ಉನ್ನತ ಶಿಕ್ಷಣವೆಂಬ ಅವಕಾಶಗಳ ಹೆಬ್ಟಾಗಿಲು ತೆರೆಯಲಿ


Team Udayavani, Mar 8, 2018, 6:00 AM IST

0603kde1B.jpg

ಶಿಕ್ಷಣಕ್ಕೂ ಊರಿನ ಅಭಿವೃದ್ಧಿಗೂ ಅವಿನಾಭಾವ ಸಂಬಂಧವಿದೆ. ಎಷ್ಟೋ ಬಾರಿ ನಾವು ಶಿಕ್ಷಣವೆಂದರೆ ಬರೀ ಬೌದ್ಧಿಕತೆಯ ವಿಸ್ತಾರ ಎಂದುಕೊಳ್ಳುತ್ತೇವೆ. ಆದರೆ ಅದರಿಂದಲೂ ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿನ ಆರ್ಥಿಕತೆಗೆ ಬೆನ್ನೆಲುಬು ಎನ್ನುವುದನ್ನು ನಮ್ಮ ಜನಪ್ರತಿನಿಧಿಗಳು ಅರಿಯುವ ಕ್ಷಣವಿದು. ಆಗ ಕುಂದಾಪುರ ಮತ್ತಷ್ಟು ಎತ್ತರಕ್ಕೆ ಏರೀತು.

ಕುಂದಾಪುರ: ತಾಲೂಕಿನ ಒಟ್ಟೂ ಚಿತ್ರಣ ಈಗಾಗಲೇ ಹೇಳಿದಂತೆ ನಗರ, ಗ್ರಾಮೀಣ ಹಾಗೂ ಅರೆ ಗ್ರಾಮೀಣ. ಹಾಗಾಗಿ ಶಿಕ್ಷಣದ ಮಹತ್ವ ಇಲ್ಲಿ ಉಳಿದೆಲ್ಲದಕ್ಕಿಂತ ಮಹತ್ವದ್ದು. ಹಾಗೆಯೇ ಶೈಕ್ಷಣಿಕ ಸ್ಥಿತಿಗತಿಯೂ ಕೊಂಚ ವಿಭಿನ್ನ.  ಉಡುಪಿ ಜಿಲ್ಲೆ ಸಾಕ್ಷರತೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಆದರೆ ಜಿಲ್ಲೆಗೆ ಹೋಲಿಸಿದರೆ ಕುಂದಾಪುರ ತಾಲೂಕಿನ ಸಾಕ್ಷರತೆಯ ಪ್ರಮಾಣ ಇನ್ನಷ್ಟು ಏರಬೇಕಿದೆ. ಇದು ಬರೀ ಹಂಬಲವಷ್ಟೇ ಅಲ್ಲ ; ಗುರಿಯಾಗುವ ಹೊತ್ತಿದು. ಪ್ರಸ್ತುತ ತಾಲೂಕಿನಲ್ಲಿ ಎರಡು ಸರಕಾರಿ ಪದವಿ ಕಾಲೇಜುಗಳಿವೆ. ಎಂಕಾಂ ಹೊರತುಪಡಿಸಿದರೆ ಬೇರೆ ಯಾವುದೇ ಸ್ನಾತಕೋತ್ತರ ಕೋರ್ಸ್‌ಗಳಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಕಾಲೇಜುಗಳು, ಕೋರ್ಸ್‌ ಗಳು ಲಭ್ಯವಾಗಬೇಕಿದೆ.

ತಾಲೂಕುವಾರು ನೋಡಿದರೆ ಉಡುಪಿ ಶೇ. 89.3ರಷ್ಟು ಸಾಕ್ಷರತೆ ಹೊಂದಿದ್ದರೆ, ಕಾರ್ಕಳದಲ್ಲಿ ಶೇ. 86.7ರಷ್ಟಿದೆ. ಕುಂದಾಪುರ ಶೇ. 81.6ರಷ್ಟು ಸಾಕ್ಷರರಿದ್ದಾರೆ. ಜಿಲ್ಲೆಯ ಒಟ್ಟು ಸಾಕ್ಷರತೆಯ ಪ್ರಮಾಣ ಶೇ. 86.24. ಲಿಂಗಾಧಾರಿತ ಸಾಕ್ಷರತೆ ಪ್ರಮಾಣದಲ್ಲೂ ಕುಂದಾಪುರ ಪ್ರಗತಿ ಸಾಧಿಸಬೇಕು. 

