ಪಡುಕುದ್ರು: ದಶಕಗಳಿಂದ ಈಡೇರದ ಸಂಪರ್ಕ ಸೇತುವೆ

ಶಾಲಾ-ಕಾಲೇಜಿಗೆ ಹೋಗುವ ಮಕ್ಕಳಿಗೆ ದೋಣಿಯೇ ಆಸರೆ ; ಭತ್ತ, ಇನ್ನಿತರ ಸಾಮಗ್ರಿ ಸಾಗಾಟಕ್ಕೂ ತೊಂದರೆ

Team Udayavani, Dec 10, 2019, 5:03 AM IST

0912KDPP1

ಹೆಮ್ಮಾಡಿ: ಕಟ್ ಬೆಲ್ತೂರು ಗ್ರಾಮದ ಸುಳ್ಸೆಸಮೀಪ ಪಡುಕುದ್ರು ಎನ್ನುವ ಕುದ್ರು ಇದೆ. ಇಲ್ಲಿರುವುದು ಎರಡೇ ಮನೆಗಳಾದರೂ ಒಂದು ಮನೆಯಲ್ಲಿ 50 ಮಂದಿ ಹಾಗೂ ಮತ್ತೂಂದು ಮನೆ ಯಲ್ಲಿ 15 ಮಂದಿ ಒಟ್ಟು ಸೇರಿ 65 ಜನರಿದ್ದಾರೆ. ಹಲವು ದಶಕಗಳಿಂದ ಇಲ್ಲಿನ ಜನ ಕುದ್ರುವಿನಿಂದ ಸಂಪರ್ಕ ಸೇತುವೆಗೆ ಬೇಡಿಕೆಯಿಟ್ಟರೂ ಇನ್ನೂ ಆ ಕನಸು ಮಾತ್ರ ಈಡೇರಿಲ್ಲ.

ಪಡುಕುದ್ರುವಿನಲ್ಲಿ ನಂದಿ ದೇವಾಡಿಗ ಹಾಗೂ ಗೋಪಾಲ್‌ ಬಿ.ಕೆ. ಎಂಬುವರ ಎರಡು ಮನೆಗಳಿವೆ. ಇಲ್ಲಿನ ಎರಡು ಮನೆಗಳಲ್ಲೂ ಕೂಡು ಕುಟುಂಬ ವಿರುವುದು. ಇವರು ಪೇಟೆ ಅಥವಾ ಕುದ್ರುವಿನಿಂದ ಆಚೆ ಬರಬೇಕಾದರೆ ನದಿ ದಾಟಿಯೇ ಈಚೆ ಬರಬೇಕು. ಸೇತುವೆಯಿಲ್ಲದ ಕಾರಣ ದೋಣಿಯೇ ಆಸರೆಯಾಗಿದೆ.

20 ಎಕರೆ ವಿಸ್ತೀರ್ಣ
ಈ ಪಡುಕುದ್ರು ಅಂದಾಜು 20 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿಕೊಂಡಿದೆ. ಹಿಂದೆ ಇದಕ್ಕೂ ಹೆಚ್ಚು ವಿಸ್ತೀರ್ಣವಿದ್ದು, ಆದರೆ ನದಿಯ ನೀರಿನ ಸವಕಳಿಗೆ ಕುದ್ರು ವರ್ಷದಿಂದ ವರ್ಷಕ್ಕೆ ಕಿರಿದಾಗುತ್ತ ಬರುತ್ತಿದೆ. ಇದರಲ್ಲಿ 15 ಎಕರೆಗೂ ಮಿಕ್ಕಿ ಪ್ರದೇಶದಲ್ಲಿ ಭತ್ತ, ತೆಂಗು ಕೃಷಿಯನ್ನು ಮಾಡುತ್ತಾರೆ.

