ಪದವಿಗಳಿಂದ ಶಿಕ್ಷಿತರಲ್ಲ: ಮೃತ್ಯುಂಜಯ ಮಹಾಪಾತ್ರ


Team Udayavani, Jan 19, 2019, 12:30 AM IST

58.jpg

ಉಡುಪಿ: “ನಾವು ಶಿಕ್ಷಿತರು’ ಎಂದು ಪರಿಗಣಿಸಿಕೊಳ್ಳುವವರು ವಾಸ್ತವದಲ್ಲಿ ಶಿಕ್ಷಿತರಾಗಿರುವುದಿಲ್ಲ ಎಂದು ಸಿಂಡಿಕೇಟ್‌ ಬ್ಯಾಂಕ್‌ ಆಡಳಿತ ನಿರ್ದೇಶಕ ಮತ್ತು ಸಿಇಒ ಮೃತ್ಯುಂಜಯ ಮಹಾಪಾತ್ರ ವಿಶ್ಲೇಷಿಸಿದರು. ಮಣಿಪಾಲದ ಕೆಎಂಸಿ ಡಾ| ಟಿಎಂಎ ಪೈ ಸಭಾಭವನದಲ್ಲಿ ಟಿ.ಎ. ಪೈ ಮ್ಯಾನೇಮೆಂಟ್ ಇನ್‌ಸ್ಟಿಟ್ಯೂಟ್‌ ಮತ್ತು ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ವತಿಯಿಂದ ಶುಕ್ರವಾರ ಸ್ಥಾಪಕರ ದಿನಾಚರಣೆ ಮತ್ತು ಟಿ.ಎ. ಪೈ ಸ್ಮಾರಕ ಉಪನ್ಯಾಸ ವನ್ನು ಅವರು ನೀಡಿದರು. “ಬೀಯಿಂಗ್‌ ಆ್ಯಂಡ್‌ ಸ್ಟೇಯಿಂಗ್‌ ಎಜುಕೇಟೆಡ್‌ ಇನ್‌ ದಿ ಡಿಜಿಟಲ್‌ ಏಜ್‌’ ಅವರ ಉಪನ್ಯಾಸ ವಿಷಯವಾಗಿತ್ತು. 

ನಡವಳಿಕೆ, ಕ್ರಿಯಾಶೀಲತೆ, ಮನೋಪ್ರವೃತ್ತಿಯಿಂದ ನಾವು ಶಿಕ್ಷಿತರು ಎಂದು ಗುರುತಿಸಿಕೊಳ್ಳುತ್ತೇವೆ. ಪಡೆಯುವ ಶಿಕ್ಷಣ, ಸಂವಹನ, ನಿರಂತರ ಕಲಿಕೆ, ಪ್ರವಾಸ, ಇತಿಹಾಸದ ಗತಿಳನ್ನು ವೈಜ್ಞಾನಿಕ ವಿಮರ್ಶೆಯಿಂದ ಕಾಣುವುದು, ಉತ್ತಮ ಕೆಲಸಗಳಿಗೆ ತತ್‌ಕ್ಷಣವೇ ಮೆಚ್ಚುಗೆ ವ್ಯಕ್ತಪಡಿಸುವುದು, ವೈಜ್ಞಾನಿಕ ವಿಮರ್ಶಾ ಗುಣಗಳಿಂದ ವ್ಯಕ್ತಿ ಶಿಕ್ಷಿತ ಎನಿಸಿ ಕೊಳ್ಳುತ್ತಾನೆ. ಪರೀಕ್ಷೆ, ಪದವಿಗಳಿಂದ ಮಾತ್ರವೇ ಶಿಕ್ಷಿತರಾಗುವುದಿಲ್ಲ. ಮೌಲ್ಯ, ವ್ಯಕ್ತಿತ್ವ ಹಿಂದಿ ನಿಂದಲೂ ಶಿಕ್ಷಿತನಿಗಿರುವ ಅರ್ಹತೆಗಳಾಗಿವೆ. ಸಮೂಹ ನಿರ್ವಹಣೆ, ಇತರರನ್ನು ಗೌರವದಿಂದ ಕಾಣುವುದು, ವೈಚಾರಿಕ ಭೇದಗಳಿದ್ದರೂ ಅಂತಹ ಸಂದರ್ಭ ಗೌರವ ತೋರುವುದು, ವೈಯಕ್ತಿಕ ನೋವುಗಳಿಗೆ ಸ್ಪಂದಿಸುವ ಗುಣಗಳು ಶಿಕ್ಷಿತನನ್ನು ಮೌಲ್ಯವರ್ಧಿತನನ್ನಾಗಿಸುತ್ತದೆ ಎಂದರು. 

ಹಿಂದೆ ಶೋಧನೆಗಳು ಶೋಧನೆಗಳಿಗಾಗಿ ಇದ್ದರೆ ಈಗ ನಿರಂತರ ಅಭಿವೃದ್ಧಿಗಾಗಿ ನಡೆಯುತ್ತಿವೆ. ಪಾವತಿಸಿ ಬಳಸುವ ಪ್ರವೃತ್ತಿ ಈಗ ಬೆಳೆದಿದೆ. ಕಮ್ಯುನಿಕೇಶನ್‌ ನೆಟ್‌ವರ್ಕ್‌, ಕೌಡ್‌, ಡಾಟಾ ವಿಜ್ಞಾನ, ಬಿಗ್‌ ಡಾಟಾಗಳಿಂದ ಹೊರತಾಗಿರಲು ಸಾಧ್ಯವಿಲ್ಲ. ಕ್ರಿಯಾಶೀಲವಾಗಿ ಚಿಂತನೆ ನಡೆಸು ವುದು, ಉದ್ಯಮಶೀಲತೆ, ಸಮೂಹ ಕಾರ್ಯ, ನೈತಿಕ ಬದುಕು, ಅಂತರ್‌ಶಿಸ್ತೀಯ ಅಧ್ಯಯನಗಳ ವಿಷಯಗಳಲ್ಲಿ ಕೌಶಲ, ಇತ್ತೀಚಿನ ಬೆಳವಣಿಗೆಗಳ ಅರಿವು, ಆಳವಾದ ತಾಂತ್ರಿಕ ಜ್ಞಾನವನ್ನು ಸಂಪಾದಿಸಬೇಕಾಗುತ್ತದೆ. ಈಗ ಬಹುಮುಖಗಳ ಒತ್ತಡವನ್ನು ನಿರ್ವಹಿಸಬೇಕಾಗುತ್ತದೆ ಎಂದು ಮಹಾಪಾತ್ರ ಹೇಳಿದರು. 

ಟಿ.ಎ. ಪೈಯವರು ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿ ಬಳಿಕ ಬಹು ಎತ್ತರಕ್ಕೇರಿದ ಬಗೆಯನ್ನು ವಿಶ್ಲೇಷಿಸಿದ ಮಹಾಪಾತ್ರ, ಸಾಮಾನ್ಯವಾಗಿ ಅಸಾಧಾರಣ ಶಕ್ತಿ ಹೊಂದಿರುವವರು ಅಲ್ಪಾಯುಗಳಾಗಿರುತ್ತಾರಂತೆ. ನನಗೂ ಅವರು ಬದುಕಿದಷ್ಟೇ ವಯಸಾಗಿದೆಯಾದರೂ ಅವರ ಶಕ್ತಿಯ ಎದುರು ನಾನೇನೂ ಅಲ್ಲ ಎಂದರು. ಟ್ಯಾಪ್ಮಿ ನಿರ್ದೇಶಕ ಪ್ರೊ| ಮಧು ವೀರರಾಘವನ್‌ ಸ್ವಾಗತಿಸಿದರು. ಮಣಿಪಾಲ ಮಾಹೆ ವಿವಿ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಉಪಸ್ಥಿತರಿದ್ದರು. 

ಯಾರು ಅಶಿಕ್ಷಿತರು?
ಕೆಲಸದಲ್ಲಿ ಬದ್ಧತೆ ಇಲ್ಲದಿರುವವರು, ಪ್ರಾಕ್ಟಿಕಲ್‌ ಆಗಿರದೆ ಬದುಕುವವರು, ಕೆಟ್ಟ ಸುದ್ದಿಗಳು- ಗಾಸಿಪ್‌ಗ್ಳನ್ನು ಹರಡುವವರು, ಶಿಸ್ತುಬದ್ಧ ಜೀವನ ನಡೆಸದವರು, ಖಾಸಗಿ ತನಕ್ಕೆ ಗೌರವ ನೀಡದಿರುವವರು, ಕೃತಿ ಚೋರರು, ತಪ್ಪುಗಳನ್ನು-ಆರೋಪಗಳನ್ನು ಇತರರ ಮೇಲೆ ವರ್ಗಾಯಿಸುವವರು, ಬಡಾಯಿಗಾರರು ಅಶಿಕ್ಷಿತರು ಎಂದು ಮೃತ್ಯುಂಜಯ ಮಹಾಪಾತ್ರ ಬಣ್ಣಿಸಿದರು. 

ಊಟಕ್ಕಿಂತ  ಜೀರ್ಣಶಕ್ತಿ ಮುಖ್ಯ
ಎಷ್ಟು ಊಟ ಮಾಡುತ್ತೇವೆಂಬುದಕ್ಕಿಂತ ಎಷ್ಟು ಜೀರ್ಣಶಕ್ತಿ ಇದೆ ಎಂಬುದನ್ನು ನೋಡಬೇಕು. ಓದಿದರೆ ಸಾಲದು, ನೆನಪಿನಲ್ಲಿ ಇರಿಸಿಕೊಳ್ಳಬೇಕು. ಎಷ್ಟು ಓದಿದ್ದೇನೆ ಎನ್ನುವುದಕ್ಕಿಂತ ಅದರಿಂದ ಎಷ್ಟು ಕಲಿತಿದ್ದೇನೆ ಎನ್ನುವುದು ಮುಖ್ಯ. ಆತ್ಮಾವಲೋಕನ ಪ್ರಮುಖ ಎಂದು ಮಹಾಪಾತ್ರ ಹೇಳಿದರು.  

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.