ಪಲಿಮಾರು ಪರ್ಯಾಯ: ಪೈಂಟಿಂಗ್‌-ಸಿವಿಲ್‌ ಕೆಲಸ ಶೀಘ್ರವೇ ಪೂರ್ಣ


Team Udayavani, Jan 4, 2018, 12:04 PM IST

04-19.jpg

ಉಡುಪಿ: ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಪರ್ಯಾಯದ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠ ಹಾಗೂ ಪಲಿಮಾರು ಮಠದಲ್ಲಿ  ಪೈಂಟಿಂಗ್‌ ಕಾರ್ಯ ನಡೆಯುತ್ತಿದೆ. ಈಗಾಗಲೇ ಶೇ. 90 ರಷ್ಟು ಪೈಂಟಿಂಗ್‌ ಪೂರ್ಣಗೊಂಡಿದೆ. ಜ. 18ರ ಶ್ರೀಗಳ ಪರ್ಯಾಯ ಪೀಠಾರೋಹಣದ ದಿನ ಹಲವು ರೀತಿಯಲ್ಲಿ ಅಲಂಕಾರ ಗೊಳಿಸಲು ಸಿದ್ಧತೆ ನಡೆಯುತ್ತಿದೆ. 

ಎರಡು ತಿಂಗಳಿನಿಂದ ನಿರಂತರ ಕೆಲಸ 
ಪರ್ಯಾಯದ ಹಿನ್ನೆಲೆಯಲ್ಲಿ ಪೈಂಟಿಂಗ್‌ ಹಾಗೂ ಇತರ ಕೆಲವು ಸಿವಿಲ್‌ ಕಾಮಗಾರಿಗಳು ಕಳೆದ ಎರಡು ತಿಂಗಳಿನಿಂದ ನಡೆಯುತ್ತಿದೆ. ಶ್ರೀಕೃಷ್ಣ ಮಠ, ಭೋಜನ ಶಾಲೆ, ಒಳಭಾಗದ ಕೆಲವು ಛತ್ರಗಳಲ್ಲಿ ಪೈಂಟಿಂಗ್‌ ಪೂರ್ಣಗೊಂಡಿದೆ. ಪಲಿಮಾರು ಮಠದ ಹಿಂಭಾಗದಲ್ಲಿ ಸಿವಿಲ್‌ ಕೆಲಸ ಹಾಗೂ ಪೈಂಟಿಂಗ್‌ ಬಾಕಿಯಿದೆ. ಮೂರ್‍ನಾಲ್ಕು ದಿನಗಳ ಒಳಗಾಗಿ ಎಲ್ಲ ಕೆಲಸಗಳು ಪೂರ್ಣಗೊಳ್ಳಲಿದೆ. ಪ್ರತಿದಿನ 15 ರಿಂದ 20 ಮಂದಿ ಕಾರ್ಮಿಕರು ಈ ಕೆಲಸದಲ್ಲಿ ತೊಡಗಿದ್ದಾರೆ.  25-30 ಲಕ್ಷ ರೂ. ವೆಚ್ಚದಲ್ಲಿ ಪೈಂಟಿಂಗ್‌ ನಡೆಸಲಾಗಿದೆ.  ವೆಂಕಟೇಶ್‌ ಶೇಟ್‌, ಆನಂದ್‌ ಹಾಗೂ ಜನಾರ್ದನ್‌ ಅವರ ನೇತೃತ್ವದಲ್ಲಿ ಪೈಂಟಿಂಗ್‌ ನಡೆಯುತ್ತಿದೆ.  

ಭಜನಾ ತಂಡದ ವಾಸ್ತವ್ಯಕ್ಕೆ ವ್ಯವಸ್ಥೆ
ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ನಿರಂತರ ಭಜನಾ ಸೇವೆ ನಡೆಯಲಿದ್ದು, ಭಜನಾ ಸೇವೆ ನಡೆಸಿಕೊಡಲು ವಿವಿಧ ಭಾಗಗಳಿಂದ ಆಗಮಿಸುವವರಿಗೆ ವಾಸ್ತವ್ಯಕ್ಕಾಗಿ ಪಲಿಮಾರು ಮಠದ ಹಿಂಭಾಗದಲ್ಲಿರುವ ಸ್ಥಳವನ್ನು ವಾಸ್ತವ್ಯಕ್ಕೆ ಪೂರಕವಾಗುವಂತೆ ನಿರ್ಮಾಣ ಮಾಡಲಾಗುತ್ತಿದೆ. ಶೌಚಾ ಲಯ, ಸ್ನಾನಗೃಹ ನಿರ್ಮಾಣದ ಕಾಮ ಗಾರಿಯೂ ನಡೆಯುತ್ತಿದೆ. ವಿದ್ಯಾಮಾನ್ಯ ಸಭಾಗೃಹದಲ್ಲೂ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಕೆಲಸ ಶೀಘ್ರವೇ ಮುಗಿಯಲಿದೆ. ಸುಮಾರು 12 ಸಾವಿರ ಲೀ. ನೀರು ತುಂಬಿಸುವಂತಹ ನೀರಿನ ಟ್ಯಾಂಕ್‌ ಕೂಡ ಮಠದ ಹಿಂಭಾಗದಲ್ಲಿ ನಿರ್ಮಿಸಲಾಗುತ್ತಿದೆ. 

ಪಲಿಮಾರು ಮಠದ ಮುಂಭಾಗದ ದ್ವಾರದ ಎರಡು ಭಾಗಗಳಲ್ಲಿ  ಪುರುಷೋತ್ತಮ ಅಡ್ವೆ ಅವರಿಂದ ಜಯ-ವಿಜಯ ದ್ವಾರಪಾಲಕ ರಚನೆಯಾಗಲಿದೆ. ವಿಜಯ ನಗರದ ಕಾವಿ ಚಿತ್ರಕಲಾ ಶೈಲಿಯಲ್ಲಿ ಇದು ಮೂಡಿಬರಲಿದೆ. ಮೂರ್‍ನಾಲ್ಕು ದಿನದ ಒಳಗಾಗಿ ಚಿತ್ರಕಲಾ ರಚನೆ ಮುಗಿಯಲಿದೆ. 

14 ವರ್ಷಗಳ ಹಿಂದೆ ನಡೆದ ಪಲಿಮಾರು ಶ್ರೀಗಳ ಮೊದಲ ಪರ್ಯಾಯದ ಅವಧಿಯಲ್ಲಿ ಪೈಂಟಿಂಗ್‌ ಹಾಗೂ ಇತರ ಕೆಲವು ಸಿವಿಲ್‌ ಕಾಮಗಾರಿಯನ್ನೂ ನಾವೇ ನಡೆಸಿದ್ದೇವೆ. ಈ ಬಾರಿಯೂ ನಮಗೆ ಜವಾಬ್ದಾರಿ ನೀಡಿದ್ದಾರೆ. ಎರಡು ತಿಂಗಳಿನಿಂದ ಕೆಲಸ ನಡೆಯುತ್ತಿದ್ದು, ಕೆಲವು ದಿನ ರಾತ್ರಿಯೂ ಕೆಲಸ ನಡೆಸಿದ್ದೇವೆ. ಹೆಚ್ಚಿನ ಕೆಲಸ ಮುಗಿದಿದೆ. 
ವೆಂಕಟೇಶ್‌ ಶೇಟ್‌, ಪೈಂಟಿಂಗ್‌ ಉಸ್ತುವಾರಿ

ಟಾಪ್ ನ್ಯೂಸ್

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ

Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.