ಪಡುಬಿದ್ರಿ: 1 ವರ್ಷದಿಂದ ಉರಿಯದ ಹೈಮಾಸ್ಟ್‌ ದೀಪಗಳು

 ಗುತ್ತಿಗೆದಾರ ಸಂಸ್ಥೆಯಿಂದ ನಿರ್ಲಕ್ಷ್ಯ

Team Udayavani, Feb 16, 2020, 5:29 AM IST

1502RA3E__1_1502MN__1

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಭಾಗದಲ್ಲಿ ಅಳವಡಿಸಲಾಗಿರುವ ಹೈ ಮಾಸ್ಟ್‌ ದೀಪಗಳು ಉರಿಯದೆ ವರ್ಷವೇ ಉರುಳಿದೆ. ಕತ್ತಲಾಗುತ್ತಿದ್ದಂತೆಯೇ ಸಂಚಾರಿಗಳು, ಪಾದಾಚಾರಿಗಳು ಸಂಚಾರಕ್ಕೆ ಪರದಾಡಬೇಕಾಗಿದೆ. ಆದ್ದರಿಂದ ರಾತ್ರಿ ಸಂಚಾರ ಇಲ್ಲಿ ಅಪಾಯಕಾರಿಯಾಗಿದೆ. ಈಗಾಗಲೇ ವಿದ್ಯುತ್‌ ಕಂಬಕ್ಕೂ ವಾಹನ ಬಡಿದು ಅಪಘಾತ ಸಂಭವಿಸಿದ ನಿದರ್ಶನಗಳಿವೆ.

ಬೀದಿದೀಪಗಳು ಇಲ್ಲದ್ದ ರಿಂದ ಪಡುಬಿದ್ರಿ ಕಲ್ಸಂಕದಿಂದ ಪೇಟೆಯ ಪ್ರದೇಶ ಹಾಗೂ ಪೇಟೆಯಿಂದ ಪಡುಬಿದ್ರಿ ಬೀಡುವರೆಗೆ ಸುಗಮ ಸಂಚಾರಕ್ಕೆ ಅನುಕೂಲವಾಗಿಲ್ಲ. ಸವೀಸ್‌ ರಸ್ತೆಗಳೂ ಪೂರ್ಣಗೊಳ್ಳದೇ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕಾಮಗಾರಿಯಲ್ಲಿನ ವಿಫ‌ಲತೆ, ವಿಳಂಬ ಜನರನ್ನು ಅಸುರಕ್ಷಿತ ಪರಿಸರಕ್ಕೆ ದೂಡಿದೆ. ಹೆದ್ದಾರಿಯ ಅಂಚೂ ಹೊಂಡಗಳಿಂದ ಕೂಡಿದ್ದು ಅಪಾಯವನ್ನು ಆಹ್ವಾನಿಸುತ್ತಿವೆ. ವಾಹನಗಳು ಬಂದಾಗ ಸರ್ವೀಸ್‌ ರಸ್ತೆ ನಿರ್ಮಾಣಕ್ಕಾಗಿ ಅಗೆದು ತೆರೆದಿರಿಸಿದ ಹೊಂಡಗಳು ಗಮನಕ್ಕೆ ಬಾರದೇ ಅಪಾಯ ಉಂಟಾಗುತ್ತಿದೆ. ಹೈಮಾಸ್ಟ್‌ ದೀಪಗಳನ್ನು ಸ್ಥಾಪಿಸಿದ್ದು ಬಿಟ್ಟರೆ ಅವುಗಳ ನಿರ್ವಹಣೆಯನ್ನು ಸಂಬಂಧಪಟ್ಟವರು ಮರೆತಂತಿದೆ ಎಂದು ಜನರು ಆರೋಪಿಸುತ್ತಾರೆ.

