಕೆ ಉದಯವಾಣಿ ನವರೂಪ


Team Udayavani, Sep 24, 2022, 6:20 AM IST

ಹಬ್ಬದ ಸಡಗರಕ್ಕೆ ಹೊಸ ಮೆರುಗು; ನವರಾತ್ರಿ ಸಂಭ್ರಮಕ್ಕೆ ಉದಯವಾಣಿ ನವರೂಪ

ಮಣಿಪಾಲ: ನಾರಿಶಕ್ತಿಯನ್ನು ಆರಾಧಿಸುವ, ಗೌರವಿಸುವ, ಸಂಭ್ರಮಿಸುವ ನವರಾತ್ರಿಗೆ ಇನ್ನು ಕೆಲವೇ ದಿನ. ಒಂಬತ್ತು ದಿನಗಳ ಈ ಮಹಾಪರ್ವದ ಸಡಗರವನ್ನು ಹೆಚ್ಚಿಸುವುದಕ್ಕಾಗಿ ಜನಮನದ ಜೀವನಾಡಿ ಉದಯವಾಣಿ ಆಯೋಜಿಸುತ್ತಿರುವ “ನವರೂಪ’ವೂ ಮತ್ತೆ ಬಂದಿದೆ.

ನವರಾತ್ರಿಯ ಒಂಬತ್ತು ದಿನಗಳಲ್ಲಿ ಹೆಂಗೆಳೆಯರು ಪ್ರತೀ ದಿನವೂ ಒಂದೊಂದು ವರ್ಣದ ಸೀರೆಯನ್ನು ಧರಿಸಿ ಸಂಭ್ರಮಿ ಸುವುದಕ್ಕೆ ಉದಯವಾಣಿ ಕಲ್ಪಿಸಿರುವ ಅವಕಾಶ ಈ ನವರೂಪ.

ಕೇವಲ ನವವರ್ಣಗಳ ಸೀರೆ ಧರಿಸಿ ಖುಷಿ ಪಡುವುದು ಮಾತ್ರ ಅಲ್ಲ; ಗೆಳತಿಯರ ಜತೆ ಸೇರಿ ಹಬ್ಬದ ಹೊಸ ವಾತಾವರಣವನ್ನು ಸೃಷ್ಟಿಸುವು ದಕ್ಕೂ ಉದಯವಾಣಿ ನವರೂಪ ಅವಕಾಶ ಮಾಡಿ ಕೊಡುತ್ತದೆ. ಭರಪೂರ ಸಂಭ್ರಮ ಪಡುವುದಕ್ಕೆ ನವರೂಪ ಒಂದು ಉತ್ತಮ ಅವಕಾಶ. ಈ ಕಾರಣ ದಿಂದಾಗಿಯೇ ಈ ಬಾರಿಯ ಉದಯವಾಣಿ “ನವರೂಪ’ಕ್ಕೆ ಹೆಂಗೆಳೆಯರಿಂದ ಭರ್ಜರಿ ಪ್ರತಿಸ್ಪಂದನೆ ವ್ಯಕ್ತವಾಗುವ ನಿರೀಕ್ಷೆಯಿದೆ.

ಇದಕ್ಕೆ ತಕ್ಕಂತೆ ಈಗಾಗಲೇ ಸಾಲುಮರದ ತಿಮ್ಮಕ್ಕ, ಸಚಿವೆ ಶಶಿಕಲಾ ಜೊಲ್ಲೆ, ಡಾ| ಸಂಧ್ಯಾ ಎಸ್‌. ಪೈ ಆದಿಯಾಗಿ ಪ್ರಮುಖ ಒಂಬತ್ತು ಮಂದಿ ನಾರೀಮಣಿಯರು ನಿಯೋಜಿತ ವರ್ಣಗಳ ಸೀರೆಗಳನ್ನು ಉಟ್ಟು ನವರೂಪದ ಸಂಭ್ರಮಕ್ಕೆ ಮುನ್ನುಡಿ ಬರೆದಿದ್ದಾರೆ.

ಮೊದಲ ದಿನ, ಸೆ. 26ರಂದು ಶ್ವೇತ ಅಂದರೆ ಬಿಳಿ, ಎರಡನೇ ದಿನ, ಸೆ. 27ರಂದು ಕೆಂಪು, ಮೂರನೇ ದಿನ, ಸೆ. 28ರಂದು ನೀಲಿ, ನಾಲ್ಕನೇ ದಿನ ಸೆ. 29 ರಂದು ಹಳದಿ, ಐದನೇ ದಿನ, ಸೆ. 30ರಂದು ಹಸುರು, ಆರನೇ ದಿನ, ಅ. 1ರಂದು ಬೂದು, ಏಳನೇ ದಿನ ಅ. 2ರಂದು ಕಿತ್ತಳೆ, ಎಂಟನೇ ದಿನ ಅ. 3 ರಂದು ಗುಲಾಬಿ, ಒಂಬತ್ತನೇ ದಿನ, ಅ. 4ರಂದು ನೇರಳೆ – ಹೀಗೆ ಒಂಬತ್ತು ದಿನಗಳಿಗೆ ಒಂಬತ್ತು ವರ್ಣಗಳು.