ಜಿಲ್ಲೆಯಲ್ಲೇ ಅತೀ ಹೆಚ್ಚಿನ ಪ್ರಾಥಮಿಕ ಶಾಲೆಗಳನ್ನು ಹೊಂದಿದೆ ಎನ್ನುವ ಹೆಗ್ಗಳಿಕೆ ಕುಂದಾಪುರ ತಾಲೂಕಿನದ್ದು. ಇಲ್ಲಿ ಪ್ರತಿ ಸಾವಿರ ವಿದ್ಯಾರ್ಥಿಗಳಿಗೆ 8 ಶಾಲೆಗಳಿವೆ. ಕುಂದಾಪುರದಲ್ಲಿ 52 ಕಿರಿಯ, 76 ಹಿರಿಯ ಒಟ್ಟು 128 ಸರಕಾರಿ ಶಾಲೆಗಳು, 25 ಅನುದಾನಿತ ಖಾಸಗಿ, 22 ಅನುದಾನ ರಹಿತ ಖಾಸಗಿ, ಒಟ್ಟು 175 ಪ್ರಾಥಮಿಕ ಶಾಲೆಗಳಿವೆ. 20 ಸರಕಾರಿ, 18 ಅನುದಾನಿತ, 7 ಅನುದಾನ ರಹಿತ ಖಾಸಗಿ ಸೇರಿದಂತೆ ಒಟ್ಟು 45 ಪ್ರೌಢಶಾಲೆಗಳಿವೆ. 

ಸೌಕರ್ಯಗಳು ಬೇಕು
ಕುಂದಾಪುರದ 22 ಕಿರಿಯ ಪ್ರಾ. ಶಾಲೆಗಳು, 28 ಹಿ.ಪ್ರಾ. ಶಾಲೆಗಳಲ್ಲಿ ಅಡುಗೆ ಕೋಣೆ, ಹಲವು ಶಾಲೆಗಳಲ್ಲಿ ಆಟದ ಮೈದಾನ, ಆವರಣ ಗೋಡೆ, ವಿದ್ಯುತ್‌ ಸೌಕರ್ಯ, ಗ್ರಂಥಾಲಯ, ಸ್ವಂತ ನೀರಿನ ಸೌಲಭ್ಯ ಕಲ್ಪಿಸಬೇಕಿದೆ. ಶೇ. 90 ರಷ್ಟು ಶಿಕ್ಷಕರಿದ್ದಾರೆ. ಹಿರಿಯ ಪ್ರಾಥಮಿಕ  15 ಹಾಗೂ  ಪ್ರೌಢಶಾಲೆಗಳಿಗೆ 3 ಮುಖ್ಯ ಶಿಕ್ಷಕರು ಬೇಕಾಗಿದ್ದಾರೆ. ಶೌಚಾಲಯ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಲಭ್ಯವಾದರೆ ಅನುಕೂಲ.

ಜಿಲ್ಲೆಯಲ್ಲಿ 3 ವೈದ್ಯಕೀಯ ಕಾಲೇಜು ಗಳಿದ್ದರೂ ಕುಂದಾಪುರದಲ್ಲಿಲ್ಲವೆಂಬ ಕೊರಗಿದೆ. ಕೋಟೇಶ್ವರ ಹಾಗೂ ಶಂಕರನಾರಾಯಣದಲ್ಲಿ ಎರಡು ಸರಕಾರಿ ಪದವಿ ಕಾಲೇಜುಗಳಿವೆ. ಕುಂದಾಪುರದ ಎಂಐಟಿ ಎಂಜಿನಿಯರಿಂಗ್‌ ಹಾಗೂ ಕಾಮತ್‌ ಇನ್‌ಸ್ಟಿÕಟ್ಯೂಟ್‌ ಡಿಪ್ಲೊಮಾ ಕಾಲೇಜುಗಳಿವೆ.  

ಕೋರ್ಸ್‌ಗಳ ಆಯ್ಕೆ ಬೇಕು”
ತಾಲೂಕಿನಲ್ಲಿರುವ ಎರಡು ಸರಕಾರಿ ಪದವಿ ಕಾಲೇಜುಗಳಲ್ಲಿ ಎಂಕಾಂ ಬಿಟ್ಟರೆ ಬೇರೆ ಕೋರ್ಸ್‌ಗಳಿಲ್ಲ. ಎಂಸ್ಸಿ, ಎಂಎ, ಎಂಎಸ್‌ಡಬ್ಲೂÂ ಕೋರ್ಸ್‌ಗಳಿಗಾಗಿ ಸಿದ್ದಾಪುರ, ಶಂಕರನಾರಾಯಣ ಭಾಗದ ಸುಮಾರು 19 ವಿದ್ಯಾರ್ಥಿಗಳು ಬಾಕೂìರು ಕಾಲೇಜಿಗೆ ಹೋಗುತ್ತಾರೆ. ಶಂಕರನಾರಾಯಣದ ಪದವಿ ಕಾಲೇಜಿನಲ್ಲಿ ಬಿಸಿಎ, ಬಿಎಸ್ಸಿ ಕೋರ್ಸ್‌ಗಳಿಲ್ಲ. ಅನೇಕ  ವಿದ್ಯಾರ್ಥಿಗಳು ಕುಂದಾಪುರ ಅಥವಾ ಉಡುಪಿಗೆ ತೆರಳುತ್ತಿದ್ದಾರೆ. ಎರಡೂ ಸರಕಾರಿ ಪದವಿ ಕಾಲೇಜುಗಳಲ್ಲೂ ಕಟ್ಟಡ, ತರಗತಿ ಕೋಣೆ, ಉಪನ್ಯಾಸಕರು ಬೇಕು.ವಿಶಾಲವಾದ ಮೈದಾನ ಮತ್ತು ಪ್ರತ್ಯೇಕ ಗ್ರಂಥಾಲಯಗಳದ ಬೇಡಿಕೆಯೂ ಇದೆ. 

