ಮೀನುಗಾರಿಕೆಯಲ್ಲಿ ಹೊಸ ವಿಧಾನ; ಉತ್ತಮ ಆದಾಯ

ಪಂಜರದಲ್ಲಿ ಮೀನು ಕೃಷಿಯತ್ತ ಮೀನುಗಾರರ ಚಿತ್ತ

Team Udayavani, Jan 7, 2020, 5:53 AM IST

26012UPPE4-12

ಕುರುಡಿ ಮೀನು ಸಾಕಣೆಯೊಂದಿಗೆ ಬೇರೆ ಮೀನುಗಳ ಸಾಕಣೆಗೆ ಪ್ರಯತ್ನ ಮಾಡಬಹುದು. (ಕೊಕ್ಕರ್‌, ಕೆಖಬೇರಿ, ಕೋಬಿಯಾ) ಸ್ಥಳೀಯವಾಗಿ ದೊರಕುವ ಸಣ್ಣ ಮೀನುಗಳ ನರ್ಸರಿ ಪಾಲನೆ ಮೀನು ಕೃಷಿಯಲ್ಲಿ ತೊಡಗಿಸಿ ಕೊಳ್ಳಬಹುದು. ಸಮಗ್ರ ಕೃಷಿ ಪದ್ಧತಿ ಯಲ್ಲಿ ಮೀನು ಕೃಷಿ ಕೈಗೊಂಡು ಉತ್ಪಾದನೆ ಹೆಚ್ಚಿಸಲು ಸಾಧ್ಯವಾಗುತ್ತದೆ.

ಉಪ್ಪುಂದ: ಮೀನುಗಾರಿಕೆ ಕ್ಷೇತ್ರದಲ್ಲಿ ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಮತ್ತು ಪೌಷ್ಠಿಕ ಆಹಾರದ ದೃಷ್ಟಿಯಿಂದ ಹೊಸ ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಂಡು ಕೃಷಿಯನ್ನು ಮಾಡಲಾಗುತ್ತಿದೆ. ಅದರಂತೆ ಪಂಜರ ಮೀನು ಕೃಷಿ ಈಗ ಚಾಲ್ತಿಯಲ್ಲಿದೆ.

ಮಂಗಳೂರಿನ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನ ಸಂಸ್ಥೆ ಸಾಂಪ್ರದಾಯಿಕ ಮೀನುಗಾರರ ಆದಾಯ ವೃದ್ಧಿಗಾಗಿ ದಶಕಗಳ ಹಿಂದೆ ಪಂಜರದ ಮೀನು ಕೃಷಿಯನ್ನು ಪರಿಚಯಿಸಿತ್ತು.

ಜಪಾನ್‌ ಮೂಲ
ಸಮುದ್ರದಲ್ಲಿ ಪಂಜರದ ಕೃಷಿಯನ್ನು 1950ರಲ್ಲಿ ಪ್ರಥಮವಾಗಿ ಜಪಾನ್‌ ಪ್ರಾರಂಭಿಸಿತ್ತು. ಬಳಿಕ 1980ರಲ್ಲಿ ಉತ್ತರ ಯೂರೋಪ್‌ ಮತ್ತು ಉತ್ತರ ಅಮೇರಿಕಾ ಪಂಜರದಲ್ಲಿ ಸಾಲ್ಮನ್‌ ಮೀನು ಕೃಷಿಯನ್ನು ಪ್ರಾರಂಭಿಸಿತ್ತು. ಪ್ರಪಂಚಾದ್ಯಂತ ಸಮುದ್ರ ಪಂಜರ ಕೃಷಿಯಲ್ಲಿ ಶೇ.90ರಷ್ಟು ಕುರುಡಿ ಮತ್ತು ಸೀ ಬ್ರಿàಮ್‌ ತಳಿಯನ್ನು ಬಳಸಾಗುತ್ತಿದೆ.

ಭಾರತದಲ್ಲಿ ವಿಶಾಖಪಟ್ಟದಲ್ಲೇ ಮೊದಲು
ಭಾತರದಲ್ಲಿ ಮೊಟ್ಟ ಮೊದಲ ಬಾರಿಗೆ 2007ರಲ್ಲಿ ವಿಶಾಖಪಟ್ಟದಲ್ಲಿ ಸಿಎಮ್‌ಎಫ್‌ಆರ್‌ಐ ಅವರು ಪಂಜರದ ಮೀನು ಕೃಷಿಯನ್ನು ಪ್ರಾಯೋಗಿಕವಾಗಿ ನಡೆಸಿದರು. ಪ್ರಸ್ತುತ ಗುಜರಾತ್‌, ಮಹಾರಾಷ್ಟ್ರ, ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ಯಶಸ್ವಿಯಾಗಿ ನಡೆಸಲಾಗುತ್ತಿದೆ.

