“ನರ್ಮ್ಗೆ ವಿರೋಧ: ಎಲ್ಲ ರಸ್ತೆಗಳು ರಾಷ್ಟ್ರೀಕರಣಗೊಳ್ಳಲಿ’
Team Udayavani, Jul 14, 2017, 2:45 AM IST
ಉಡುಪಿ: ಜನೋಪಯೋಗಿ ನರ್ಮ್ ಬಸ್ಗಳನ್ನು ಖಾಸಗಿ ಬಸ್ ಮಾಲಕರು ವಿರೋಧಿಸುತ್ತಾರೆಂದರೆ ಉಡುಪಿಯಲ್ಲಿ ಖಾಸಗಿ ಬಸ್ಗಳು ಕೂಡ ಯಾಕೆ ಬೇಕು? ಅದಕ್ಕಾಗಿ ಜಿಲ್ಲೆಯ ಎಲ್ಲ ರಸ್ತೆಗಳನ್ನು ರಾಷ್ಟ್ರೀಕರಣಗೊಳಿಸಿ ಸರಕಾರಿ ಬಸ್ಗಳನ್ನು ಮಾತ್ರ ಓಡಿಸಲಿ ಎಂದು ಉಡುಪಿ ರೈಲ್ವೆ ಯಾತ್ರಿಕರ ಸಂಘದ ಅಧ್ಯಕ್ಷ ಆರ್.ಎಲ್. ಡಯಾಸ್ ಆಗ್ರಹಿಸಿದ್ದಾರೆ.
ನರ್ಮ್ ಬಸ್ಗಳ ವಿನ್ಯಾಸ ಎಲ್ಲ ವರ್ಗದ ಪ್ರಯಾಣಿಕರನ್ನು ಗಮನದಲ್ಲಿಟ್ಟು ರಚಿಸಲಾಗಿದ್ದು, ಮೆಟ್ಟಿಲು ಕೆಳಸ್ತರದಲ್ಲಿದ್ದು ಹಿರಿಯರು, ಮಹಿಳೆಯರು, ಅಂಗವಿಕಲರಿಗೆ ನೆರವಾಗಿದೆ. ಕೆಲವೆಡೆ ಖಾಸಗಿ ಬಸ್ಸಿನವರು ಒಂದು ಮಾರ್ಗದಲ್ಲಿ 4-5 ಬಾರಿ ಓಡಾಟದ ಪರವಾನಿಗೆಯಿದ್ದರೂ ಸಹ ಬೆಳಗ್ಗೆ ಹಾಗೂ ಸಂಜೆ ಮಾತ್ರ ಬಸ್ ಓಡಿಸುತ್ತಾರೆ. ಇದರಿಂದ ಜನರಿಗೆ ತೊಂದರೆಗಳಾಗುತ್ತಿದ್ದು, ನರ್ಮ್ ಬಸ್ಗಳ ಸಂಚಾರಕ್ಕೆ ಧಕ್ಕೆಯಾದರೆ ರೈಲ್ವೆ ಯಾತ್ರಿಕರ ಸಂಘ ಉಗ್ರ ಹೋರಾಟ ಸಂಘಟಿಸಲಿದೆ ಎಂದರು.
ಅಪರ ಜಿಲ್ಲಾಧಿಕಾರಿಗೆ ಮನವಿ
ನರ್ಮ್ ಬಸ್ಗಳ ಓಡಾಟಕ್ಕೆ ಖಾಸಗಿ ಬಸ್ ಮಾಲಕರ ಸಂಘ ಹೈಕೋರ್ಟ್ನಿಂದ ತಡೆಯೊಡ್ಡಿರುವುದನ್ನು ಖಂಡಿಸಿ ಹಾಗೂ ನರ್ಮ್ ಬಸ್ ಸಂಚಾರಕ್ಕೆ ಕಡಿವಾಣ ಹಾಕಬಾರದು ಎಂದು ವಿನಂತಿಸಿ ರೈಲ್ವೇ ಯಾತ್ರಿಕರ ಸಂಘದ ಅಧ್ಯಕ್ಷ ಆರ್. ಎಲ್ ಡಯಾಸ್, ಕಾರ್ಯದರ್ಶಿ ಮಂಜುನಾಥ್ ಮಣಿಪಾಲ, ಜೋನ್ ರೆಬೆÇÉೊ, ಸುಂದರ್ ಕೋಟಿಯಾನ್, ಸತೀಶ್ ಎನ್. ಅವರು ಅಪರ ಜಿಲ್ಲಾಧಿಕಾರಿ ಅನುರಾಧಾ ಜಿ. ಅವರಿಗೆ ಮನವಿ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು
New Jersey: ಸ್ಥಳೀಯ ಶಾಪ್ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್