- Friday 06 Dec 2019
ಬಸ್ರೂರು ಮೂರುಕೈ ಹೊಸ ಅಂಡರ್ಪಾಸ್ ನಿರಾತಂಕ
Team Udayavani, Nov 15, 2019, 5:48 AM IST
ಕುಂದಾಪುರ: ಬಸ್ರೂರು ಮೂರು ಕೈಯಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಪಾದಚಾರಿ ಅಂಡರ್ಪಾಸ್ ಕಾಮಗಾರಿ ನಿರಾತಂಕ ವಾಗಿ ನಡೆಯಲಿದೆ. ಕೋಡಿ ಭಾಗದ ಜನರ ಬೇಡಿಕೆಯಾಗಿ ಯು ಟರ್ನ್ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
ಅವರು ಗುರುವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿ “ಉದಯವಾಣಿ’ ಜತೆ ಮಾತನಾಡಿದರು.
ಬಸ್ರೂರು ಮೂರುಕೈಯಲ್ಲಿ ಈಗಾಗಲೇ ದೊಡ್ಡ ಅಂಡರ್ಪಾಸ್ ಕಾಮಗಾರಿ ಮುಗಿದಿದೆ. ಬಸ್ರೂರು ಕಡೆಯಿಂದ ಬರುವ ವಾಹನಗಳು ಕುಂದಾಪುರ ಕಡೆಗೆ ಬರಲು ಈ ಅಂಡರ್ಪಾಸ್ ಮೂಲಕ ತೆರಳಬಹುದು. ಇದರಲ್ಲಿ ತಲಾ 3 ಅಡಿಗಳಂತೆ ಎರಡು ಬದಿಯಲ್ಲಿ ಪಾದಚಾರಿಗಳಿಗೆ ನಡೆದಾಡಲು ವ್ಯವಸ್ಥೆ ಮಾಡಲಾಗಿತ್ತು. ಶಿವಮೊಗ್ಗ ಕಡೆಯಿಂದ ಬರುವ ಘನವಾಹನಗಳು, ದೊಡ್ಡ ಟ್ಯಾಂಕರ್ಗಳು, 10 ಚಕ್ರದ ವಾಹನಗಳು ತಿರುವು ಕಷ್ಟ ಎಂದು ಈ ಕಾಮಗಾರಿ ಸಂದರ್ಭ ವಾಹನ ಹೋಗಲು ಅನುವು ಮಾಡಿ ಪಾದಚಾರಿ ರಸ್ತೆಯನ್ನು ತೆಗೆಯಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ಪಾದಚಾರಿಗಳಿಗೆ ರಸ್ತೆ ದಾಟಲು ಅವಕಾಶ ನೀಡಲೇಬೇಕು. ಇದರಿಂದಾಗಿ ಪ್ರತ್ಯೇಕ ಅಂಡರ್ಪಾಸ್ ರಚನೆಗೆ ಮಂಜೂರಾತಿ ದೊರಕಿದ್ದು ಟಿ.ಟಿ. ರೋಡ್ಗೆ ತಿರುಗುವಲ್ಲಿ ಗುತ್ತಿಗೆದಾರರು ಕಾಮಗಾರಿ ಆರಂಭಿಸಿದ್ದರು.
ಈ ಹಿನ್ನೆಲೆಯಲ್ಲಿ ಶಾಸಕರು ಭೇಟಿ ನೀಡಿದ್ದರು. ಪರಿಶೀಲಿಸಿ ಸಂಬಂಧಪಟ್ಟವರ ಬಳಿ ಮಾತನಾಡಿ, ಈಗಾಗಲೇ ಕಾಮಗಾರಿ ಆರಂಭಿಸಿ ಪಂಚಾಂಗ ಹಾಕಿದ ಕಾರಣ ಸ್ಥಳಾಂತರ ಕಷ್ಟ. ಒಂದೊಮ್ಮೆ ಸ್ಥಳಾಂತರ ಮಾಡುವುದಾದರೂ, ರದ್ದು ಮಾಡುವುದಾದರೂ ಹೆದ್ದಾರಿ ಪ್ರಾಧಿಕಾರದ ಮುಖ್ಯ ಕಚೇರಿ ದಿಲ್ಲಿಯಿಂದಲೇ ಅನುಮತಿ ಬರಬೇಕು. ಇದು ಮತ್ತಷ್ಟು ಸಮಯ ಕೊಲ್ಲುತ್ತದೆ. ಕಾಮಗಾರಿ ವಿಳಂಬವಾಗುತ್ತದೆ. ಪಾದಚಾರಿಗಳಿಗೆ ದಾಟುವಷ್ಟು ಮಾತ್ರ ವ್ಯವಸ್ಥೆಯ ಅಂಡರ್ಪಾಸ್ ಇದಾಗಿದ್ದು 3.5 ಮೀ. ಎತ್ತರ ಇರುತ್ತದೆ. ವಿನಾಯಕ ಬಳಿ ಹೆದ್ದಾರಿ ಆರಂಭವಾದಲ್ಲಿಗೆ ಅಂಡರ್ಪಾಸ್ನ ಇಳಿಜಾರು ಮುಕ್ತಾಯವಾಗುತ್ತದೆ. ಆದ್ದರಿಂದ ಇಳಿಜಾರು ಮುಂದಕ್ಕೆ ಸಾಗುತ್ತದೆ ಎಂಬ ಕುರಿತು ಆತಂಕ ಬೇಡ. ಕೋಡಿ ಪ್ರದೇಶಕ್ಕೆ ಹೋಗುವವರಿಗೆ ಅನುಕೂಲವಾಗಿಸಲು ಅಪಘಾತ ತಾಣವಾಗದಂತೆ ಜಾಗರೂಕತೆ ವಹಿಸಿ, ಸಾಧ್ಯತೆಗಳನ್ನು ಪರಿಶೀಲಿಸಿ ಯು ಟರ್ನ್ ಮಾಡಿಕೊಡಲಾಗುವುದು ಎಂದು ಶಾಸಕರು ಪ್ರತಿಕ್ರಿಯಿಸಿದರು.