ಆಗಬೇಕಾದದ್ದಿವು
ಕುಂದಾಪುರದಲ್ಲೂ ಸರಕಾರಿ ಎಂಜಿನಿಯರಿಂಗ್‌ ಕಾಲೇಜು, ವೈದ್ಯಕೀಯ ಕಾಲೇಜು ಆರಂಭವಾದರೆ ಹಲವರು ಪರವೂರಿಗೆ ತೆರಳುವುದು ತಪ್ಪುತ್ತದೆ. ಐಟಿಐ ಕಾಲೇಜು ಕುಂದಾಪುರದಿಂದ 20 ಕಿ.ಮೀ. ದೂರದ ಬಿದ್ಕಲ್‌ಕಟ್ಟೆಯಲ್ಲಿ ಮಾತ್ರವಿದೆ. ಕುಂದಾಪುರ ಪರಿಸರದಲ್ಲೊಂದು ಐಟಿಐ ಕಾಲೇಜು ನಿರ್ಮಾಣವಾಗಬೇಕಿದೆ. 

ಪದವಿ, ಪ.ಪೂ. ಸರಕಾರಿ, ಖಾಸಗಿ ಕಾಲೇಜುಗಳು
– ಕೋಟೇಶ್ವರ ಪ್ರಥಮ ದರ್ಜೆ ಕಾಲೇಜು
–  ಶಂಕರನಾರಾಯಣ ಪ್ರಥಮ ದರ್ಜೆ ಕಾಲೇಜು
– ಭಂಡಾರ್‌ಕಾರ್ ಕಾಲೇಜು
–  ಡಾ| ಬಿ.ಬಿ. ಹೆಗ್ಡೆ ಕಾಲೇಜು
–  ಬಸೂÅರು ಶಾರದಾ ಕಾಲೇಜು

ಪದವಿಪೂರ್ವ ಕಾಲೇಜುಗಳು
–  ಕೋಟೇಶ್ವರ ಪ.ಪೂ.
– ತೆಕ್ಕಟ್ಟೆ ಪ.ಪೂ.
– ಕುಂದಾಪುರ ಪ.ಪೂ.
– ಬಿದ್ಕಲ್‌ಕಟ್ಟೆ ಪ.ಪೂ.
– ಶಂಕರನಾರಾಯಣ ಪ.ಪೂ.
– ಹೊಸಂಗಡಿ ಪ.ಪೂ.
– ಹಾಲಾಡಿ ಪ.ಪೂ.
– ಭಂಡಾರ್‌ಕಾರ್ 
– ಆರ್‌. ಎನ್‌. ಶೆಟ್ಟಿ
– ಬ್ಯಾರೀಸ್‌ ಕೋಡಿ
– ಸಂತ ಮೇರಿ ಪ.ಪೂ.
– ಬಸೂÅರು ಶಾರದಾ
– ಮದರ್‌ ತೆರೆಸಾ ಶಂಕರನಾರಾಯಣ
– ವೆಂಕಟರಮಣ ಕುಂದಾಪುರ
– ಗುರುಕುಲ ಕೋಟೇಶ್ವರ
– ಎಕ್ಸಲೆಂಟ್‌ ಕೋಟೇಶ್ವರ 

ಪ್ರಗತಿಗೆ  ಸಲಹೆ ನೀಡಿ
“ಪ್ರಗತಿ ಪಥ’ ನಮ್ಮ ಊರಿನ ಪ್ರಗತಿಯ ಗತಿ ಗುರುತಿಸುತ್ತಿರುವ ಪ್ರಯತ್ನ. ಕುಂದಾಪುರ ತಾಲೂಕು ಪ್ರಗತಿ ಕುರಿತು ಸಲಹೆಗಳಿದ್ದರೆ ನಮ್ಮ ವಾಟ್ಸಾಪ್‌ ನಂಬರ್‌ 91485 94259 ಕಳಿಸಿ. ಸೂಕ್ತವಾದುದನ್ನು ಪ್ರಕಟಿಸುತ್ತೇವೆ. ನಿಮ್ಮ ಹೆಸರು, ಊರು ಹಾಗೂ ಭಾವಚಿತ್ರವಿರಲಿ.

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.