ಹಲವು ವರ್ಷಗಳ ಬೇಡಿಕೆ
ಇಲ್ಲಿಗೆ ಸೇತುವೆ ಸಂಪರ್ಕ ಕಲ್ಪಿಸುವ ಸಲುವಾಗಿ ಇಲ್ಲಿನ ಜನ ಹಲವು ವರ್ಷಗಳಿಂದ ಬೇಡಿಕೆಯಿಡುತ್ತಲೇ ಇದ್ದಾರೆ. ಪ್ರತಿ ಸಲ ಎಲ್ಲ ಚುನಾವಣೆ ಬಂದಾಗಲೂ ಜನಪ್ರತಿನಿಧಿಗಳು ಸೇತುವೆ ಮಾಡಿಕೊಡುವ ಭರವಸೆ ಕೊಡುತ್ತಾರೆ. ಆದರೆ ಅದು ಈ ವರೆಗೆ ಕಾರ್ಯರೂಪಕ್ಕೆ ಮಾತ್ರ ಬಂದಿಲ್ಲ. ಅಕ್ಕಮ್ಮ (90) ಹಾಗೂ ಸುಬ್ಬಿ (84) ಎನ್ನುವ ಹಿರಿಯರಿಬ್ಬರು ಹಲವು ವರ್ಷಗಳಿಂದ ಸೇತುವೆಗಾಗಿ ಹೋರಾಟ ನಡೆಸಿ, ಕೆಲವು ವರ್ಷಗಳ ಹಿಂದೆ ಕಾಲವಾದರು. ಆದರೆ ಸೇತುವೆ ಕನಸು ಮಾತ್ರ ನನಸಾಗಿಲ್ಲ.

ಕಟಾವಿಗೂ ಸಮಸ್ಯೆ
ಇಲ್ಲಿನ 20 ಎಕರೆಯ ಪೈಕಿ ಸುಮಾರು 15 ಎಕರೆಯಷ್ಟು ಪ್ರದೇಶದಲ್ಲಿ ಕೃಷಿ ಮಾಡುತ್ತಾರೆ. ಅದರಲ್ಲಿ ಹೆಚ್ಚಿನ ಭಾಗ ಗದ್ದೆಯಿದ್ದು, ಭತ್ತದ ಕೃಷಿ ಮಾಡಿದರೂ, ಕಟಾವಿಗೆ ಯಂತ್ರ ಬರಲು ನದಿಯ ನೀರಿನ ಮಟ್ಟ ಇಳಿಕೆಯಾಗುವವರೆಗೆ ಕಾಯಬೇಕು. ಇನ್ನು ಬೆಳೆದ ಭತ್ತವನ್ನು ಪೇಟೆಗೆ ದೋಣಿ ಮೂಲಕವೇ ಕೊಂಡು ಹೋಗಬೇಕಾಗಿದೆ. ಯಳೂರು- ತೋಪು ವಿನಲ್ಲಿರುವ ಡ್ಯಾಂನಿಂದಾಗಿ ಈಗ ಇಲ್ಲಿ ಎರಡು ಬೆಳೆ ಬೆಳೆಯುವುದು ಕಷ್ಟ. ಇದಲ್ಲದೆ ಮಾರ್ಚ್‌ ಅನಂತರ ನೀರಿನ ಸಮಸ್ಯೆ ಕೂಡ ಎದುರಾಗುತ್ತದೆ.

10 ವಿದ್ಯಾರ್ಥಿಗಳು
ಈ ಕುದ್ರುವಿನಿಂದ ಪ್ರತಿ ನಿತ್ಯ ಶಾಲಾ – ಕಾಲೇಜಿಗೆ ಹೋಗುವ 10 ಮಕ್ಕಳಿದ್ದು, ಅವರು ದೋಣಿಯಲ್ಲಿಯೇ ಬಂದು ಹೋಗಬೇಕು. ಬೇಸಗೆ ಕಾಲದಲ್ಲಾದರೂ ಪರಾÌಗಿಲ್ಲ. ಆದರೆ ಮಳೆಗಾಲದಲ್ಲಿ ನದಿ ತುಂಬಿ ಹರಿಯುತ್ತಿರುವುದರಿಂದ ಕೆಲವೊಮ್ಮೆ ದೋಣಿ ಮೂಲಕವೂ ಸಂಚರಿಸುವುದು ಕಷ್ಟ. ಇನ್ನು ಇಲ್ಲಿಂದ ಶಿಕ್ಷಕಿಯೊಬ್ಬರು ಪ್ರತಿ ದಿನ ಸುಳೆÕ ಶಾಲೆಗೆ ಹೋಗಿ ಬರುತ್ತಿದ್ದಾರೆ. ಇದಲ್ಲದೆ ಅನೇಕ ಮಂದಿ ಹೋಟೆಲ್‌ ಮತ್ತಿತರೆಡೆಗಳಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆಲ್ಲ ಈ ದೋಣಿಯೊಂದೇ ಆಧಾರವಾಗಿದೆ.

