ನಗರದ ಕೊಳಚೆ ನೀರಿಗೆ ಬಲಿಯಾಯಿತೆ ನಿಟ್ಟೂರು ವಾರ್ಡ್‌?

ಡ್ರೈನೇಜ್‌ ಪೈಪ್‌ಲೈನ್‌ ಸೋರಿಕೆಗೆ ಬೇಸತ್ತ ಜನ

Team Udayavani, Dec 9, 2019, 5:23 AM IST

5250IMG-20191208-WA0053

ವಿಶೇಷ ವರದಿಉಡುಪಿ: ಅಸಮರ್ಪಕ ಚರಂಡಿ, ಹದಗೆಟ್ಟ ರಸ್ತೆ, ಅಲ್ಲಲ್ಲಿ ಕಾರಂಜಿಯಂತೆ ಉಕ್ಕಿ ಹರಿಯುತ್ತಿರುವ ಕೊಳಚೆ ನೀರಿನ ಮ್ಯಾನ್‌ಗಳು, ಕಿ.ಮೀ. ಒಂದರಂತೆ ಅಗೆದ ರಸ್ತೆ, ಬಾವಿಯಲ್ಲಿ ವರ್ಷ ಪೂರ್ತಿ ನೀರು ಇದ್ದರೂ ನಗರಸಭೆ ನೀರಿಗಾಗಿ ಕಾದು ಕುಳಿತುಕೊಳ್ಳಬೇಕಾದ ದೃಶ್ಯ ಕಂಡು ಬಂದಿರುವುದು ಉಡುಪಿ ನಗರ ಸಭೆಯ ನಿಟ್ಟೂರು ವಾರ್ಡ್‌ನಲ್ಲಿ.

ಡ್ರೈನೇಜ್‌ ಸಂಪರ್ಕ ಇಲ್ಲ!
ಕಳೆದ 10 ವರ್ಷಗಳಿಂದ ಉಡುಪಿ ನಗರದಲ್ಲಿ ಜನಸಂಖ್ಯೆ ಹೆಚ್ಚಳವಾಗಿದೆ. ನಿಟ್ಟೂರು ವಾರ್ಡ್‌ನಲ್ಲಿ ಸಹ ವಾಣಿಜ್ಯ ಮಳಿಗೆ, ಸೇರಿದಂತೆ ಹತ್ತಾರು ಕಟ್ಟಡಗಳು ತಲೆ ಎತ್ತಿ ನಿಂತಿವೆ. ಆದರೆ ಹೊಸದಾಗಿ ನಿರ್ಮಾಣವಾದ ಶೇ. 50 ರಷ್ಟು ಕಟ್ಟಡಗಳು ನಗರಸಭೆಯಿಂದ ಡ್ರೈನೇಜ್‌ ಸಂಪರ್ಕ ಪಡೆಯದ ಹಿನ್ನೆಲೆಯಲ್ಲಿ ಮಳೆ ನೀರಿನ ಚರಂಡಿಗಳಿಗೆ ಮನೆ ಹಾಗೂ ಹೊಟೇಲ್‌ಗ‌ಳ ಕೊಳಚೆ ನೀರು ಹರಿ ಬಿಡಲಾಗುತ್ತಿದೆ. ಈ ಡ್ರೈನೇಜ್‌ ನೀರು ಬಾವಿಗೆ ಸೇರುತ್ತಿರುವುದರಿಂದ ಹ‌ನುಮಂತ ನಗರದ ಸುಮಾರು 10ಕ್ಕೂ ಅಧಿಕ ಮನೆಗಳ ಬಾವಿ ಹಾಳಾಗಿವೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಅರಿವಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುವ ಆರೋಪಗಳಿವೆ.

ತೋಡಿಗೆ ಕೊಳಚೆ ನೀರು !
ಪ್ರಸ್ತುತ ನಗರಸಭೆ ಅಧಿಕಾರಿಗಳು ಮೂಡುತೋಟದ ಸಮೀಪದಲ್ಲಿ ಕೊಳಚೆ ನೀರಿನ ಚರಂಡಿಯನ್ನು ದುರಸ್ತಿಗೊಳಿಸುತ್ತಿದ್ದಾರೆ. ಇದರಿಂದಾಗಿ ಕಲ್ಸಂಕದ ವೆಟ್‌ವೆಲ್‌ನಿಂದ ಸಂಪೂರ್ಣ ಕೊಳಚೆ ನೀರು ನೇರವಾಗಿ ತೋಡಿಗೆ ಹರಿ ಬಿಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ತೋಡಿನ ಮೂಲಕ ಕೊಳಚೆ ನೀರು ಗುಂಡಿಬೈಲ್‌, ಬನ್ನಂಜೆ, ನಿಟ್ಟೂರು, ಕೊಡವೂರು ಮಾರ್ಗವಾಗಿ ಅರಬಿ ಸಮುದ್ರವನ್ನು ಸೇರುತ್ತಿದೆ.

