ಪಡುಬಿದ್ರಿ ಹೆದ್ದಾರಿ: ಈ ಮಳೆಗಾಲದಲ್ಲೂ ಸಮಸ್ಯೆ ಭೀತಿ
Team Udayavani, May 6, 2019, 6:02 AM IST
ಪಡುಬಿದ್ರಿ: ಇಲ್ಲಿನ ಪೇಟೆಗೆ ಶಾಪವಾಗಿ ಪರಿಣಮಿಸಿರುವ, ಕುಂಟುತ್ತಿರುವ ಹೆದ್ದಾರಿ ಚತುಃಷ್ಪಥ ಕಾಮಗಾರಿ ಈ ಮಳೆಗಾಲಕ್ಕು ಮೊದಲು ಮುಗಿಯುವ ಲಕ್ಷಣವಿಲ್ಲ. ಪಡುಬಿದ್ರಿಯ ಸರ್ವಿಸ್ ರಸ್ತೆಗಳು ಮತ್ತು ಎರ್ಮಾಳು ಕಲ್ಸಂಕ ಭಾಗದ ನಿರ್ಮಾಣ ಹಂತದಲ್ಲಿರುವ ಎರಡು ಕಿರು ಸೇತುವೆಗಳ ಕಾಮಗಾರಿ ಇನ್ನೂ ತೆವಳುತ್ತಿವೆ.
ಕಳೆದ ವರ್ಷ ಮಳೆಗಾಲದಲ್ಲಿ ಕಲ್ಸಂಕ ಭಾಗದಲ್ಲಿ ನೆರೆ ನೀರು ಏರಿಕೆಯಾಗಿ ಪಾದೆಬೆಟ್ಟು ಪಟ್ಲ ಪ್ರದೇಶದಲ್ಲಿ ಶಾಲಾ ಬಾಲಕಿಯ ದುರಂತ ಅಂತ್ಯಕ್ಕೆ ಕಾರಣವಾಗಿತ್ತು. ಈ ಬಾರಿಯೂ ಪರಿಸ್ಥಿತಿ ಹೆಚ್ಚೇನೂ ಬದಲಾಗಿಲ್ಲ. ಹೊಸ ಸೇತುವೆಗಳಿಗಾಗಿ ಮಾಡಿರುವ ಅರ್ಧಂಬರ್ಧ ಕಾಮಗಾರಿಯಿಂದಾಗಿ ಕೃತಕ ನೆರೆ ಸೃಷ್ಟಿ ಸಾಧ್ಯತೆ ಇದೆ.
ರಂಗೋಲಿ ಅಡಿಯಿಂದ ಜಾರಿ ಕೊಳ್ಳುವ ಕಂಪೆನಿ ಜಾಯಮಾನ ಕಳೆದ ಡಿಸೆಂಬರ್, ಮಾರ್ಚ್ ಮತ್ತಿತರ ಗಡುವುಗಳನ್ನು ಹೇಳುತ್ತಲೇ ಸಾಗಿಬಂದ ಕಂಪೆನಿಗೆ ಹಿಂದಿನ ಕುಂದಾಪುರದ ಸಹಾಯಕ ಕಮಿಶನರ್ ಒಬ್ಬರು ಸಮನ್ಸ್ ಜಾರಿಗೊಳಿಸಿ ಕ್ರಮಕ್ಕೆ ಮುಂದಾದರೂ ಯಾವುದೇ ಫಲಿತವುಂಟಾಗಿಲ್ಲ. ಜತೆಗೆ ಹಣಕಾಸಿನ ತೊಂದರೆಯಿದೆ ಎಂದು ಕಂಪೆನಿ ರಂಗೋಲಿ ಅಡಿ
ತೂರಿಕೊಳ್ಳುತ್ತಿದೆ ಎಂದು ನಾಗರಿಕರು ಆರೋಪಿಸುತ್ತಾರೆ. ಈ ಬಗ್ಗೆ ಮಾತನಡಲು ನವಯುಗ ಅಧಿಕಾರಿ ಶಂಕರ್ ರಾವ್ ಸಂಪರ್ಕಕ್ಕೆ ಸಿಕ್ಕಿಲ್ಲ.
ಕಂಪೆನಿ ಜತೆ ಚರ್ಚೆ: ಕುಂದಾಪುರ ಎಸಿ ಈ ಕುರಿತಾಗಿ ಕುಂದಾಪುರದ ಸಹಾಯಕ ಕಮಿಶನರ್ ಅವರೊಂದಿಗೆ ಕೇಳಿದಾಗ ಕಂಪೆನಿಯವರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
MUST WATCH
ಹೊಸ ಸೇರ್ಪಡೆ
Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