ಈ ಸಲವಾದರೂ ಮಾಡಿಕೊಡಲಿ
ಹಲವು ವರ್ಷಗಳಿಂದ ಸೇತುವೆಗಾಗಿ ಬೇಡಿಕೆ ಕೊಡುತ್ತಲೇ ಇದ್ದೇವೆ. ಈ ಸಲ ವಾದರೂ ಮಾಡಿಕೊಡಲಿ. ಇಲ್ಲಿರುವ ಎರಡು ಮನೆಗಳಿಗೆ 2 ಸ್ವಂತದ ದೋಣಿ ಗಳಿವೆ. ಅದು ಕೂಡ ಈಗ ತೂತಾಗುತ್ತಿದ್ದು, ಅಪಾಯಕಾರಿಯಾಗಿದೆ. ಪಂ. ನಿಂದ ಕನಿಷ್ಠ ದೋಣಿಗಳನ್ನಾದರೂ ನೀಡಲಿ. ಯಾರಿ ಗಾದರೂ ಅನಾರೋಗ್ಯ ಉಂಟಾದರೂ ತುರ್ತಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತುಂಬಾ ಸಮಸ್ಯೆಯಾಗುತ್ತಿದೆ.
– ಗೋಪಾಲ್‌ ಬಿ.ಕೆ., ಪಡುಕುದ್ರು

ಎಲ್ಲದಕ್ಕೂ ಸಮಸ್ಯೆ
ನಾವು ಏನೇ ಬೇಕಾದರೂ ನದಿ ದಾಟಿ ಪೇಟೆಗೆ ಬರಬೇಕು. ಸೇತುವೆಯಿಲ್ಲದ ಕಾರಣ ಎಲ್ಲದಕ್ಕೂ ಸಮಸ್ಯೆಯಾಗುತ್ತಿದೆ. ಶಾಲೆಗೆ ಹೋಗುವ ಮಕ್ಕಳು, ಕೆಲಸಕ್ಕೆ ಹೋಗುವವರಿಗೆಲ್ಲ ಕಷ್ಟ. ಭತ್ತ ಅಂಗಡಿಗೆ ಕೊಂಡು ಹೋಗಬೇಕಾದರೂ ದೋಣಿಯಲ್ಲಿಯೇ ಹೋಗಬೇಕು. ಈ ಬಗ್ಗೆ ಈಗಿನ ಹಾಗೂ ಹಿಂದಿನ ಶಾಸಕರಿಗೆಲ್ಲ ಮನವಿ ಮಾಡಿದ್ದೇವು. ಜಿ.ಪಂ., ಗ್ರಾ.ಪಂ. ಸದಸ್ಯರಿಗೂ ಮನವಿ ಸಲ್ಲಿಸಿದ್ದೇವೆ.
– ರಮೇಶ್‌ ದೇವಾಡಿಗ,
ಪಡುಕುದ್ರು ನಿವಾಸಿ

ಖಂಡಿತ ಮಾಡ್ತೇನೆ
ಈಗಾಗಲೇ ಕ್ಷೇತ್ರದ ಅನೇಕ ಕಡೆಗಳ ರಸ್ತೆ, ಸೇತುವೆ ಬೇಡಿಕೆಗಳಿಗೆ ಅನುದಾನ ಮಂಜೂರುಗೊಳಿಸಲಾಗಿದೆ. ಸುಳೆÕಯ ಪಡುಕುದ್ರುವಿನ ಜನರ ಸೇತುವೆಯಿಲ್ಲದೆ ಅನುಭವಿಸುತ್ತಿರುವ ಸಮಸ್ಯೆ ಕುರಿತು ಅರಿವಿದ್ದು, ಖಂಡಿತ ಸೇತುವೆ ನಿರ್ಮಾಣ ಬಗ್ಗೆ ಗಮನಹರಿಸಲಾಗುವುದು.
– ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.