ಮಣಿಪಾಲ: ಫುಟ್ಪಾತ್ ವಾಹನಗಳ ತೆರವು
Team Udayavani, Jul 13, 2018, 6:00 AM IST
ಉಡುಪಿ: ಎಸ್ಪಿ ಪೋನ್-ಇನ್ ಕಾರ್ಯಕ್ರಮದಲ್ಲಿ ಕೇಳಿಬಂದ ಸಾರ್ವಜನಿಕರ ದೂರು, ಉದಯವಾಣಿ ಯಲ್ಲಿ ಪ್ರಕಟವಾದ ವಿಶೇಷ ವರದಿ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಮಣಿಪಾಲ ಟೈಗರ್ ಸರ್ಕಲ್ನಿಂದ ಎಂಐಟಿವರೆಗೆ ಮುಖ್ಯರಸ್ತೆಯ ಫುಟ್ಪಾತ್ ಮೇಲೆ ಪಾರ್ಕಿಂಗ್ ಮಾಡುವ ವಾಹನ ತೆರವುಗೊಳಿಸಲಾರಂಭಿಸಿದ್ದಾರೆ.
ಫುಟ್ಪಾತ್ನ ಉದ್ದಕ್ಕೂ ರಿಬ್ಬನ್ ಬ್ಯಾರಿಯರ್ ಅಳವಡಿಸಿ ವಾಹನಗಳು ಫುಟ್ಪಾತ್ ಮೇಲೇರದಂತೆ ತಡೆಯಲಾಗುತ್ತಿದೆ. ಒಂದು ವೇಳೆ ಫುಟ್ಪಾತ್ ಮೇಲೇರಿದರೂ ಕೂಡಲೇ ತೆರವುಗೊಳಿಸಲು ಸಿಬಂದಿ ನಿಯೋಜಿಸಲಾಗಿದೆ. ಸದ್ಯಕ್ಕೆ ಫುಟ್ಪಾತ್ ಒಂದಷ್ಟು ಮುಕ್ತವಾಗಿದೆ. ಆದರೆ ರಸ್ತೆ ಬದಿ ವಾಹನ ನಿಲುಗಡೆಗೆ ಮುಕ್ತಿ ದೊರೆಯ ಬೇಕಿದೆ. ಅಂತೆಯೇ ಇಲ್ಲಿನ ರಸ್ತೆಗಳ ಹೊಂಡಗಳನ್ನು ಕೂಡ ತುರ್ತಾಗಿ ಮುಚ್ಚಬೇಕು ಎಂಬುದು ಸಾರ್ವಜನಿಕರ ಒತ್ತಾಯ. ಪೋನ್ -ಇನ್ ಕಾರ್ಯಕ್ರಮದಲ್ಲಿ ಬಂದ ಕರೆಗಳಿಗೆ ಪ್ರತಿಕ್ರಿಯೆ ನೀಡಿದ್ದ ಎಸ್ಪಿ ಲಕ್ಷ್ಮಣ್ ನಿಂಬರಗಿ ಅವರು ಫುಟ್ಪಾತ್ ತೆರವುಗೊಳಿಸುವ ಮತ್ತು ಪೊಲೀಸ್ ಸಿಬಂದಿ ನಿಯೋಜಿಸುವ ಭರವಸೆ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು