ನರ್ಮ್ ಬಸ್; ಆದೇಶ ತೆರವಿಗೆ ಕಾರ್ಯತಂತ್ರ: ಪ್ರಮೋದ್
Team Udayavani, Jul 9, 2017, 3:45 AM IST
ಉಡುಪಿ: ಉಡುಪಿಗೆ ಮಂಜೂರಾದ 55 ಜೆನರ್ಮ್ ಬಸ್ಸುಗಳ ಪೈಕಿ 30 ಬಸ್ ಕಾರ್ಯನಿರ್ವಹಿಸುತ್ತಲಿದೆ. ಖಾಸಗಿ ಬಸ್ಸು ಮಾಲಕರ ಸಂಘದವರು ಹೈಕೋರ್ಟಿನ ಏಕಸದಸ್ಯ ಪೀಠದಿಂದ ಪರ್ಮಿಟ್ ಸಸ್ಪೆಂಡ್ ಮಾಡಿಸಿದ ಆದೇಶ ತಂದಿದ್ದಾರೆ. ಆ ಆದೇಶ ತೆರವಿಗೆ ಕಾರ್ಯತಂತ್ರವನ್ನು ಮಾಡಿದ್ದೇವೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಶನಿವಾರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದ ಬಳಿಕ ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದೇವೆ. ಸರಕಾರದ ಪರ ಖ್ಯಾತ ವಕೀಲ ಹಾರನಹಳ್ಳಿ ಅಶೋಕ್ ಅವರನ್ನು ನೇಮಕ ಮಾಡಲಾಗಿದೆ. ಉಡುಪಿ ನಗರದೊಳಗೆ ಸಂಚರಿಸುತ್ತಿರುವ 12 ಜೆನರ್ಮ್ ಸಿಟಿ ಬಸ್ಸುಗಳಿಗೆ ಆ ಆದೇಶ ಅನ್ವಯಿಸುವುದಿಲ್ಲ. ಉಳಿದಂತೆ ತಾತ್ಕಾಲಿಕ ಪರವಾನಿಗೆಯ ಮೂಲಕ ಸರಕಾರಿ ಬಸ್ಸುಗಳು ಕಾರ್ಯಾಚರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಖಾಸಗಿ ರೂಲ್ಸ್ ಬ್ರೇಕ್ಗೆ ಕ್ರಮ
ಖಾಸಗಿ ಬಸ್ಸಿನವರು ನಿಯಮಗಳನ್ನು ಉಲ್ಲಂ ಸಿ ಏನೆಲ್ಲ ಕಾರ್ಯ ಮಾಡುತ್ತಿದ್ದಾರೆ ಅದನ್ನು ಪತ್ತೆ ಮಾಡಿ ದಂಡ ವಿಧಿಸಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಾರ್ಯಾಚರಣೆಗೆ ವಾರ ಸಾಕಾಗೋದಿಲ್ಲ, ಬದಲಾಗಿ ಮಾಸಾಚರಣೆಯನ್ನೇ ನಡೆಸಬೇಕು ಎಂದು ಹೇಳಿದ್ದೇನೆ ಎಂದರು.
ಮರಳು ಸಮಸ್ಯೆ ಬಗೆಹರಿಯಲಿದೆ
ಮರಳುಗಾರಿಕೆಗೆ ಸಂಬಂಧಿಸಿ ಸಿಆರ್ಝೆಡ್ನಲ್ಲಿ ಮುಂದಕ್ಕೆ ಹೊಸ ಪರ್ಮಿಟ್ ಕೊಡುವಾಗ ಕಾನೂನು ಪ್ರಕಾರ ನಿಯಮಾವಳಿ ಪಾಲಿಸುತ್ತೇವೆ. ಜಿಲ್ಲೆಯ ಮರಳು ಹೊರಜಿಲ್ಲೆಗೆ ಸಾಗಾಟವಾಗದಂತೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಆ. 1ರಿಂದ ಮರಳಿನ ಸಮಸ್ಯೆ ಬಗೆಹರಿಯಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