ಬಿಜೆಪಿ ಅಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು, ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕರ ಬಿಲ್ಲವ, ಶಂಕರ ಅಂಕದಕಟ್ಟೆ, ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಮಂಜು ಬಿಲ್ಲವ, ವಿನಾಯಕ ರಿಕ್ಷಾ ಸ್ಟಾಂಡ್ ಅಧ್ಯಕ್ಷ ಮಹೇಶ್ ಶೆಣೈ, ಸಿಐಟಿಯುವಿನ ವಿ. ಚಂದ್ರ, ಲಕ್ಷ್ಮಣ ಬರೆಕಟ್ಟು, ಹಂಗಳೂರು ಪಂಚಾಯತ್ ಮಾಜಿ ಅಧ್ಯಕ್ಷ ಆನಂದ ಪೂಜಾರಿ, ಇಂಟಕ್ನ ಮಹಾಬಲ, ದಿವಾಕರ ಕಡ್ಗಿ ಉಪಸ್ಥಿತರಿದ್ದರು.
ಯು ಟರ್ನ್ಗೆ ಮನವಿ
ಕೋಡಿ ಪ್ರದೇಶಕ್ಕೆ ಹೋಗುವ ನಾಗರಿಕರಿಗೆ ಅನುಕೂಲ ವಾಗುವಂತೆ ವಿನಾಯಕ ಥಿಯೇಟರ್ ಬಳಿ ರಾಷ್ಟ್ರೀಯ ಹೆದ್ದಾರಿಗೆ ಡಿವೈಡರ್ ನೀಡಬೇಕು ಎಂದು ಹಂಗಳೂರು ಕೋಡಿ ನಾಗರಿಕ ಹಿತರಕ್ಷಣಾ ಸಮಿತಿ ಕುಂದಾಪುರ ಆಗ್ರಹಿಸಿತ್ತು. ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಪುರಸಭೆ ವ್ಯಾಪ್ತಿಯ ಮತ್ತು ಹಂಗಳೂರು ಗ್ರಾಮ ಪಂಚಾಯತ್ ವ್ಯಾಪ್ತಿ ಹೊಂದಿಕೊಂಡಿರುವ ವಿನಾಯಕ ಟಾಕೀಸ್ ಬಳಿ ರಸ್ತೆ ತಿರುವನ್ನು ಮೀಸಲಿಡಬೇಕು. ಖಾಸಗಿ ವಿದ್ಯಾ ಸಂಸ್ಥೆಗಳು ಸೇರಿದಂತೆ ಅನೇಕ ವಿದ್ಯಾ ಸಂಸ್ಥೆಗಳು, ದೇವಸ್ಥಾನಗಳು, ಮಸೀದಿಗಳು, ಚರ್ಚ್ಗಳು ಇದ್ದು 20ಕ್ಕೂ ಅಧಿಕ ಶಾಲಾ ವಾಹನಗಳು, ಖಾಸಗಿ ಬಸ್ಸುಗಳು ಬೆಳಗ್ಗೆಯಿಂದ ಸಂಜೆವರೆಗೆ ಅನೇಕ ವಾಹನಗಳು ಓಡಾಡುತ್ತವೆ. ಉಡುಪಿ ಕಡೆಯಿಂದ, ಕುಂದಾಪುರ ಕಡೆಯಿಂದ ಬರುವ ಪ್ರಯಾಣಿಕರು ಇಲ್ಲಿಯೇ ಬಸ್ಸಿಳಿಯುತ್ತಾರೆ. ಕೋಡಿ ಶಿಕ್ಷಣ ಸಂಸ್ಥೆಗಳಲಿ ಸುಮಾರು 1 ಸಾವಿರ ವಿದ್ಯಾರ್ಥಿಗಳಿದ್ದಾರೆ. ಆದ್ದರಿಂದ ಇವರಿಗೆಲ್ಲ ಅನುಕೂಲವಾಗಲು ವಿನಾಯಕ ಥಿಯೇಟರ್ ಬಳಿಯೇ ಯು ಟರ್ನ್ ನೀಡಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿತ್ತು.