ಕಾನೂನು ಉಲ್ಲಂಘನೆ
ಕೊಳಚೆ ನೀರನ್ನು ನೇರವಾಗಿ ಜಲ ಮೂಲಗಳಿಗೆ ಬಿಡಬಾರದು ಎನ್ನುವ ಕಾನೂನು ಇದೆ. ಆದರೂ ನಗರಸಭೆ ಅಧಿಕಾರಿಗಳು ಅದನ್ನು ಉಲ್ಲಂ ಸಿ ಕೊಳಚೆ ನೀರು ಜಲಮೂಲಕ್ಕೆ ಹರಿ ಬಿಡುತ್ತಿದ್ದಾರೆ. ಈ ಮಾರ್ಗವಾಗಿ ನೂರಾರು ಮನೆಗಳಲ್ಲಿ ಸಾವಿರಾರು ಜನರು ವಾಸವಾಗಿದ್ದಾರೆ. ಅವರೆಲ್ಲ ಈ ಕೊಳಚೆ ನೀರಿನ ಸಮಸ್ಯೆಯಿಂದಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಡ್ರೈನೇಜ್‌ ಒಡೆದು ಹೋಗುವ ಘಟನೆಗಳು ಮರುಕಳಿಸುತ್ತಿವೆ. ಈ ಸಮಸ್ಯೆಗೆ ನಗರಸಭೆ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡುವಲ್ಲಿ ವಿಫ‌ಲವಾಗಿದ್ದಾರೆ.

ಡ್ರೈನೇಜ್‌ ಸಂಪರ್ಕ ಸಿಕ್ಕಿಲ್ಲ
ನಿಟ್ಟೂರು ವಾರ್ಡ್‌ನಲ್ಲಿ ಕೆಲವು ವಾಣಿಜ್ಯ ಮಳಿಗೆ, ಮನೆಗಳಿಗೆ ಡ್ರೈನೇಜ್‌ ಸಂಪರ್ಕ ಸಿಕ್ಕಿಲ್ಲ. ಇದರಿಂದಾಗಿ ಆ ಮನೆಗಳ ನೀರು ಮಳೆ ನೀರಿನ ಚರಂಡಿಗೆ ಹರಿಯ ಬಿಡಲಾಗುತ್ತಿದೆ. ಇದರಿಂದಾಗಿ ಹನುಮಂತ ನಗರ ರಸ್ತೆಯ ಶೇ. 90ರಷ್ಟು ಬಾವಿಗಳ ನೀರು ಹಾಳಾಗಿದೆ.

ನೀರು ಬಳಸಲು ಹಿಂದೇಟು
ನಿಟ್ಟೂರು ವಾರ್ಡ್‌ನಲ್ಲಿ ಸುಮಾರು 30ರಿಂದ 40ರಷ್ಟು ಬಾವಿಗಳಲ್ಲಿ ವರ್ಷ ಪೂರ್ತಿ ನೀರಿದ್ದರೂ, ನಗರಸಭೆ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ. ಕೊಳಚೆ ನೀರು ಬಾವಿಗೆ ಸೇರುತ್ತಿರುವುದರಿಂದ ಬಾವಿ ನೀರು ಕಪ್ಪು ಹಾಗೂ ಹಳದಿ ಮಿಶ್ರಿತವಾಗಿದೆ. ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರಿಗೆ ಪೈಪೋಟಿ ನೀಡುವಷ್ಟು ಬಾವಿ ನೀರು ಹಾಳಾಗಿದೆ. ವರ್ಷಕ್ಕೊಮ್ಮೆ ಬಾವಿ ನೀರು ಖಾಲಿ ಮಾಡಿ ಔಷಧ ಸಿಂಪಡಿಸಿದರೂ ನೀರು ಬಳಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಈ ಸಮಸ್ಯೆ ಮತ್ತೆ ಮರುಕಳಿಸುತ್ತಿದೆ.

ಸಾಂಕ್ರಾಮಿಕ
ರೋಗಗಳು ಅಧಿಕ
ನಿಟ್ಟೂರು ವಾರ್ಡ್‌ನಲ್ಲಿ ವರ್ಷದಿಂದ ವರ್ಷಕ್ಕೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹನುಮಂತ ನಗರದ ನಿವಾಸಿಗಳು ಮಾರ್ಚ್‌ ನಿಂದ ಅಗಸ್ಟ್‌ ವರೆಗೆ ಮಲೇರಿಯಾ, ಡೆಂಗ್ಯೂ, ಜಾಂಡೀಸ್‌ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಮಳೆ ನೀರು ಚರಂಡಿ ಯಲ್ಲಿನ ಕೊಳಚೆ ನೀರು ಸಂಗ್ರಹದಿಂದ ಪರಿಸರ ದುರ್ನಾತ ದಿಂದ ಕೂಡಿದೆ. ಈ ಮಾರ್ಗವಾಗಿ ಜನರು ಸಂಚರಿಸಲು ಭಯಪಡುತ್ತಿದ್ದಾರೆ.

