ಬೇಕಿದೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನ


Team Udayavani, Apr 5, 2018, 6:45 AM IST

0104kota2e.jpg

ಕೋಟ: ಸಾೖಬ್ರಕಟ್ಟೆ ಸಮೀಪದ ಯಡ್ತಾಡಿ ಕಪ್ಪುಕಲ್ಲಿನ ಗಣಿಗಾರಿಕೆಗೆ ಹೆಸರುವಾಸಿಯಾದ ಊರು. ಆದರೆ ಇದೇ ಕಪ್ಪುಕಲ್ಲು ಇಲ್ಲಿನ ನಿವಾಸಿಗಳಿಗೆ ಶಾಪವಾಗಿ ಪರಿಣಮಿಸಿದೆ. ಕಾರಣ ಇಲ್ಲಿ ಬಾವಿ, ಬೋರ್‌ವೆಲ್‌  ತೋಡಿದರೆ  ನೀರು ಸಿಗುತ್ತಿಲ್ಲ.  ವರ್ಷವೂ ಸ್ಥಳೀಯ ಗ್ರಾ.ಪಂ. ನೀರು ಸರಬರಾಜು ಮಾಡಲು ಸಾಕಷ್ಟು ಪ್ರಯತ್ನ ಪಡುತ್ತದೆ. ಪಕ್ಕದ ಶಿರಿಯಾರ ಗ್ರಾ.ಪಂ.ನಲ್ಲೂ ಇದೇ ಸಮಸ್ಯೆ ಇದೆ. 

ಎಲ್ಲೆಲ್ಲಿ ಸಮಸ್ಯೆ? 
ಯಡ್ತಾಡಿ ಹಾಗೂ ಹೇರಾಡಿ  ಗ್ರಾಮಗಳನ್ನು ಒಳಗೊಂಡ ಯಡ್ತಾಡಿ ಗ್ರಾ.ಪಂ. ನಲ್ಲಿ ಒಟ್ಟು 5 ವಾರ್ಡ್‌ಗಳಿದ್ದು, 4230 ಜನಸಂಖ್ಯೆ ಹೊಂದಿದೆ. ನೀರು ಸರಬರಾಜಿಗೆ 6 ಸರಕಾರಿ ಬಾವಿ, 3 ಓವರ್‌ಹೆಡ್‌ ಟ್ಯಾಂಕ್‌ಗಳಿದೆ. ಸಾೖಬ್ರಕಟ್ಟೆ, ಜನತಾ ಕಾಲನಿ, ರಂಗನಕೆರೆ, ಕಾಜ್ರಲ್ಲಿ, ಅಲ್ತಾರು ಕೇದಿಕೆರೆ, ಬಳೆಗಾರ್‌ಬೆಟ್ಟು, ಗರಿಕೆಮಠ ಮುಂತಾದ ಕಡೆಗಳಲ್ಲಿ  ಪ್ರತಿ ವರ್ಷ ನೀರಿನ ಸಮಸ್ಯೆ ಎದುರಾಗುತ್ತದೆ. ಹಿಂದೆ ಟ್ಯಾಂಕರ್‌ ನೀರು ಸರಬರಾಜಿಗೇ 3 ಲಕ್ಷ ವ್ಯಯಿಸಿದ ಉದಾಹರಣೆ ಇದೆ.  ಶಿರಿಯಾರ ಗ್ರಾ.ಪಂ. ಒಟ್ಟು 4839 ಜನಸಂಖ್ಯೆ ಹೊಂದಿದೆ. 3 ಸರಕಾರಿ ಬಾವಿ, 2 ಓವರ್‌ ಹೆಡ್‌ ಟ್ಯಾಂಕ್‌ ಇದೆ. ಕಾಜ್ರಲ್ಲಿ, ಕೆದ್ಲಹಕ್ಲು, ಗರಿಕೆಮಠ ಮುಂತಾದ ಭಾಗಗಳಲ್ಲಿ  ನೀರಿನ ಸಮಸ್ಯೆ ಇದೆ.

ಅಂತರ್ಜಲ ಮಟ್ಟ ಕುಸಿತ 
ಈ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್‌ಜಲದ ಮಟ್ಟ ಕುಸಿಯುತ್ತಿದೆ. ಹೀಗಾಗಿ ಸರಕಾರಿ ಬಾವಿ, ಬೋರ್‌ವೆಲ್‌ಗ‌ಳು ಬೇಸಗೆಯಲ್ಲಿ  ಬೇಗನೆ ಬರಿದಾಗುತ್ತಿವೆ. ಹೊಸ ಬೋರ್‌ಗಳನ್ನು ಕೊರೆಸಿದರೂ ವಿಫಲವಾಗುತ್ತಿದೆ. ಕೆಲವು ಕಡೆಗಳಲ್ಲಿ  ಗ್ರಾ.ಪಂ. ನೀರು ಹೊರತುಪಡಿಸಿದರೆ ಬೇರೆ ನೀರಿನ ಮೂಲವೇ ಇಲ್ಲವಾಗಿದೆ. ವರ್ಷದಿಂದ ವರ್ಷಕ್ಕೆ ಸಮಸ್ಯೆ ಹೆಚ್ಚುತ್ತಿದೆ.
 
