ಪಾಂಬೂರು: ಮನೆಗೆ ಸಿಡಿಲು ಬಡಿದು ಬೆಂಕಿ; ಅಪಾರ ಹಾನಿ
Team Udayavani, May 30, 2018, 12:09 PM IST
ಶಿರ್ವ: ಮೂಡುಬೆಳ್ಳೆ ಗ್ರಾ.ಪಂ. ವ್ಯಾಪ್ತಿಯ ಪಾಂಬೂರು ಕೆಥೋಲಿಕ್ ಹಿ.ಪ್ರಾ. ಶಾಲೆಯ ಬಳಿಯ ನಿವಾಸಿ ಜಾರ್ಜ್ ಸಲ್ದಾನ ಅವರ ಮನೆಗೆ ಮಂಗಳವಾರ ಮಧ್ಯಾಹ್ನ ಸಿಡಿಲು ಬಡಿದು ಬೆಂಕಿ ತಗಲಿ ಅಪಾರ ಹಾನಿಯಾಗಿ ಸುಮಾರು 10 ಲ. ರೂ. ನಷ್ಟ ಸಂಭವಿಸಿದೆ.
ಸಿಡಿಲಿನ ರಭಸಕ್ಕೆ ಆರ್ಸಿಸಿ ಮನೆಗೆ ಬೆಂಕಿ ತಗಲಿದ್ದು, ಮನೆಯಲ್ಲಿದ್ದ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ. ಮೇಲ್ಛಾವಣಿ ಒಡೆದು ಮಳೆಗೆ ಸೋರಲಾರಂಭಿಸಿದೆ. ಮನೆಯ ಹಾಲ್ನಲ್ಲಿದ್ದ ಪೀಠೊಪಕರಣಗಳು, ಟಿವಿ, 2 ಲ್ಯಾಪ್ಟಾಪ್, ಇನ್ವರ್ಟರ್, ವಿದ್ಯುತ್ ವಯರಿಂಗ್ ಸಂಪೂರ್ಣಸುಟ್ಟು ಹೋಗಿವೆ. ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿದ್ದು ಮನೆಯಲ್ಲಿದ್ದ ಬಟ್ಟೆಬರೆಗಳು, ದಾಖಲೆಪತ್ರಗಳು ನಾಶವಾಗಿವೆ. ಕಿಟಿಕಿಯ ಬಾಗಿಲಿನ ಗ್ಲಾಸುಗಳು ಪುಡಿಯಾಗಿದ್ದು ಮನೆಯ ಗೋಡೆ ಕಪ್ಪು ಬಣ್ಣಕ್ಕೆ ತಿರುಗಿದೆ.
ತಪ್ಪಿದ ದುರಂತ
ಮನೆಯಲ್ಲಿ ಪತಿ, ಪತ್ನಿ, ಮಗ ವಾಸವಿದ್ದು, ಘಟನೆಯ ವೇಳೆ ಕಾರ್ಯನಿಮಿತ್ತ ಶಂಕರಪುರಕ್ಕೆ ತೆರಳಿದ್ದರು. ಮಧ್ಯಾಹ್ನದ ವೇಳೆ ಮನೆಗೆ ವಾಪಾಸು ಬರುವಷ್ಟರಲ್ಲಿ ಮನೆಗೆ ಸಿಡಿಲು ಬಡಿದು ಬೆಂಕಿ ಆವರಿಸಿತ್ತು. ತತ್ಕ್ಷಣ ನೆರೆಕರೆಯವರೊಂದಿಗೆ ಸೇರಿ ಬೆಂಕಿ ನಂದಿಸಿದ್ದರು. ಘಟನೆ ನಡೆದ ಸಮಯದಲ್ಲಿ ಮನೆಯಲ್ಲಿ ಯಾರೂ ಇರದ ಕಾರಣ ಭಾರೀ ದುರಂತವೊಂದು ತಪ್ಪಿದೆ.
ಕಾಪು ತಹಶೀಲ್ದಾರ್ ಜಾನ್ ಪ್ರಕಾಶ್ ರೊಡ್ರಿಗಸ್, ಕಾಪು ಕಂದಾಯ ನಿರೀಕ್ಷಕ ರವಿಶಂಕರ್,ಬೆಳ್ಳೆ ಗ್ರಾ.ಪಂ. ಪಿಡಿಒ ದಯಾನಂದ ಬೆಣ್ಣೂರ್, ಬೆಳ್ಳೆ ಗ್ರಾಮ ಕರಣಿಕ ಪ್ರದೀಪ್ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