ಈ ವಿಭಾಗದಿಂದ ಇನ್ನಷ್ಟು
-
ಉಡುಪಿ: ಶ್ರೀಕೃಷ್ಣಮಠದಲ್ಲಿ ಮುಂದಿನ ಜ. 18ರಂದು ನಡೆಯುವ ಅದಮಾರು ಮಠ ಪರ್ಯಾಯ ಉತ್ಸವದ ಪೂರ್ವಭಾವಿಯಾದ ಭತ್ತದ (ಧಾನ್ಯ) ಮುಹೂರ್ತ ಶುಕ್ರವಾರ ಶ್ರೀಕೃಷ್ಣಮಠದ ಬಡಗುಮಾಳಿಗೆಯಲ್ಲಿ...
-
ಕುಂದಾಪುರ: ರಾಜ್ಯದ ನಿರ್ವಸಿತ ಮೀನುಗಾರರಿಗೆ ಆಶ್ರಯ ಕಲ್ಪಿಸುವ ಮತ್ಸ್ಯಾಶ್ರಯ ಯೋಜನೆಯನ್ನು ಮೀನುಗಾರರ ಬೇಡಿಕೆಯಂತೆ ರಾಜೀವ್ ಗಾಂಧಿ ವಸತಿ ನಿಗಮದ ಬದಲು ಮತ್ತೆ...
-
ಹೆಬ್ರಿ: ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಹಾಗೂ ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ಕಳೆದ 10 ತಿಂಗಳಿನಿಂದ ಸುಮಾರು 600 ಫಲಾನುಭವಿಗಳಿಗೆ ಮಾಸಾಶನ ಬಾರದೆ ಆತಂಕಕ್ಕೀಡಾಗಿದ್ದಾರೆ. ವೃದ್ಧಾಪ್ಯ,...
-
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ...
-
ಉಡುಪಿ: ಜಿಲ್ಲೆಯಲ್ಲಿ ಈ ಬಾರಿ ಸುರಿದ ಮಳೆಗೆ ಮುಂಗಾರು ಹಂಗಾಮಿನಲ್ಲಿ ಖಾರಿಫ್ನ ಭತ್ತದ ಇಳುವರಿಯೂ ಚೆನ್ನಾಗಿದೆ. ಅದೇ ಹುಮ್ಮಸ್ಸಿನಲ್ಲಿ ರೈತರು ಈಗ ಹಿಂಗಾರು ಹಂಗಾಮಿಗೆ...
ಹೊಸ ಸೇರ್ಪಡೆ
-
ಮುಂಬಯಿ, ಡಿ. 4: ಹೊರನಾಡ ಕನ್ನಡ ಸಂಘಟನೆಗಳಲ್ಲಿ ಹಿರಿಯರ ದಂಡೇ ಹೆಚ್ಚಾಗಿರುವಾಗ ಯುವಕ-ಯುವತಿಯರೇ ತುಂಬಿದ ಪಲವಾ ಕನ್ನಡಿಗರ ಸಂಘ ಯುವ ಪಡೆಯ ಕನ್ನಡಾಭಿಮಾನವನ್ನು...
-
ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 87 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ದುರಸ್ತಿಗಾಗಿ ಇದೇ ಪ್ರಥಮ ಬಾರಿಗೆ ಸರ್ಕಾರ 15 ಕೋಟಿ ರೂ....
-
ತೆಲಂಗಾಣ/ಹೈದರಾಬಾದ್: ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸ್ ವರಿಷ್ಠಾಧಿಕಾರಿ ವಿಶ್ವನಾಥ ಸಜ್ಜನರ್ ನೇತೃತ್ವದ...
-
ಚಿಕ್ಕನಾಯಕನಹಳ್ಳಿ: ತಾಲೂಕಿನ ಮಲ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಪಾಳ್ಯದ ಪ್ರಾಥಮಿಕ ಶಾಲೆಯ ಛಾವಣಿ ಹಾಗೂ ಕಂಬ ಕುಸಿದು ಬಿದ್ದಿದ್ದು, ಅದೃಷ್ಟವಶಾತ್...
-
ಚಿತ್ರದುರ್ಗ: ಹೆಣ್ಣುಮಗು ಬೇಡ ಎನ್ನುವ ಭಾವನೆ ಇಂದು ಲಿಂಗಾನುಪಾತದಲ್ಲಿ ವ್ಯತ್ಯಾಸವಾಗುವಂತೆ ಮಾಡಿದೆ. ಇದರಿಂದ ಇಂದು ವಧುವಿಗಾಗಿ ಹುಡುಕಾಡುವ ಸ್ಥಿತಿ ನಿರ್ಮಾಣವಾಗಿದೆ...