ಶಾಶ್ವತ ಯೋಜನೆ ಬೇಕು
ಯಡ್ತಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ದೊಡ್ಡಮಟ್ಟದ  ಕುಡಿಯುವ ನೀರಿನ ಸಮಸ್ಯೆ ಇದೆ. ವಾರಾಹಿ ಏತ ನೀರಾವರಿ ಕಾಲುವೆ ವಿಸ್ತರಣೆಯಾಗಿ ಇಲ್ಲಿನ ಕೆರೆ, ಮದಗಗಳಿಗೆ ಸಂಪರ್ಕವಾದರೆ ಉತ್ತಮ. ಇಲ್ಲವಾದರೆ ಬಂಡೀಮಠ ಉಪ್ಪುನೀರು ತಡೆ ಅಣೆಕಟ್ಟು ಅಥವಾ ಸ್ಥಳೀಯ ಹೊಳೆಯ ನೀರನ್ನು  ಶುದ್ಧೀಕರಿಸಿ ನೀಡುವ  ಶಾಶ್ವತ ಯೋಜನೆ ಕಾರ್ಯಗತವಾಗಬೇಕಿದೆ. 

ಅಂತರ್ಜಲ ಮಟ್ಟ ಕುಸಿತ 
ಈ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್‌ಜಲದ ಮಟ್ಟ ಕುಸಿಯುತ್ತಿದೆ. ಹೀಗಾಗಿ ಸರಕಾರಿ ಬಾವಿ, 
ಬೋರ್‌ವೆಲ್‌ಗ‌ಳು ಬೇಸಗೆಯಲ್ಲಿ  ಬೇಗನೆ ಬರಿದಾಗುತ್ತಿವೆ. ಹೊಸ ಬೋರ್‌ಗಳನ್ನು ಕೊರೆಸಿದರೂ ವಿಫಲವಾಗುತ್ತಿದೆ. ಕೆಲವು ಕಡೆಗಳಲ್ಲಿ  ಗ್ರಾ.ಪಂ. ನೀರು ಹೊರತುಪಡಿಸಿದರೆ ಬೇರೆ ನೀರಿನ ಮೂಲವೇ ಇಲ್ಲವಾಗಿದೆ. ವರ್ಷದಿಂದ ವರ್ಷಕ್ಕೆ ಸಮಸ್ಯೆ ಹೆಚ್ಚುತ್ತಿದೆ. 

ಪಂಚಾಯತ್‌ ಅನುದಾನ ದಿಂದಲೇ ನೀರು ಪೂರೈಕೆ 
ಹಲವೆಡೆ ನೀರಿನ ಸಮಸ್ಯೆ ಇದೆ. ಈಗಾಗಲೇ ಟ್ಯಾಂಕರ್‌ ನೀರಿಗಾಗಿ ಗ್ರಾಮಸ್ಥರಿಂದ ಬೇಡಿಕೆ ಬಂದಿದೆ. ತುರ್ತಾಗಿ ಪಂಚಾಯತ್‌ ಅನುದಾನದಿಂದಲೇ ನೀರು ಪೂರೈಕೆ ಆರಂಭಿಸುತ್ತಿದ್ದೇವೆ.
– ವಿನೋದ ಕಾಮತ್‌,  
ಪಿಡಿಒ ಯಡ್ತಾಡಿ ಗ್ರಾ.ಪಂ.

ವಾರಾಹಿ ನೀರು ದೊರೆತರೆ ಸಮಸ್ಯೆ ಪರಿಹಾರ
ಶಿರಿಯಾರ ಗ್ರಾ.ಪಂ.ದಲ್ಲೂ ಸಮಸ್ಯೆ ಇದೆ. ವಾರಾಹಿ ಕಾಲುವೆಯ ನೀರನ್ನು ಶಿರಿಯಾರ ಮದಗಕ್ಕೆ  ಜೋಡಿಸುವ ಪ್ರಸ್ತಾವನೆ ಈ ಹಿಂದೆ ಕೇಳಿಬಂದಿದ್ದು ಇದು ಕಾರ್ಯಗತವಾದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.   
– ಆನಂದ್‌ ನಾಯ್ಕ,  
ಕಾರ್ಯದರ್ಶಿ ಶಿರಿಯಾರ, ಗ್ರಾ.ಪಂ.

ಸಮಸ್ಯೆ ಪರಿಹರಿಸಿ
ಯಡ್ತಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೇಸಗೆಯಲ್ಲಿ ದೊಡ್ಡಮಟ್ಟದ  ಕುಡಿಯುವ ನೀರಿನ ಸಮಸ್ಯೆ ಇದೆ. ಇಲ್ಲಿನ ಶೇ.90ರಷ್ಟು ಭೂ ಭಾಗ  ಕಲ್ಲಿನಿಂದ ಆವೃತವಾದ್ದರಿಂದ ಬೋರ್‌ವೆಲ್‌ಗ‌ಳು ವಿಫಲವಾಗುತ್ತದೆ. ಟ್ಯಾಂಕರ್‌ ನೀರು ತಾತ್ಕಾಲಿಕ ಪರಿಹಾರವಷ್ಟೇ. ವಾರಾಹಿ, ಏತ ನೀರಾವರಿ ಕಾಲುವೆ ವಿಸ್ತರಣೆಯಾಗಬೇಕು. ಬಂಡೀಮಠ ಉಪ್ಪುನೀರು ತಡೆ ಅಣೆಕಟ್ಟು ಅಥವಾ ಸ್ಥಳೀಯ ಹೊಳೆಯ ನೀರನ್ನು  ಶುದ್ಧೀಕರಿಸಿ ನೀಡುವ ಯೋಜನೆಯಾಗಬೇಕು.  
– ಅಲ್ತಾರು ಗೌತಮ್‌ ಹೆಗ್ಡೆ,  ಸ್ಥಳೀಯರು

– ರಾಜೇಶ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.