ಪಲಿಮಾರು ಮಠ: ಉತ್ತರಾಧಿಕಾರಿ ಸ್ವೀಕಾರದ ವಿವಿಧ ಪ್ರಕ್ರಿಯೆ ಆರಂಭ
Team Udayavani, May 9, 2019, 6:00 AM IST
ಶಿಷ್ಯಸ್ವೀಕಾರದ ಅಂಗವಾಗಿ ಶ್ರೀ ವಿದ್ಯಾಧೀಶತೀರ್ಥರು ಶೈಲೇಶ ಉಪಾಧ್ಯಾಯರಿಗೆ ಮಂತ್ರಾಕ್ಷತೆ ನೀಡಿದರು.
ಉಡುಪಿ: ಶ್ರೀ ಪಲಿಮಾರು ಮಠದ ಶ್ರಿ ಯೋಗದೀಪಿಕಾ ವಿದ್ಯಾಪೀಠದಲ್ಲಿ ಅಧ್ಯಯನ ಮಾಡಿದ ಕಂಬ್ಲಿಕಟ್ಟ ಶೈಲೇಶ ಉಪಾಧ್ಯಾಯ ವಟುವಿಗೆ ಪ್ರಣವೋಪದೇಶ ಪುರಸ್ಸರ ಸನ್ಯಾಸ ದೀಕ್ಷೆ ನೀಡಿ ಪಲಿಮಾರು ಮಠಕ್ಕೆ ಉತ್ತರಾಧಿಕಾರಿಯಾಗಿ ನಿಯೋಜಿಸಲಿರುವ ಪೂರ್ವಭಾವಿ ಕಾರ್ಯಕ್ರಮ ಬುಧವಾರ ಶ್ರೀಕೃಷ್ಣ ಮಠದಲ್ಲಿ ನಡೆಯಿತು.
ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಶೈಲೇಶ ಉಪಾಧ್ಯಾಯರಿಗೆ ಶಿಷ್ಯ ಸ್ವೀಕಾರದ ಮೊದಲ ಪ್ರಕ್ರಿಯೆಯಾಗಿ ಅನುಗ್ರಹ ಮಂತ್ರಾಕ್ಷತೆ ನೀಡಿದರು.
ಶ್ರೇಯ ಪ್ರಾಪ್ತಿಗಾಗಿ ಗಣಪತಿ ಹವನ, ಬ್ರಹ್ಮಕೂರ್ಚ, ತಿಲಹೋಮ, ಕೂಷ್ಮಾಂಡ ಹೋಮ, ಪವಮಾನ ಹೋಮ, ನವಗ್ರಹ ಹೋಮ, ಸಂಜೀವಿನಿ ಮೃತ್ಯುಂಜಯ ಮೊದಲಾದ ಸರ್ವಪ್ರಾಯಶ್ಚಿತ್ತ ಹೋಮಗಳನ್ನು ನಡೆಸಲಾಯಿತು. ಇದಕ್ಕೂ ಮುನ್ನ ಶೈಲೇಶ ಅವರು ಅಧ್ಯಯನ ನಡೆಸಿದ ಋಗ್ವೇದ ಮಂಗಲೋತ್ಸವವನ್ನು ನಡೆಸಿದರು. ಈ ಸಂದರ್ಭದಲ್ಲಿ ವಟುವಿನ ಮಾತಾ ಪಿತೃಗಳು ಹಾಗೂ ಕುಟುಂಬಿಕರು ಉಪಸ್ಥಿತರಿದ್ದರು. ಇನ್ನು ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ಜರಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