ಇದ್ದ ಸವಲತ್ತುಗಳೂ ಇಲ್ಲ
ವರ್ಷಾನುಗಟ್ಟಲೆ ಚತುಃಷ್ಪಥ ಹೆದ್ದಾರಿ ಮತ್ತು ಸರ್ವೀಸ್‌ ರಸ್ತೆಗಳನ್ನು ಮುಗಿಸದೇ ಇರುವುದು ಪಡುಬಿದ್ರಿ ಜನತೆಗೆ ಇನ್ನಿಲ್ಲದ ಸಮಸ್ಯೆಯಾಗಿ ಕಾಡುತ್ತಿದೆ. ಹೆದ್ದಾರಿ ಅವ್ಯವಸ್ಥೆಗೆ ಕಾರಣವಾದ ನವಯುಗ ನಿರ್ಮಾಣ ಕಂಪೆನಿಯನ್ನು ಕಪ್ಪು ಪಟ್ಟಿಗೂ ಸೇರಿಸಿಲ್ಲ. ಹೆದ್ದಾರಿಯಾಗಲಿದೆ, ಸರ್ವಿಸ್‌ ರಸ್ತೆ, ಉತ್ತಮ ದೀಪಗಳ ಕನಸನ್ನು ಅಂದು ಕಾಮಗಾರಿ ಆರಂಭದ ವೇಳೆ ಜನತೆ ಕಂಡಿದ್ದರು. ಆದರೆ ಈಗ ಹೆದ್ದಾರಿ ಕೆಲಸವೂ ಆಗಿಲ್ಲ. ಸ್ಥಳೀಯಾಡಳಿತ ಒದಗಿಸಿದ್ದ ಬೀದಿದೀಪಗಳನ್ನೂ ಕಿತ್ತು ಹಾಕಿ ಇದ್ದ ಸವಲತ್ತೂ ಇಲ್ಲದಂತಾಗಿದೆ. ಹಳೆಯದೇ ಒಳ್ಳೆಯದಿತ್ತು ಎಂದು ಜನತೆ ಮರು ನನೆನಪಿಸುವಂತಾಗಿದೆ. ಇನ್ನಾದರೂ ಸಂಬಂಧ±ಟ್ಟವರು ಎಚ್ಚೆತ್ತುಕೊಳ್ಳಬೇಕು ಎಂಬುದು ಆಗ್ರಹವಾಗಿದೆ.

ಕಾಮಗಾರಿ ಬಳಿಕ ಟೋಲ್‌ಗೆ ಸೇರ್ಪಡೆ
ಪಡುಬಿದ್ರಿಯ ಸುಮಾರು 3ಕಿ. ಮೀ ರಸ್ತೆಯು ಇನ್ನೂ ಪೂರ್ಣಗೊಂಡಿಲ್ಲ. ಕಲ್ಸಂಕ ಸೇತುವೆಯ ಕಾಮಗಾರಿ ಈಗಷ್ಟೇ ಆರಂಭಗೊಂಡಿದೆ. ಸರ್ವಿಸ್‌ ರಸ್ತೆ, ಸೇತುವೆ ಕಾಮಗಾರಿಗಳೆಲ್ಲವೂ ಪೂರ್ಣಗೊಂಡಾಗ ಈ ಹೈ ಮಾಸ್ಟ್‌ ದೀಪಗಳಿಗೆ ಕನೆಕ್ಷನ್‌ ನೀಡಬಹುದು. ಅಲ್ಲಿವರೆಗೂ ಪಡುಬಿದ್ರಿಯ 3 ಕಿ.ಮೀ. ಹೆದ್ದಾರಿಯು ಹೆಜಮಾಡಿ ಟೋಲ್‌ಗೆ ಒಳಪಡುತ್ತಿಲ್ಲ ಎಂದು ಹೆಜಮಾಡಿ ಟೋಲ್‌ಗೇಟ್‌ ಪ್ರಬಂಧಕ ಶಿವಪ್ರಸಾದ್‌ ರೈ ಹೇಳಿದ್ದಾರೆ.

ಟಾಪ್ ನ್ಯೂಸ್

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

14-

Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್‌ ಬಿಜೆಪಿಗೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.