ಕರಾವಳಿಯಲ್ಲಿ ಪಂಜರ ಮೀನು ಕೃಷಿಯ ಮೂಲಕ ಉತ್ಪಾದನೆ ಹೆಚ್ಚಿಸುವಲ್ಲಿ ಮೀನುಗಾರಿಕೆ ಸಂಶೋಧನೆ ಸಂಸ್ಥೆ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. 2008ರಲ್ಲಿ ಈ ವಿಧಾನವನ್ನು ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದಲ್ಲಿ ಆರಂಭಿಸಿತ್ತು.

ಜಾಗ ಆಯ್ಕೆ ಹೇಗೆ?
ಪಂಜರ ಕೃಷಿಗೆ ಸಿಹಿ ನೀರು, ಸಮುದ್ರ, ಹಿನ್ನೀರು, , ಚೌಳು ನೀರು ಮತ್ತು ಅಳಿವೆಗಳು ಸೂಕ್ತ ವಾಗುತ್ತವೆ. ನೀರಿನ ಆಳ 3-5 ಮೀಟರ್‌ ಇರಬೇಕು. ನೀರಿನ ಒಳ ಹರಿವು ನಿರಂತರವಾಗಿದ್ದಲ್ಲಿ ಕರಗಿದ ಆಮ್ಲಜನಕ ಯೆಥೇಚ್ಚವಾಗಿ ದೊರಕುವುದಲ್ಲದೆ ಯಾವುದೇ ತ್ಯಾಜ್ಯ ಪಂಜರದಲ್ಲಿ ಉಳಿಯಲು ಬಿಡುವುದಿಲ್ಲ.

ಪಂಜರದ ನಿರ್ಮಾಣ
ಆಯತಾಕಾರದ 6.2 ಮೀ. ಗಾತ್ರದ ಜಿ.ಐ. ಪೈಪ್‌ಗ್ಳಿಂದ ತಯಾರಿಸಲಾದ ಪಂಜರವನ್ನು ಉಯೋಗಿಸಲು ಯೋಗ್ಯವಾಗಿರುತ್ತದೆ. ಪಂಜರದ ಹೊರ ಪದರ ನಿರ್ಮಾಣಕ್ಕೆ ಹೆಚ್‌.ಡಿ.ಪಿ.ಇ. ಮೆಷ್‌ 48ಎಂ.ಎಂ. ಬಳಸಲಾಗುತ್ತದೆ. ಒಳ ಪದರವನ್ನು ಮೆಷ್‌ 18 -20ಎಂ.ಎಂ. ಗಾತ್ರದ ನೆಟ್ಟನ್ನು ಉಪಯೋಗಿಸಲಾಗುತ್ತದೆ.

ಬೆಳೆಯುವ ತಳಿ
ಕುರುಡಿ ಮೀನು, ಕೆಂಬೇರಿ ಮೀನು, ಕೋಬಿಯಾ ಪ್ರಮುಖವಾದ ತಳಿಗಳು. ಆದರೆ ಎಲ್ಲಾ ತಳಿಗಳ ಮರಿಗಳು ಸಿಗುವುದಿಲ್ಲ. ಕುರುಡಿ ಮೀನು ಮರಿಗಳನ್ನು ರಾಜೀವ್‌ ಗಾಂಧಿ ಸೆಂಟರ್‌ ಫಾರ್‌ ಅಕ್ವಾ ಕಲ್ಚರ್‌ (ಆರ್‌ಜೆಸಿಎ) ವಿಶಾಖ ಪಟ್ಟಣ/ಚೆನ್ನೈನಲ್ಲಿ ಮಾತ್ರ ಲಭ್ಯವಿರುತ್ತದೆ. ಅಲ್ಲಿಂದ 2.5ಸೆಂ.ಮೀ.5.5ಸೆಂ.ಮೀ. ಗಾತ್ರದ ಮರಿಗಳನ್ನು ಖರೀದಿಸಲಾಗುತ್ತದೆ. ಮರಿಗಳ ಮೌಲ್ಯವು ಗಾತ್ರಕ್ಕೆ ತಕ್ಕಂತೆ ಇರುತ್ತದೆ. ಪ್ರತಿ ಮೀನಿಗೆ 1ರಿಂದ 4 ರೂ.ವರೆಗೆ ಇರುತ್ತದೆ.

ಕುರುಡಿ ಮೀನಿನ ವಿಶೇಷತೆಗಳು
ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ. ಅತಿ ಬೇಡಿಕೆ ಮತ್ತು ಬೆಲೆಯುಳ್ಳ ತಳಿ, ಹೆಚ್ಚು ಇಳುವರಿ, ಶೀಘ್ರ ಬೆಳವಣಿಗೆ, ಸ್ಥಳೀಯ ಆಹಾರಕ್ಕೆ ಹೊಂದಿಕ್ಕೊಳ್ಳತ್ತದೆ. 0-40ಪಿ.ಪಿ.ಟಿ. ವರೆಗೂ ಉಪ್ಪಿನಂಶ ತಡೆದುಕೊಳ್ಳಬಲ್ಲದು. ಸಿಹಿ ನೀರಿನಲ್ಲೂ ಸಾಕಬಹುದು.

