ಅಕ್ಕಿ ಮುಹೂರ್ತಕ್ಕೆ ಸಾವಯವ ಕೃಷಿ ಸ್ಪರ್ಶ


Team Udayavani, Jan 29, 2019, 12:50 AM IST

akki.jpg

ಉಡುಪಿ: ಶ್ರೀಕೃಷ್ಣ ಮಠದಲ್ಲಿ ನಡೆಯುವ ನಿತ್ಯಾನ್ನ ದಾನಕ್ಕೆ ಸಾವಯವ ಉತ್ಪನ್ನಗಳನ್ನು ಬಳಸಲು ಮುಂದಿನ ಪರ್ಯಾಯ ಶ್ರೀ ಅದಮಾರು ಮಠದ ಆಡಳಿತ ಚಿಂತನೆ ನಡೆಸಿದೆ. ಪರ್ಯಾಯಕ್ಕೆ ಮುನ್ನ ನಡೆಯುವ ಅಕ್ಕಿ ಮುಹೂರ್ತದ ವೇಳೆ ಈ ಪ್ರಕ್ರಿಯೆಗೆ ಚಾಲನೆ ದೊರಕಲಿದೆ.

ಈಗಾಗಲೇ ನಡೆದ ಬಾಳೆ ಮುಹೂರ್ತದಲ್ಲಿ ಚಾರ ಸಮೀಪದಲ್ಲಿ ಬಾಳೆ ಕೃಷಿ ನಡೆಸಲು ಚಾಲನೆ ನೀಡಿದ ಅದಮಾರು ಶ್ರೀಗಳು, ಜ. 30ರ ಬೆಳಗ್ಗೆ ನಡೆಯುವ ಅಕ್ಕಿ ಮುಹೂರ್ತದಲ್ಲಿ ಸಾವಯವ, ದೇಸೀ ಕೃಷಿಗೆ ಮಹತ್ವ ಕೊಡಲು ನಿರ್ಧರಿಸಿದ್ದಾರೆ.

ನೇರ ಖರೀದಿ
ಅದಮಾರು ಮಠದ ಆನಂದ ಸಮಿತಿ ಸದಸ್ಯರು ಕಾರ್ಕಳ, ಶಿರಸಿ ಮೊದಲಾದೆಡೆ ಈಗಾಗಲೇ ಇರುವ ಸಾವಯವ ಕೃಷಿಕರನ್ನು ಸಂಪರ್ಕಿಸಿದ್ದು ಬೀಜ ಬಿತ್ತನೆ ಸಮಯದೊಳಗೆ ಮತ್ತಷ್ಟು ಸಂಪರ್ಕ ಮಾಡುವ ಇರಾದೆ ಹೊಂದಿದ್ದಾರೆ. ರಾಜ್ಯದಲ್ಲಿ ಸುಮಾರು 120 ದೇಸೀ ಭತ್ತದ ತಳಿಗಳಿವೆ ಎನ್ನಲಾಗುತ್ತಿದೆ. ಇವುಗಳಲ್ಲಿ ಕೆಂಪಕ್ಕಿ, ಮಂಜುಗುಣಿ ಸಣ್ಣಕ್ಕಿ, ಪದ್ಮ ಮೊದಲಾದ 16 ತಳಿಗಳನ್ನು ಸಮಿತಿ ಗುರುತಿಸಿದೆ. ಕೃಷಿಕರು ಬೆಳೆದ ಅಕ್ಕಿಯನ್ನು ನೇರವಾಗಿ ಶ್ರೀಕೃಷ್ಣ ಮಠದಿಂದ ಖರೀದಿಸಲು ಚಿಂತನೆ ನಡೆಸಲಾಗಿದೆ. ಇದರಿಂದ ಮಧ್ಯ ವರ್ತಿಗಳ ಪಾತ್ರ ಇಲ್ಲವಾಗಿ ಕೃಷಿಕರಿಗೆ ಹೆಚ್ಚಿನ ಆದಾಯ ದೊರಕುತ್ತದೆ. ರಸಗೊಬ್ಬರ ರಹಿತವಾಗಿ ಬೆಳೆದ ಧಾನ್ಯ ಆರೋಗ್ಯಕ್ಕೂ ಪುಷ್ಟಿದಾಯಕ. ದೇವರ ನೈವೇದ್ಯಕ್ಕೆ ನಿತ್ಯ ಸುಮಾರು 60-70 ಕೆ.ಜಿ. ಅಕ್ಕಿ ಬೇಕು. ಇದನ್ನು ಕಟ್ಟಿಗೆಯಿಂದ ಬೇಯಿಸುತ್ತಾರೆ. ಸಾರ್ವಜನಿಕ ಸಂತರ್ಪಣೆಯ ಅನ್ನವನ್ನು ಬಾಯ್ಲರ್‌ಗಳಲ್ಲಿ ತಯಾರಿಸಲಾಗುತ್ತದೆ.

ದೇಸೀ ಕೃಷಿ ಪ್ರಕ್ರಿಯೆಗೆ ಚಾಲನೆ ನೀಡುವ ಅಕ್ಕಿ ಮುಹೂರ್ತದಲ್ಲಿ ಪರಂಪರಾಗತ ರಾಜ ಮೈಸೂರಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಆಗಮಿಸಲಿದ್ದಾರೆ. ಜ. 30ರ ಬೆಳಗ್ಗೆ 7.30ರಿಂದ 10.30ರ ವರೆಗೆ ಅದಮಾರು ಮಠದ ಆವರಣದಲ್ಲಿ ಸ್ವಾಮೀಜಿಯವರ ಸಮ್ಮುಖ ಅಕ್ಕಿ ಮುಹೂರ್ತ ನಡೆಯಲಿದೆ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.