ಆಯಾ ದಿನಕ್ಕೆ ಸೂಚಿತವಾದ ವರ್ಣದ ಸೀರೆ ಯನ್ನು ಧರಿಸಿ ಚಿತ್ರ ತೆಗೆದು ಆಯಾ ದಿನ ಸಂಜೆ 3 ಗಂಟೆ ಒಳಗೆ ವಾಟ್ಸ್‌ಆ್ಯಪ್‌ ಮಾಡಬೇಕು. ಹಳೆಯ ಚಿತ್ರಗಳಿಗೆ ಅವಕಾಶ ಇಲ್ಲ. ಯಾವುದೇ ವಯಸ್ಸಿನವರೂ ಭಾಗವಹಿಸಬಹುದು. ಕುಟುಂಬ ಸದಸ್ಯೆಯರು, ಗೆಳತಿಯರು, ಸಹೋದ್ಯೋಗಿಗಳು, ಸಂಘ ಸಂಸ್ಥೆಗಳ ಸದಸ್ಯೆಯರು ಭಾಗವಹಿಸಲು ಉತ್ತಮ ಅವಕಾಶ. ಸಮೂಹ ಚಿತ್ರಗಳಿಗೆ ಆದ್ಯತೆ, ಕನಿಷ್ಠ ಮೂರು ಮಂದಿ ಇರಬೇಕು. ಹೆಸರು, ಊರು, ಸಂಪರ್ಕ ಸಂಖ್ಯೆ ನಮೂದಿಸಲೇಬೇಕು. ಉತ್ತಮ ಗುಣಮಟ್ಟದ ಆಯ್ದ ಚಿತ್ರಗಳನ್ನು ಮರುದಿನದ ಸಂಚಿಕೆಯಲ್ಲಿ ಪ್ರಕಟಿಸಲಾಗುತ್ತದೆ.

ಆಯಾ ಪ್ರದೇಶದವರು (ಉಡುಪಿ, ಕುಂದಾಪುರ, ಕಾರ್ಕಳ, ಮಂಗಳೂರು, ಮಂಗಳೂರು ಗ್ರಾಮಾಂ ತರ, ಪುತ್ತೂರು, ಬಂಟ್ವಾಳ) ನಿಗದಿತ ವಾಟ್ಸ್‌ಆ್ಯಪ್‌ ಸಂಖ್ಯೆಗಳಿಗೆ ಚಿತ್ರಗಳನ್ನು ಕಳುಹಿಸಬೇಕು.

ಅಪೂರ್ವ ಅವಕಾಶ
ನವರಾತ್ರಿ ಸಂಭ್ರಮವನ್ನು ಇಮ್ಮಡಿ- ಮುಮ್ಮಡಿಗೊಳಿಸಿಕೊಳ್ಳಲು ಉದಯವಾಣಿಯ ನವರೂಪ ಒಂದು ಉತ್ತಮ ಅವಕಾಶ. ವರ್ಷಕ್ಕೊಮ್ಮೆ ಕದ ತಟ್ಟುವ ಈ ಅಪೂರ್ವ ಕಾರ್ಯಕ್ರಮ ನಿಮ್ಮ ಹಬ್ಬದ ಆಚರಣೆಗೆ ಒಂದು ವಿಶಿಷ್ಟ ಆಯಾಮ ನೀಡಲಿದೆ. ಬನ್ನಿ, ಸೆ. 26ರಿಂದ ಆರಂಭವಾಗುವ ಉದಯವಾಣಿ ನವರೂಪದಲ್ಲಿ ನಿಮ್ಮ ಗೆಳತಿಯರು, ಕುಟುಂಬ ಸದಸ್ಯೆಯರ ಜತೆಗೆ ಪಾಲ್ಗೊಂಡು ಮಿಂಚುವುದಷ್ಟೇ ಅಲ್ಲ; ಉದಯವಾಣಿ ದಿನಪತ್ರಿಕೆಯ ಪುಟಗಳನ್ನು ಅಲಂಕರಿಸುವುದನ್ನು ಕಂಡು ಹಿರಿಹಿರಿ ಹಿಗ್ಗಿ.

ಬಹುಮಾನ ಪಡೆಯುವ ಅದೃಷ್ಟಶಾಲಿಗಳಾಗಿ
ಉದಯವಾಣಿ ನವರೂಪದಲ್ಲಿ ಪ್ರತೀ ದಿನ ಬಹುಮಾನ ಗೆಲ್ಲುವ ಅವಕಾಶವೂ ಇದೆ. ಪ್ರತೀ ದಿನ ಮೂವರು ಅದೃಷ್ಟ ಶಾಲಿಗಳನ್ನು ಚೀಟಿ ಎತ್ತಿ ಆರಿಸಲಾಗುತ್ತದೆ. ಹಬ್ಬದ ಕೊನೆಯಲ್ಲಿ ಬಂಪರ್‌ ಬಹುಮಾನ ಪಡೆಯುವ ಅದೃಷ್ಟವೂ ಇದೆ.

 

ಟಾಪ್ ನ್ಯೂಸ್

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.