ಮೀನುಗಳ ಪಾಲನೆ
ಸಣ್ಣ ಮೀನುಗಳನ್ನು ಪ್ರಥಮವಾಗಿ ನರ್ಸರಿ ಕೆರೆಗಳಲ್ಲಿ ಬಿತ್ತನೆ ಮಾಡಿ, ಸುಮಾರು 2ತಿಂಗಳ ಕಾಲ ಪ್ರತೀ 15 ದಿನಗಳಿಗೊಮ್ಮೆ ಗ್ರೇಡಿಂಗ್‌ ಮಾಡಿ ಬೆಳಸಲಾಗುತ್ತದೆ. ಕುರುಡಿ ಮೀನುಗಳಲ್ಲಿ ದೊಡ್ಡ ಗಾತ್ರದ ಮೀನು ಚಿಕ್ಕ ಗಾತ್ರದ ಮೀನು ಮರಿಗಳನ್ನು ತಿನ್ನು ವುದರಿಂದ ಗ್ರೇಡಿಂಗ್‌ ಮಾಡು ವುದು ಅತೀ ಅವಶ್ಯಕ. ಇಲ್ಲಿ 18-20 ಗ್ರಾಂ ಗಾತ್ರದ ವರೆಗೆ ಬೆಳಸಲಾಗುತ್ತದೆ. ಬಳಿಕ ಹಿನ್ನೀರಿನ ಪ್ರದೇಶದ ಒಂದು ಪಂಜರದಲ್ಲಿ 1000 ಮೀನು ಮರಿಗಳನ್ನು ಬಿತ್ತನೆ ಮಾಡಿ 16 ತಿಂಗಳು ಬೆಳೆಸಲಾಗುತ್ತದೆ.

ಉತ್ತಮ ಆದಾಯ
ಮೀನುಗಾರಿಕೆ ವೃತ್ತಿಯ ಜೊತೆಗೆ ಪಂಜರದ ಮೀನು ಕೃಷಿಯನ್ನು ಕೈಗೊಂಡಿದ್ದೇನೆ. ಆರಂಭದಲ್ಲಿ ಹತ್ತು ಸಾವಿರದಿಂದ ಪ್ರಾರಂಭಿಸಿ ಪ್ರಸ್ತುತ ರೂ.1.50ಲಕ್ಷ ಖರ್ಚ ಮಾಡಿ ಸುಮಾರು 4 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದೇನೆ. ಮೀನಿನ ಮರಿಗಳನ್ನು ಚೆನ್ನೈ, ಆಂಧ್ರಪ್ರದೇಶದಿಂದ ತರಬೇಕಿದೆ. ರಾಜ್ಯ ಸರಕಾರವು ಕರ್ನಾಟಕದಲ್ಲಿ ಮರಿ ಉತ್ಪನ್ನ ಕೇಂದ್ರ ನಿರ್ಮಾಣ ಮಾಡಿದರೆ ಮೀನುಗಾರರಿಗೆ ಅನುಕೂಲವಾಗುತ್ತದೆ.
– ರವೀಂದ್ರ ಖಾರ್ವಿ ಉಪ್ಪುಂದ, ರಾಷ್ಟ್ರ ಪ್ರಶಸ್ತಿ ವಿಜೇತ ಪಂಜರ ಮೀನು ಕೃಷಿಕ

ಆಹಾರ ಕ್ರಮ
ದಿನಕ್ಕೆರಡು ಬಾರಿ (ಬೆಳಗ್ಗೆ ಮತ್ತು ಸಂಜೆ) ಆಹಾರವನ್ನು ಕೊಡಬೇಕು. ಮೊದಲೆರಡು ತಿಂಗಳು ಸಿಗಡಿ ಆಹಾರ ಸ್ಟಾರrರ್‌ 1ಮತ್ತು 2ಕೊಡಲಾಗುತ್ತದೆ. ಅನಂತರ ಎರಡು ತಿಂಗಳು ಭೂತಾಯಿ ಮೀನು ಅಥವಾ ಇತರೆ ಮೀನುಗಳನ್ನು ಸಣ್ಣದಾಗಿ ಕತ್ತರಿಸಿ ನೀಡಲಾಗುತ್ತದೆ. ಮೀನಿನ ಬೆಳವಣಿಗೆಗೆ ಅನುಸಾರವಾಗಿ ಶೇ.2-3ರಷ್ಟು ಆಹಾರವನ್ನು ನೀಡಲಾ ಗುತ್ತದೆ. 6ತಿಂಗಳ ಬಳಿಕ ದೇಹದ ತೂಕದ ಶೇ.10ರಷ್ಟು ಪ್ರಮಾಣದಷ್ಟು ಆಹಾರ ನೀಡಬೇಕು.

– ಕೃಷ್ಣ ಬಿಜೂರು

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

jaಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.