ಹಳೆಯದನ್ನು ದುರಸ್ತಿ
ಅಮೃತ್‌ ಯೋಜನೆಯಲ್ಲಿ 38 ಕೋ.ರೂ. ಉಳಿದಿದೆ. ಇದೀಗ ಹೊಸ ಯುಜಿಡಿ ಸಂಪರ್ಕ ಮಾಡಲು ಸಾಧ್ಯವಿಲ್ಲ. ಹಳೆಯದನ್ನು ದುರಸ್ತಿ ಮಾಡುವ ಯೋಜನೆ ಯಿದ್ದು, ತತ್‌ಕ್ಷಣ ಟೆಂಡರ್‌ ಕರೆದು ಕಾಮಗಾರಿ ಪ್ರಾರಂಭಿಸಲಾಗುತ್ತದೆ. -ಜಿ.ಜಗದೀಶ್‌, ಜಿಲ್ಲಾಧಿಕಾರಿ

ಡಿಸಿ ಗಮನಕ್ಕೆ
ನಿಟ್ಟೂರು ವಾರ್ಡ್‌ ಡ್ರೈನೇಜ್‌ ಸಮಸ್ಯೆಗೆ ಸಂಬಂಧಿಸಿದಂತೆ ಎಂಪಿ, ಎಂಎಲ್‌ಎ, ಪೌರಯುಕ್ತ, ಜಿಲ್ಲಾಧಿಕಾರಿ ಗಳಿಗೆ ದೂರು ಹಾಗೂ ಸಮಸ್ಯೆಯ ಬಗ್ಗೆ ಅವರ ಗಮನಕ್ಕೆ ತಂದಿದ್ದೇನೆ. ಡ್ರೈನೇಜ್‌ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ಮಾತ್ರ ಸಮಸ್ಯೆಯಿಂದ ಮುಕ್ತಿ ಸಿಗಲು ಸಾಧ್ಯ.
-ಸಂತೋಷ್‌, ನಿಟ್ಟೂರು ವಾರ್ಡ್‌
ನಗರಸಭೆ ಸದಸ್ಯ

ಡ್ರೈನೇಜ್‌ ಸಂಪರ್ಕ ಸಿಕ್ಕಿಲ್ಲ
ನಿಟ್ಟೂರು ವಾರ್ಡ್‌ನಿಂದ ಬನ್ನಂಜೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿನ ಮ್ಯಾನ್‌ ಹೋಲ್‌ಗ‌ಳು ಉಕ್ಕಿ ಹರಿಯುತ್ತಿದೆ. ಈ ಮಾರ್ಗವಾಗಿ ಸಂಚರಿಸಲು ಕಷ್ಟವಾಗುತ್ತಿದೆ. ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲಶೀಘ್ರ ಇದಕ್ಕೊಂದು ಪರಿಹಾರ ಕಲ್ಪಿಸುವ ಅಗತ್ಯವಿದೆ.
-ರುದ್ರಪ್ಪ

ಬಾವಿ ನೀರು ಸಂಪೂರ್ಣ ಹಾಳು
ಬಾವಿಯಲ್ಲಿ ನೀರಿದ್ದರೂ ಬಳಕೆ ಮಾಡಲು ಸಾಧ್ಯವಾಗು ತ್ತಿಲ್ಲ. ಮಳೆ ನೀರಿನ ಚರಂಡಿಗಳಲ್ಲಿ ಮನೆಗಳ ಕೊಳಚೆ ನೀರು ಹರಿಬಿಡ ಲಾಗುತ್ತಿದೆ. ಇದರಿಂದಾಗಿ ಬಾವಿ ನೀರು ಸಂಪೂರ್ಣವಾಗಿ ಹಾಳಾಗುತ್ತಿದೆ. ವರ್ಷಕ್ಕೊಮ್ಮೆ ನೀರು ಖಾಲಿ ಮಾಡಿ ಔಷಧ ಸಿಂಪಡಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
-ಈರಮ್ಮ

ಶಾಶ್ವತ ಪರಿಹಾರ ಯಾವಾಗ
ತಿಂಗಳಿಗೊಮ್ಮೆ ನಿಟ್ಟೂರು ಎಸ್‌ಟಿಪಿಗೆ ಹೋಗುವ ಪೈಪ್‌ಗ್ಳು ಒಡೆದು ಹೋಗುತ್ತಿರುವುದರಿಂದ ಅಡ್ಕದ ಕಟ್ಟೆ ಮಾರ್ಗವಾಗಿ ಬನ್ನಂಜೆ, ಗುಂಡಿಬೈಲು, ಉಡುಪಿ, ಕಲ್ಸಂಕ ಸಂಚರಿಸುವವರ ಸಂಖ್ಯೆ ಕಡಿಮೆಯಾಗಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿದಾಗ ಮಾತ್ರ ಸ್ಥಳೀಯರು ನೆಮ್ಮದಿಯಿಂದ ಇರಬಹುದಾಗಿದೆ.
-ಪ್ರಕಾಶ್‌

ನಾಗರಿಕ ಸಮಸ್ಯೆ ಇದ್ದರೆ ನಮಗೆ ತಿಳಿಸಿ
9148594259

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.