ತೀರ ಸೇರುತ್ತಿರುವ ತೈಲ ಜಿಡ್ಡು : ಪ್ರಯೋಗಾಲಯಕ್ಕೆ ಮಾದರಿ ರವಾನೆ
Team Udayavani, May 28, 2019, 6:13 AM IST
ಕಾಪು: ಉಡುಪಿ ಭಾಗದಲ್ಲಿ ಸಮುದ್ರ ತೀರದಲ್ಲಿ ಕಂಡುಬಂದಿರುವ ತೈಲ ಜಿಡ್ಡಿನ ಉಂಡೆಗಳ ಮೂಲ ಪತ್ತೆಗಾಗಿ ಮಾದರಿಯನ್ನು ಮಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿಯ ಪ್ರಯೋಗಾ ಲಯಕ್ಕೆ ರವಾನಿಸಲಾಗುವುದು ಎಂದು ಸಹಾಯಕ ಪರಿಸರ ಅಧಿಕಾರಿ ಪ್ರಮೀಳಾ ಹೇಳಿದರು.
ಸೋಮವಾರ ಮೂಳೂರು ಬೀಚ್ಗೆಭೇಟಿ ನೀಡಿ ತೀರದಲ್ಲಿ ಶೇಖರಣೆ ಗೊಂಡಿರುವ ತೈಲ ಜಿಡ್ಡನ್ನು ಪರಿಶೀಲಿ ಸಿದ ಬಳಿಕ ಅವರು ಮಾಧ್ಯಮದ ಜತೆ ಮಾತನಾಡಿದರು.
ಕಾಪು ಲೈಟ್ ಹೌಸ್ ಸುತ್ತ ಮುತ್ತ ಸಹಿತ ಮೂಳೂರು, ಉಚ್ಚಿಲ, ಎರ್ಮಾಳು, ಪಡುಬಿದ್ರಿ, ಕೈಪುಂಜಾಲು, ಮಟ್ಟು, ಉದ್ಯಾವರ ಬೀಚ್ನಲ್ಲಿ ತೈಲದ ಜಿಡ್ಡು ಸಮುದ್ರ ತೀರವನ್ನು ಸೇರುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಅವರು ಸಮದ್ರ ತೀರಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಪಣಂಬೂರು ಮತ್ತು ಸುರತ್ಕಲ್ ಬೀಚ್ಗಳಲ್ಲಿ ಕಾಣಿಸಿಕೊಂಡಿದ್ದ ಡಾಮರುತೈಲದ ಜಿಡ್ಡು ಉಡುಪಿ ಜಿಲ್ಲೆಯ ಕರಾವಳಿ ತೀರದಲ್ಲೂ ಕಾಣಿಸಿಕೊಂಡಿದೆ. ಇದನ್ನು ನಿರ್ಲಕ್ಷಿಸುವಂತಿಲ್ಲ. ಇದರಿಂದ ಸಮುದ್ರದಲ್ಲಿರುವ ಜಲಚರಗಳಿಗೆ, ಸಮುದ್ರ ತೀರದ ಜನರಿಗೆ, ಪ್ರವಾಸಿಗರಿಗೆ ಅಥವಾ ಪರಿಸರಕ್ಕೆ ಯಾವುದೇ ರೀತಿಯ ಹಾನಿ ಇದೆಯೇ ಎನ್ನುವುದನ್ನು ತಿಳಿಯುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಕಾರಣವೇನಿರಬಹುದು?
ಸಮುದ್ರ ತೀರದಲ್ಲಿ ತೈಲ ಜಿಡ್ಡು ಕಂಡುಬಂದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಇದು ಮೇಲ್ನೋಟಕ್ಕೆ ಕ್ರೂಡ್ ಆಯಿಲ್ಗೆಸಂಬಂಧಿತ ಜಿಡ್ಡಿನಂತೆ ಕಂಡು ಬರುತ್ತಿದೆ. ಆದರೆ ಇದರ ಮೂಲವನ್ನು ಪತ್ತೆಹಚ್ಚುವ ಅಗತ್ಯವಿದೆ ಎಂದರು.
ತೈಲ ಜಿಡ್ಡಿನಂಶ ತೆರವಿಗೆ ಸೂಕ್ತ ಕ್ರಮ
ಕಾಪು ತಹಶೀಲ್ದಾರ್ ರಶ್ಮಿ ಮಾತನಾಡಿ, ಶೇಖರಗೊಂಡಿರುವ ಜಿಡ್ಡಿನಂಶವನ್ನು ತೆಗೆಯಲು ತಾಲೂಕು ಆಡಳಿತ ಕ್ರಮ ತೆಗೆದುಕೊಳ್ಳಲಿದೆ. ಮಲ್ಪೆಯಲ್ಲಿ ತೈಲ ಅಂಶ ಪತ್ತೆ ಯಂತ್ರಕ್ಕೆ ಬೇಡಿಕೆ ಇರಿಸಲಾಗಿದೆ. ಅದು ಆಗದಿದ್ದರೆ ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ಜಿಡ್ಡಿನಂಶ ತೆರವುಗೊಳಿಸಲಾಗುವುದು ಎಂದರು.
ಕಾಪು ತಾಲೂಕು ಕಂದಾಯ ಪರಿವೀಕ್ಷಕ ಕೆ. ರವಿಶಂಕರ್, ಗ್ರಾಮ ಕರಣಿಕ ಗಣೇಶ್ ಉಪಸ್ಥಿತರಿದ್ದರು.
ಪರಿಸರ ಅಧಿಕಾರಿ, ತಹಶೀಲ್ದಾರ್ ಭೇಟಿ; ಪರಿಶೀಲನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